ಆಲ್ ದಿ ಬೆಸ್ಟ್ to ಪಾಸಿಟಿವ್ ಪಿಕ್ಚರ್

ಗೆಳೆಯ ಶಶಿಕರ ಪಾತುರರದ್ದು ಸಿನಿಮಾ ಪತ್ರಿಕೋದ್ಯಮದಲ್ಲಿ ಚಿರಪರಿಚಿತ ಹೆಸರು. ಅವರು ಹೊಸ ಪ್ರಯತ್ನವೊಂದಕ್ಕೆ ಕೈ ಹಾಕಿದ್ದಾರೆ. ಸಿನಿಮಾ ಜಗತ್ತಿನ ಮೂಲೆ ಮೂಲೆಗಳಿಂದ ಪಾಸಿಟಿವ್ ಸುದ್ದಿಗಳನ್ನು ಹೆಕ್ಕಿ ತಂದು ತಮ್ಮ ಹೊಸ youtube ಚಾನೆಲ್ ಮೂಲಕ ಉಣಬಡಿಸಲಿದ್ದಾರೆ.

ಶಿವ ತನ್ನ ಇಬ್ಬರು ಮಕ್ಕಳಾದ ಗಣೇಶ ಹಾಗು ಸುಬ್ರಹ್ಮಣ್ಯ ರನ್ನು ಪರೀಕ್ಷಿಸಲೋಸುಗ ಯಾರು ಈ ವಿಶ್ವವನ್ನು ಮೊದಲು ಸುತ್ತಿ ಬರುವಿರೋ ನೋಡೋಣ ಎಂದು ಪಂದ್ಯ ಏರ್ಪಡಿಸಿದನಂತೆ. ಸುಬ್ರಹ್ಮಣ್ಯ ನವಿಲೇರಿ ವಿಶ್ವ ಸುತ್ತಲು ಹೊರಟರೆ, ಗಣೇಶ ಶಿವನನ್ನೇ ಒಂದು ಸುತ್ತು ಬಂದು, ನೀನೆ ವಿಶ್ವ. ನಿನ್ನ ಸುತ್ತಿದರೆ ಇಡೀ ವಿಶ್ವವನ್ನು ಸುತ್ತಿದಂತಲ್ಲವೇ? ಎಂದು ಕೇಳಿದ ಕತೆ ನಮಗೆಲ್ಲ ಗೊತ್ತು. ಹಾಗೆಯೇ ಸಿನಿಮಾ ದುನಿಯಾದಲ್ಲಿ ಒಮ್ಮೆ ಸುತ್ತಾಡಬೇಕೆಂದರೆ ನೀವು ಶಶಿಕರ ಪಾತುರರ ಚಾನೆಲ್ ಅನ್ನು ಒಮ್ಮಿ ಸುತ್ತಿ ಬಂದರೆ ಸಾಕು. ಮೂಲೆ ಮೂಲೆಯ ತಾಜಾ ಸುದ್ದಿಗಳ ದರ್ಶನವಾಗುವುದು ಪಕ್ಕಾ..

ಪಾಸಿಟಿವ್ ಪಿಕ್ಚರ್ youtube ಚಾನೆಲ್ ಬೃಹತ್ ಹೆಮ್ಮರವಾಗಿ ಬೆಳೆಯಲಿ ಎಂದು ಚಿತ್ರೋದ್ಯಮ.ಕಾಂ ತಂಡದ ಹಾರೈಕೆಗಳು…

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply