ಯಾವುದೇ ಸಂದರ್ಭಕ್ಕೆ ಅಣ್ಣಾವ್ರ ಒಂದು ಫೋಟೋ ಬೇಕೂಂತ ಹುಡುಕಿದಾಗ ಸಿಗುವ ಫೋಟೋಗಳಲ್ಲಿ ಫೈನಲ್ ಆಗೋದು ಈ ಚಿತ್ರ…
ಅದು ಅಣ್ಣಾವ್ರ ಕುಟುಂಬ ಮದರಾಸಿನಲ್ಲಿ ನೆಲೆಸಿದ್ದ ಸಮಯ…
ಯಾವುದೋ ಒಂದು ಪ್ರಾಜೆಕ್ಟಿಗೆ ಅವರು ವರದಪ್ಪನವರೊಂದಿಗೆ ಬೆಂಗಳೂರಿಗೆ ಬಂದು ರೇಸ್ ಕೋರ್ಸ್ ಸಮೀಪದ ಜನಾರ್ಧನ ಹೋಟೆಲಿನಲ್ಲಿ ಉಳಿದುಕೊಂಡಿದ್ದರಂತೆ…
ರಾತ್ರಿ ಊಟಮುಗಿಸಿ ಹಾಗೇ ಒಂದುಸುತ್ತು ವಾಯುವಿಹಾರ ಹೊರಟಿದ್ದಾರೆ…
ಸವಾರಿ ಅವೆನ್ಯೂರೋಡು ತಲುಪಿದಾಗ ಎಂಪೈರ್ ಸ್ಟುಡಿಯೋ ಬಾಲ್ಕನಿಯ ಮೇಲೆ ನಿಂತಿದ್ದ ಮಾಲಿಕರು ಅಣ್ಣಾವ್ರನ್ನ ಕರೆದಿದ್ದಾರೆ…
ಲೋಕಾಭಿರಾಮ ಮಾತುಕತೆಯ ನಡುವೆ ಅಣ್ಣಾವ್ರ ಕಣ್ಣು ಹೊಸಮಾದರಿ ಕೆಮೆರಾದ ಮೇಲೆ ಬಿದ್ದಿದೆ…ಮಾಲಿಕರು ಅದರ ಬಗ್ಗೆ ವಿವರಿಸಿ ‘ಬನ್ನಿ ಕೂತ್ಕೊಳಿ…ಇದರಲ್ಲಿ ನಿಮ್ಮದೊಂದು ಸ್ನ್ಯಾಪ್ ತೆಗೆಯೋಣ’ ಅಂದಿದಾರೆ…ರಿಲ್ಯಾಕ್ಸ್ ಮೂಡಿನಲ್ಲಿದ್ದ ಅಣ್ಣಾವ್ರ ಸಹಜ ಸುಂದರ ರೂಪ ಆ ಅಮೃತ ಘಳಿಗೆಯಲ್ಲಿ ಸೆರೆಸಿಕ್ಕಿದೆ…
ಲೇಖಕರು
ಸುದರ್ಶನ ರೆಡ್ಡಿ .D.N.