ಡಾ ರಾಜ್ ಪ್ರಶಸ್ತಿಗಳ ಒಂದು ನೋಟ

ಒಂಭತ್ತು ಬಾರಿ ಅತ್ಯತ್ತಮ ನಟ ರಾಜ್ಯ ಪ್ರಶಸ್ತಿ ಪಡೆದ ಏಕೈಕ ನಟ ಡಾ: ರಾಜ್

 ಡಾ: ರಾಜ್ ಕುಮಾರ್ ಕನ್ನಡ ಚಿತ್ರ ಜಗತ್ತಿನಲ್ಲಿ ತಮ್ಮ ಅಭಿನಯ ಸಾಮರ್ಥ್ಯದಿಂದ ಒಂಭತ್ತು ಬಾರಿ ಅತ್ಯತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ ಏಕೈಕ ನಟ.

1) ಮೊದಲ ಬಾರಿ ಅತ್ಯತ್ತಮ ನಟ ಗೌವರ :  ಸರಕಾರ ಪೂರ್ಣ ಪ್ರಮಾಣದಲ್ಲಿ 1967-68 ರಲ್ಲಿ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿದಾಗ, ಮೊದಲ ಬಾರಿಗೆ ಅತ್ಯುತ್ತಮ ನಟನೆಂಬ ಗೌರವಕ್ಕೆ ಪಾತ್ರರಾದವರು ಡಾ: ರಾಜ್ ಕುಮಾರ್. ಬಂಗಾರದ ಹೂವು ಚಿತ್ರದ ಅಭಿನಯಕ್ಕೆ ಮೊದಲ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ರಾಜ್ ಕುಮಾರ್ ಇಂತಹ ಪ್ರಶಸ್ತಿ ಪಡೆದ ಮೊದಲಿಗರೆಂಬ ಹೆಗ್ಗೆಳಿಕೆಗೆ ಭಾಜನರಾದರು.

2) ಕುಲಗೌರವಕ್ಕೆ ಎರಡನೇ ಬಾರಿ : 1971-72 ರಲ್ಲಿ ಪ್ರಥಮ ಬಾರಿಗೆ ತಂದೆ, ಮಗ, ಮೊಮ್ಮಗ ಹೀಗೆ ಮೂರು ಪಾತ್ರಗಳಲ್ಲಿ ಅತ್ಯುತ್ತಮವಾಗಿ ಅಭಿನಯಿಸಿ ಚಿತ್ರ ರಸಿಕರ ಮನಗೆದ್ದ ರಾಜ್ ಕುಮಾರ್ ರವರು ಈ ಚಿತ್ರಕ್ಕೆ ಎರಡನೇ ಬಾರಿ ಅತ್ಯುತ್ತಮ ನಟ ಪ್ರಶಸ್ತಿಗೆ ಪುರಸ್ಕ್ರತರಾದರು.

3) ಭಕ್ತ ಕುಂಬಾರ ಅಭಿನಯಕ್ಕೆ ಮೂರನೇ ಬಾರಿ : ಭಕ್ತ ಕುಂಬಾರ ಚಿತ್ರದಲ್ಲಿ ಭಾವಪೂರ್ಣ ಅಭಿನಯಕ್ಕಾಗಿ 1974-75 ರಲ್ಲಿ ಮೂರನೇ ಬಾರಿ ಡಾ: ರಾಜ್ ರವರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.

4) ಬಬ್ರುವಾಹನ ಚಿತ್ರಕ್ಕೆ ನಾಲ್ಕನೆ ಬಾರಿ : ಹುಣಸೂರು ಕೃಷ್ಣಮೂರ್ತಿ ನಿರ್ದೇಶನದಲ್ಲಿ ದ್ವಿಪಾತ್ರಗಳಲ್ಲಿ ಬಬ್ರುವಾಹನ ಚಿತ್ರದಲ್ಲಿ ಅಮೋಘವಾಗಿ ಅಭಿನಯಿಸಿದ ಡಾ: ರಾಜ್ ರವರು ನಾಲ್ಕನೆ ಬಾರಿಗೆ 1976-77 ನೇ ಸಾಲಿನ ರಾಜ್ಯ ಸರಕಾರದಿಂದ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಾಚಿಕೊಂಡರು.

5) ಹೊಸ ಬೆಳಕು ಚಿತ್ರಕ್ಕೆ ಐದನೇ ಬಾರಿ : ವಾಣಿ ರವರ ಕಾದಂಬರಿ ಆಧಾರಿಸಿದ ಚಿತ್ರ ಹೊಸ ಬೆಳಕು ಚಿತ್ರದ ಅಭಿನಯಕ್ಕೆ ಡಾ: ರಾಜ್ ರವರು ಐದನೆ ಬಾರಿಗೆ ಶ್ರೇಷ್ಠ ನಾಯಕ ನಟನಾಗಿ ಪ್ರಶಸ್ತಿಯನ್ನು 1981-82 ರಲ್ಲಿ ತಮ್ಮದಾಗಿಸಿಕೊಂಡರು.

6) ಹಾಲು ಜೇನು ಚಿತ್ರಕ್ಕೆ ಆರನೇಯ ಬಾರಿ : : ಸಿಂಗೀತಂ ಶ್ರೀನಿವಾಸ ರಾವ್ ರವರ ಹಾಲುಜೇನು ಚಿತ್ರದಲ್ಲಿ ಡಾ: ರಾಜ್ ರವರ ಭಾವಪೂರ್ಣ ಅಭಿನಯಕ್ಕಾಗಿ 1982-83 ಸಾಲಿನಲ್ಲಿ ಆರನೆಯ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡರು.

ಮುಂದುವರಿಯುವುದು

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply