ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಪಯಣ ಪ್ರಾರಂಭಿಸಿದ ನೀನಾಸಂ ಸತೀಶ್, ಪೂರ್ಣಪ್ರಮಾಣದ ನಾಯಕನಾದ್ರು, ನಿರ್ಮಾಣಕ್ಕು ಕೈ ಹಾಕಿ ಯಶಸ್ಸು ಕಂಡು ಇದೀಗ ಮತ್ತೊಂದು ಮೆಟ್ಟಿಲನ್ನ ಎರಲಿದ್ದಾರೆ. ತಮಿಳನ ಖ್ಯಾತ ನಟ ನಿರ್ದೇಶಕರಾದ ಸಸಿಕುಮಾರ ಜೊತೆಗೆ “ಪಗೈವನಕ್ಕೂ ಅರುಳ್ ವೈ” ಅನ್ನೋ ಸಿನಿಮಾದಲ್ಲಿ ನಟಿಸಲಿದ್ದಾರೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಹುಡುಗರು, ರಾಜಹುಲಿ, ಯಾರೇ ಕೂಗಡಲಿ ಸಿನಿಮಾಗಳ ಮೂಲ ತಮಿಳು ಭಾಷೆಯದಾಗಿದ್ದು ಅವುಗಳಿಲ್ಲ ಸಸಿಕುಮಾರರೆ ನಾಯಕರು. ಸಸಿಕುಮಾರ ಅವರ ಸಿನಿಮಾಗಳ ಶೀರ್ಷಿಕೆ ಮತ್ತು ಕಥಾವಸ್ತುಗಳು ವಿಭಿನ್ನವಾಗಿದ್ದು, ಮನಸ್ಸಿಗೆ ನಾಟುವಂತ ಸೂಕ್ಷ್ಮ ಅಂಶಗಳೇ ಹೆಚ್ಚು…. ಅಂತಹವರ ಜೊತೆಗೂಡಿ ಸತೀಶ್ ಮಹತ್ವ ಮತ್ತು ತೂಕಬದ್ಧವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಂದಿಗಿನ ಒಡನಾಟ ಮತ್ತು ಕೆಲಸದ ಆನುಭವ ಬಹಳ ಸಂತಸ ತಂದಿರುವುದಾಗಿ ಸತೀಶ್ ಹಂಚಿಕೊಂಡಿದ್ದಾರೆ. ತಮಿಳು ನಾಡಿನಲ್ಲಿ ನನಗೆ ಹಿರಿಯ ಸೋದರ ಸಿಕ್ಕಿದ್ದಾರೆ ಅನ್ನೋದನ್ನ ಕೂಡ ತಿಳಿಸಿದ್ರು ನಟ ನೀನಾಸಂ ಸತೀಶ್. ಸಿನಿಮಾದ ಬಹುಪಾಲಿನ ಶೂಟಿಂಗ್ ಮುಗಿದಿದ್ದು ಸಧ್ಯಕ್ಕೆ ಕೊರೊನಾದ ಕಾರಣವಾಗಿ ಸ್ತಬ್ಧಗೊಂಡಿದೆ.
ತಮಿಳು ಸಿನಿಮಾದಲ್ಲಿ ನೀನಾಸಂ ಸತೀಶ್!
