ಧ್ರುವನಕ್ಷತ್ರ’ ಚಲನಚಿತ್ರಕ್ಕೆ ಮುಹೂರ್ತ

ವರದಿ: ಡಾ.ಪ್ರಭು ಗಂಜಿಹಾಳ
ಮೊ :9448775346


‘ಧ್ರುವನಕ್ಷತ್ರ’ ಚಲನಚಿತ್ರಕ್ಕೆ ಮುಹೂರ್ತ
ಹುಬ್ಬಳ್ಳಿ : ಬೆಂಗಳೂರಿನ ಲಕ್ಕಿ ಫಿಲಮ್ಸ್ ವತಿಯಿಂದ ಆರ್ ಸಂಪತ್ ನಿರ್ಮಿಸುತ್ತಿರುವ ’ಧ್ರುವ ನಕ್ಷತ್ರ’ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ನಗರದ ಸಿದ್ದಾರೂಢಮಠದಲ್ಲಿ ನೆರವೇರಿತು.


ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ ಅವರು ಕ್ಲಾಪ್ ಮಾಡುವ ಮೂಲಕ ಮೊದಲ ದೃಶ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ ಇಲ್ಲಿ ಬಂದು ಇಲ್ಲಿಯೇ ಚಿತ್ರೀಕರಿಸುತ್ತಿರುವುದು ಸಂತಸದ ಸಂಗತಿ. ಇದರಲ್ಲಿ ಜನಪ್ರಿಯ ಹಾಸ್ಯ ಕಲಾವಿದರಾದ ವೈಜನಾಥ ಬಿರಾದಾರ ಪ್ರಮುಖ ಪಾತ್ರ ಮಾಡುತ್ತಿರುವುದರಿಂದ ಇದು ರಾಜ್ಯದಲ್ಲಿ ಯಶಸ್ವಿ ಪ್ರದರ್ಶನ ಕಾಣಲಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಹಿರಿಯ ಚಲನಚಿತ್ರ ಕಲಾವಿದರಾದ ಡಾ. ಗೋವಿಂದ ಮಣ್ಣೂರ ಅವರು ಕ್ಯಾಮರಾ ಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಮಾಡಿ ತಂಡಕ್ಕೆ ಶುಭ ಕೋರಿದರು. ಅತಿಥಿಗಳಾಗಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನಿರ್ದೇಶಕ ಗುರುರಾಜ ಕಾಟೆ, ಹಿರಿಯ ಪತ್ರಕರ್ತ ಅಕ್ಬರ್ ಬೆಳಗಾಂವಕರ, ಚಲನಚಿತ್ರ ಪಿ.ಆರ್.ಓ ಡಾ. ಪ್ರಭು ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ನಿರ್ಮಾಪಕ, ನಟ ರೇಣುಕುಮಾರ ಸಂಸ್ಥಾನಮಠ, ಶೋಭಾ ಸಂಸ್ಥಾನಮಠ ಆಗಮಿಸಿದ್ದರು.


ಹಿರಿಯ ಕಲಾವಿದ ವೈಜನಾಥ ಬಿರಾದಾರ ಮಾತನಾಡಿ, ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಈ ಸಿನಿಮಾ ಚಿತ್ರೀಕರಣ ನಡೆಯುತ್ತಿರುವುದು ಸಂತಸದ ಸಂಗತಿ. ಇಲ್ಲಿನವರ ಪ್ರೀತಿಗೆ ನಾನು ಆಭಾರಿ. ಕುಡುಕರ ಜೀವನ ಹೇಗಿರುತ್ತದೆ? ಅವರ ಕುಟುಂಬ ಹೇಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಇದು ಎಲ್ಲರ ಮನಗೆಲ್ಲುವಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. ಹಿರಿಯ ಚಿತ್ರರಂಗ, ಕಿರುತೆರೆಯ ಕಲಾವಿದೆ ಸುನಂದಾ ಕಲಬುರ್ಗಿ ಮಾತನಾಡಿ, ಚಿತ್ರೀಕರಣಕ್ಕೆ ಹುಬ್ಬಳ್ಳಿಯ ಪರಿಸರ ಉತ್ತಮವಾಗಿದೆ. ಈ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದರು.
ಚಿತ್ರದಲ್ಲಿ ವೈಜನಾಥ ಬಿರಾದಾರ, ಸುನಂದಾ ಕಲಬುರ್ಗಿ,ಶಂಕರ ಸುಗತೆ,ಖಳನಾಯಕನಾಗಿ ಪತ್ರಕರ್ತ ಪ್ರಕಾಶ. ಬಿ, ರಾಜಶೇಖರ ಪಾಟೀಲ, ಜೆ.ಇ,ರಾಜು ವಿಜಾಪೂರ, ತುಳಸಿ ರಾಠೋಠ, ಶಿವಾನಂದ,ಕೆ, ಮಾ.ಪ್ರಣವ್, ಲಕ್ಷ್ಮಿ ಯಾದವ, ಮಹೇಂದ್ರಕುಮಾರ , ವೀರಣ್ಣ ವಿಠಲಾಪುರ ,ಜಾಯ್ ಗ್ಯಾಬ್ರಿಯಲ್ ಡೊಕ್ಕಾ, ಷಣ್ಮುಖ ರಾಮ್, ಪ್ರಭು ಪ್ರಕಿನ, ರಿಕಿ ಎಂ ಜಾಯ್, ಮೊಸೆಸ್ ಕೊಡಾಸಿ, ಮೊದಲಾದವರಿದ್ದಾರೆ. ಛಾಯಾಗ್ರಹಣ ಜೆ.ಇ. ಶಂಕರ್, ಸಂಕಲನ ಸಂಜೀವರೆಡ್ಡಿ, ಪ್ರಸಾಧನ ಅಭಿನಂದನ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಕತೆ , ಚಿತ್ರಕತೆ ಜೊತೆಗೆ ನಿರ್ದೇಶನವನ್ನು ಶಿವಾಜಿರಾವ್ ಮಾಡುತ್ತಿದ್ದಾರೆ .ಆರ್.ಸಂಪತ್ ನಿರ್ಮಾಪಕರಾಗಿದ್ದಾರೆ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply