ಪ್ರತಿಭಾವಂತ ನಟ “ದುನಿಯಾ” ಕಿಶೋರ್

ಖಳನಾಯಕನಾಗಿ, ದಿಟ್ಟ ಪೋಲೀಸ್ ಆಫಿಸರಾಗಿ, ಹಿರಿಯಣ್ಣನಾಗಿ, ರಾಜಕಾರಣಿಯಾಗಿ, ಕಬಡ್ಡಿ ಕೋಚಾಗಿ, ಊರಿನ ಗೌಡನಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರತಿಭಾವಂತ ನಟ ಎನಿಸಿಕೊಂಡಿದ್ದಾರೆ, ಕಬಾಲಿ ಚಿತ್ರದ “ಯಾರ್ರಾ ಅಂದ ಕಬಾಲಿ ವರಸೊಲ್ಲುಡ ” ಡೈಲಾಗ್ ಮರೆಯಲಾಗದು.

ಡಾ ಶಿವರಾಜ್ ಕುಮಾರ್, ಶ್ರೀ ಮುರಳಿ, ಪುನೀತ್ ರಾಜಕುಮಾರ್, ಆದಿತ್ಯ, ತಮಿಳಿನ ಧನುಷ್, ಸೂಪರ್ ಸ್ಟಾರ್ ರಜಿನಿ ಕಾಂತ್, ದುನಿಯಾ ವಿಜಯ್, ಸಿಲಂಬರಸನ್, ಚೇತನ್, ರಾಕಿಂಗ್ ಸ್ಟಾರ್ ಯಶ್, ರಕ್ಷಿತ್ ಶೆಟ್ಟಿ, ವಿಜಯ್ ಸೇತುಪತಿ, ರಿಷಭ್ ಶೆಟ್ಟಿ ಮುಂತಾದ ಕಲಾವಿದರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಇವರು ಚಿತ್ರದಲ್ಲಿ ಮಾತ್ರ ಪಾತ್ರವನ್ನು ಕ್ರೂರವಾಗಿ, ಭಯ ಬರುವ ಹಾಗೆ ಮುಖದ ಭಾವನೆಗಳು ಮೂಡುವ ಹಾಗೆ ತೋರಿಸುತ್ತಾರೆ ಹೊರತು ನಿಜ ಜೀವನದಲ್ಲಿ ಉತ್ತಮ ಸ್ನೇಹಿತರಾಗೆ ನಾನು ಅವರನ್ನು ನೋಡಿಲ್ಲ. ನನಗೆ ತಿಳಿದ ಹಾಗೆ ಹೇಳಿರುವೆ.

ಇವರು ಮದುವೆಯಾಗಿ ಎರಡು ಗಂಡು ಮಕ್ಕಳಿಗೆ ಮುದ್ದಿನ ತಂದೆಯಾಗಿ ಸಂಸಾರಕ್ಕೆ ದಾರಿ ದೀಪವಾಗಿದ್ದಾರೆ, ಅವರ ಹೆಂಡತಿ ಕೂಡ ಮನೆಯ ಮಕ್ಕಳನ್ನು ಒಂದು ಒಳ್ಳೆ ರೀತಿಯಲ್ಲಿ ಬೆಳೆಸುವಲ್ಲಿ ಕಾರಣರಾಗಿದ್ದಾರೆ.

ಕೇವಲ ನಟನೆಯೊಂದಲ್ಲದೆ ಹಳ್ಳಿಯ ರೈತರ ಹಾಗಿರುವುದು ಇವರಿಗೆ ಇಷ್ಟ, ಬಿಡುವಿನ ವೇಳೆಯಲ್ಲಿ ಹಳ್ಳಿಗೆ ಹೋಗಿ ಕೃಷಿ ಮಾಡುತ್ತಾರೆ, ಈ ಲಾಕ್ ಡೌನ್ ಸಮಯದಲ್ಲಿ ಹಳ್ಳಿಯಲ್ಲಿ ತಮ್ಮದೇ ಆದ ಜಮೀನಿನಲ್ಲಿ “ಸಾವಯವ ಕೃಷಿ ” ಮಾಡಿ ಹಲವರಿಗೆ ಮಾದರಿಯಾಗಿದ್ದಾರೆ.

ನಮ್ಮ ಚಿತ್ರರಂಗದಲ್ಲಿ ಒಳ್ಳೆ ಟ್ಯಾಲೆಂಟ್ ಇರೋ ನಟರು, ವಿಲನ್ ಇದ್ದಾರೆ, ಅವರೂ ಕೂಡ ಎಲ್ಲ ಭಾಷೆಯವರ ಹಾಗೆ ನಟಿಸಿ ನಮ್ಮ ಕನ್ನಡ ಚಿತ್ರರಂಗದ ಹೆಸರನ್ನು ಕೊಂಡಾಡುವಂತೆ ಮಾಡುತ್ತಾರೆ, ಅವಕಾಶ ನೀಡುವ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ.

ಇಂಥ ಪ್ರತಿಭಾವಂತ ನಟರಿಗೆ ಇನ್ನೂ ಹಲವಾರು ವಿಭಿನ್ನ ಪಾತ್ರಗಳು ಸಿಗಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇವರ ನಟನೆಗೆ ಮನ್ನಣೆ ಸಿಗಲಿ ಎಂದು ಹಾರೈಸಿ ಮುಂದಿನ ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply