ಪ್ರತಿಭಾವಂತ ನಟ “ದುನಿಯಾ” ಕಿಶೋರ್

“ಕಸ್ತೂರಿ ಕನ್ನಡ ಒಳ್ಳೆ ಗಾಳಿ ಬೆಳಕು ನೀರು ಇಡೀ ಪ್ರಪಂಚಾನೇ ಕೊಂಡಾಡೊ ಕಲ್ಚರ್ ಇದ್ರೂನು ಪೆನ್ ಹಿಡಿಯೋ ಕೈಯಲ್ಲಿ ಬ್ಲೇಡ್ ಹಿಡ್ಕೊಂಡು ಮುಖ ಕುಯ್ಕೊಂಡ್ ಬದುಕ್ತಿಯೇನೊ ಲೇ.. ಈ ಸಮಾಜದಲ್ಲಿ ಇಂಥದುಕ್ಕೆ ಯೂಸ್ ಆಗ್ತೀನಿ ಅಂತ ಹೇಳು ಬಿಟ್ಬುಡ್ತಿನಿ ನಿನ್ನ, ತೊಡೇಲಿ ಕಾಲ್ ಕೆಜಿ ಮಾಂಸ ಇಲ್ಲ ನೀನ್ ಕಿಲಾಡಿನ.. ರೌಡಿಯೇನೊ ನೀನು.. ಅರೆರೆ ಈ ಡೈಲಾಗ್ ಎಲ್ಲೋ ಕೇಳಿದಿವಿ ಅನ್ಸುತ್ತಲ್ವ ಸೂರಿ ಡೈರೆಕ್ಟ್ ಮಾಡಿರೋ “ದುನಿಯಾ ” ಚಿತ್ರದ ಸೀನ್ ಎಷ್ಟು ಚೆನ್ನಾಗಿ ಆಕ್ಟ್ ಮಾಡಿದಾರೆ, ನೋಡೋಕೆ ಸಕತ್ ಪರ್ಸನಾಲಿಟಿ, ಒಳ್ಳೆ ಹೈಟು, ಕಿಲ್ಲಿಂಗ್ ಲುಕ್, ಮೀಸೆ ಬಿಟ್ಟಿರೋ ರೀತಿ, ಕೈಯಲ್ಲಿ ಗನ್ ಹಿಡ್ಕೊಂಡು ಖಡಕ್ ಪೋಲೀಸ್ ಆಫಿಸರ್ ಪಾತ್ರ ಮಾಡಿರೋ ನಮ್ಮ ಕನ್ನಡ ನಾಡಿನ ಹೆಮ್ಮೆಯ ನಟ “ಕಿಶೋರ್“.

ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ನಟಿಸುತ್ತಿದ್ದಾರೆ. ಆಗಸ್ಟ್ 14 1974 ರಲ್ಲಿ ಹುಟ್ಟಿದ ಇವರು ನ್ಯಾಷನಲ್ ಕಾಲೇಜ್ ,ಬೆಂಗಳೂರು ಸ್ಟೂಡೆಂಟ್ . ತೆರೆಗಳು ಮತ್ತು ಸಾಮ್ರಾಟ ಅಶೋಕ ಎಂಬ ನಾಟಕಗಳನ್ನು  ಕಾಲೇಜ್ ದಿನಗಳಲ್ಲಿ ಆಡುತ್ತಿದ್ದರು, ನಂತರ ಬೆಂಗಳೂರು ಯೂನಿವರ್ಸಿಟಿ ಯಲ್ಲಿ ಮಾಸ್ಟರ್ ಇನ್ ಕನ್ನಡ ಲಿಟರೇಚರ್ ಪಡೆದು ಬೆಂಗಳೂರಿನ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು, ಇವರು ಫ್ಯಾಷನ್ ಡಿಸೈನರ್ ಆಗಿ 2 ವಷ೯ ಪಾಟ್೯ ಟೈಮ್ ಕೆಲಸ ವಿದ್ಯಾಸಾಗರ್ ರವರ ಕೈ ಕೆಳಗೆ ಮಾಡಿದರು.

ಮೊದಲು ನಟಿಸಿದ ಚಿತ್ರ ಕಂಠಿ ಬ್ಯಾಡರ ಬೀರ ಪಾತ್ರ ಕನಾ೯ಟಕ ಸಕಾ೯ರದ ಪ್ರಶಸ್ತಿ ಇವರ ಮುಡಿಗೇರಿತು.

ರಾಕ್ಷಸ ಚಿತ್ರದ ನಟನೆಗೆ ಕನಾ೯ಟಕ ಸಕಾ೯ರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ. ದಿಟ್ಟ ಅಣ್ಣನ ಪಾತ್ರ ಆಕಾಶ್ ಮತ್ತು ಕಲ್ಲರಳಿ ಹೂವಾಗಿ ಚಿತ್ರದಲ್ಲಿ ನಟಿಸಿದ್ದಾರೆ.

ಮುಂದುವರಿಯುವುದು

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply