ಬೇಡರ ಕಣ್ಣಪ್ಪ @ 67

bedara kannappa

“ಇಂದು 07.05.1954 ರಂದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಣ್ಣಾವ್ರ ಹೆಸರು ಸುವಣಾ೯ಕ್ಷರದಲ್ಲಿ ದಾಖಲಾದ ದಿನ “

“ಶಿವಪ್ಪ ಕಾಯೋ ತಂದೆ
ಮೂರು ಲೋಕಸ್ವಾಮಿ ದೇವ
ಹಸಿವೆಯನ್ನು ತಾಳಲಾರೆ
ಕಾಪಾಡೆಯ ಶಿವನೇ “

ಈ ಹಾಡು ಕೇಳ್ತಿದ್ರೆ ಈಗಲೂ ನಾವು ದಿಗ್ಬ್ರಾಂಥರಾಗ್ತೀವಿ ಕಾರಣ ಎಂದಿಗೂ ಮರೆಯಲಾಗದ ಚಿತ್ರ “ಬೇಡರ ಕಣ್ಣಪ್ಪ ” ಜ್ನ್ನಾಪಕ ಬರುತ್ತೆ.

ಅಣ್ಣಾವೃ ನಟನೆ ಪ್ರಾರಂಭಿಸಿ ಮೊದಲ ಚಿತ್ರದಲ್ಲಿ ಶತಕ ಬಾರಿಸಿ ಕರುನಾಡ ಅಭಿಮಾನಿಗಳ ಹೃದಯ ಗೆದ್ದ ದಿನ ಇಂದು
“ಬೇಡರ ಕಣ್ಣಪ್ಪ ” ಚಿತ್ರ ಬಿಡುಗಡೆಯಾಗಿ ಇಂದಿಗೆ 67 ವಷ೯ಗಳು, ಈ ಚಿತ್ರ ತಯಾರಿಕೆಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ, ನಿದೇ೯ಶಕರಿಗೂ, ನಿಮಾ೯ಪಕರಿಗೂ ಹೃದಯ ಪೂವ೯ಕ ಅಭಿನಂದನೆಗಳು.

ಅಣ್ಣಾವೃ, ವರದಪ್ಪ ಮತ್ತು ತಂಗಿ ಶಾರದಮ್ಮ ಎಲ್ಲರೂ ಗುಬ್ಬಿ ವೀರಣ್ಣ ಕಂಪನಿಯಲ್ಲಿ ನಾಟಕ ಕಲಿಯುತ್ತಿದ್ದರು, ರಾಜ್ ರವರಿಗೆ ನಾಟಕ ನೋಡೋದಂದ್ರೆ ಬಲು ಇಷ್ಟ.

Bedara Kannappa

ಹೆಸರಾಂತ ನಿದೇ೯ಶಕರಾದ ಹೆಚ್ ಎಲ್ ಎನ್ ಸಿಂಹ ರವರು ಕನ್ನಡ ಚಿತ್ರರಂಗಕ್ಕೆ ಹೊಸ ಮುಖ ಪರಿಚಯಿಸುವ ನಿಟ್ಟಿನಲ್ಲಿ ಇರುವಾಗ ಮುತ್ತುರಾಜ್ ರವರ ತಂದೆ ಪುಟ್ಟಸ್ವಾಮಿ ಪರಿಚಯಸ್ತರು ಅವರನ್ನು ಭೇಟಿ ಮಾಡಿದಾಗ ಹೇಳ್ತಾರೆ ಮುಂದೆ ನೀನು ಚಿತ್ರ ಮಾಡುವಾಗ ನನ್ನ ಮಗನಿಗೊಂದು ಅವಕಾಶ ಕೊಡಿ ಅಂತ, ಅದೃಷ್ಟವಶಾತ್ ಅಣ್ಣಾವ್ರ ನಂಜನಗೂಡು ಬಸ್ ನಿಲ್ದಾಣದಲ್ಲಿ ಹೋಗೋದನ್ನು ಗಮನಿಸಿದ ನಿದೇ೯ಶಕರು ಈ ಚಿತ್ರಕ್ಕೆ ಮುತ್ತುರಾಜೇ ಕಣ್ಣಪ್ಪ ಚಿತ್ರಕ್ಕೆ ನಾಯಕರು ಎಂದು ತಿಳಿಸುತ್ತಾರೆ. ದೊಡ್ಡ ನಿಮಾ೯ಪಕರಾದ ಎ. ವಿ. ಮೆಯ್ಯಪ್ಪ ಚೆಟ್ಟಿ ರವರು ನಿಮಾ೯ಣ ಮಾಡಿದ್ದು, ಅಣ್ಣಾವ್ರ ಹೆಸರನ್ನು ಮುತ್ತುರಾಜ್ ರಿಂದ ರಾಜಕುಮಾರ್ ಎಂದು ಬದಲಾಯಿಸಿದರು. ಮೊದಲು ಒಪ್ಪಲಿಲ್ಲ ನಂತರ ಅವರ ಹೆಸರಿನ ಜೊತೆ ರಾಜ್ ಇರಲೇಬೇಕೇಂದು ಹೇಳಿದಾಗ ಅದರಂತೆ ಹೆಸರಿಟ್ಟರು ಮುತ್ತುರಾಜ್ ರಾಜ್ ಕುಮಾರ್ ಆದರು.

ಮುಗ್ಧ ಮಾನವ ಬೇಡ ಪಾತ್ರದಲ್ಲಿ ಶಿವ ಎಂದರೆ ತುಂಬಾ ಭಕ್ತಿ, ಶಿವನಿಗಾಗಿ ಪೂಜೆ ಮಾಡಿ ನೈವೇದ್ಯ ಏನೂ ಇಲ್ಲವೆಂದು ಅರಿತು ಜಿಂಕೆಯನ್ನು ಬೇಟೆಯಾಡಿ ಆ ಮಾಂಸವನ್ನು ಆಹಾರವಾಗಿ ಇಡುತ್ತಾರೆ, ಹಾಗಿಟ್ಟರೂ ಶಿವ ಲಿಂಗದ ಕಣ್ಣುಗಳು ಅಳುವುದನ್ನು ಅರಿತು ತನ್ನ ಮೊದಲ ಕಣ್ಣನ್ನು ಕಿತ್ತು ಆ ಲಿಂಗಕ್ಕೆ ಇಟ್ಟರೂ ಶಿವ ಅಳುವುದನ್ನು ನಿಲ್ಲಿಸುವುದಿಲ್ಲ, ಏನೂ ಅರಿಯದ ಮುಗ್ಧ ಮಾನವ ತನ್ನ ಮತ್ತೊಂದು ಕಣ್ಣನ್ನು ಕಿತ್ತು ಶಿವಲಿಂಗಕ್ಕೆ ಇಡುತ್ತಾರೆ, ಕೊನೆಯಲ್ಲಿ ಶಿವ ಇವರ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷವಾಗಿ ಬೇಡರ ಕಣ್ಣಪ್ಪ ಎಂದು ನಾಮಕರಣ ಮಾಡುವುದು.
ಅಣ್ಣಾವ್ರ ಜೊತೆ ಮಡದಿಯಾಗಿ ಹೆಸರಾಂತ ನಟಿ ‘ಪಂಡರೀಬಾಯಿ “ನಟನೆ ಮೆಚ್ಚುಗೆ ಪಡೆಯುವುದು.

“#ಮೊದಲ ಚಿತ್ರದಲ್ಲಿ ನಟಿಸಿದ ಅಣ್ಣಾವ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಾದ ನಾವು ಹೆಮ್ಮೆ ಪಡುವಂತದು”.

“#ಬಾಕ್ಸ್ ಆಫೀಸ್ ಪರಬ್ರಹ್ಮ, ನಟಸಾವ೯ಭೌಮ, ಗಾನಗಂಧವ೯,ಡಾ.ರಾಜ್ ಕುಮಾರ್ ಇಂದಿಗೆ ಚಿತ್ರರಂಗ ಪ್ರವೇಶಿಸಿ 66 ವಷ೯ಗಳು”.

“#ಈ ಚಿತ್ರ ನಂತರ ತಮಿಳು, ತೆಲುಗು ಮತ್ತು ಇತರೆ ಭಾಷೆಯಲ್ಲಿ ತಜು೯ಮೆಯಾಗಿ ಪ್ರಪ್ರಥಮ ಪ್ಯಾನ್ ಇಂಡಿಯ ಸಿನಿಮಾ ಎನಿಸಿಕೊಂಡಿದೆ”.

ಹೇಗೆ ಆ ಚಿತ್ರದಲ್ಲಿ ಕಣ್ಣುಗಳನ್ನು ದಾನ ಮಾಡಿ ಕಣ್ಣಪ್ಪ ಎನಿಸಿಕೊಂಡರೋ ಹಾಗೆ ನಿಜ ಜೀವನದಲ್ಲಿ ಅಂಧರ ಬಾಳಿಗೆ ಬೆಳಕು ನೀಡುವ ಮೂಲಕ ನೇತ್ರದಾನದ ಸಂದೇಶ ನೀಡಿದ್ದಾರೆ.

ಯುಗಕ್ಕೆ ಒಬ್ಬರೇ ಯುಗಪುರುಷ ಅವರೇ ನಮ್ಮ ರಾಜಕುಮಾರ 🌹

ಕನ್ನಡ ಚಿತ್ರರಂಗಕ್ಕೆ ರಾಜ್ ಕುಮಾರ್ ರವರು ಪರಿಚಯವಾಗಿ ಮುಂದೆ ಇಡೀ ವಿಶ್ವ ಮೆಚ್ಚುವ ಕಲಾವಿದರಾಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದ್ದಾರೆ 💐

ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡ ದೇವರೇ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply