ಕೆಲಸ ಸಿಗದೇ ಪರದಾಡುವ ಜೋಡಿ. ಮೂಕರಂತೆ ನಟಿಸಿ ಉದ್ಯೋಗ ಗಿಟ್ಟಿಸಿ ನಂತರ ಅಲ್ಲಿಂದ ಹೊರಬಂದು ಹೊಸ ಸ್ಕೀಂ ಮಾಡಲು ಆಲೋಚಿಸುತ್ತಾರೆ. ಆದರ್ಶ ದಂಪತಿ ಪೈಪೋಟಿಗೆ ಹೊರಟಾಗ ಮಗುವೊಂದು ಸಿಗುತ್ತದೆ. ಪೈಪೋಟಿಯಲ್ಲಿ ಎಲ್ಲ ರೀತಿಯ ಸ್ಪರ್ಧಿಗಳನ್ನು ಗೆಲ್ಲುತ್ತ ಇದ್ದಂತೆ ಅವರಲ್ಲಿ ಪ್ರೇಮಾಂಕುರ ಆಗುತ್ತದೆ. ಒಂದು ಕ್ರೇಝಿ ಕ್ಲೈಮ್ಯಾಕ್ಸ್ ನಂತರ ಚಿತ್ರ ಮುಗಿಯುತ್ತದೆ.
ರಸಿಕರ ರಾಜ ರಾಜ್ಕುಮಾರ್ ನವರಸ ಪ್ರದರ್ಶನ ಮಾಡಿದ್ದಾರೆ.
ಮಾಧವಿ ಕೂಡ ಸಖತ್ ನಟನೆ.
ಸಿಂಗೀತಂ ಶ್ರೀನಿವಾಸ್ ರಾವ್ ಈ ಜೋಡಿಯಿಂದ ಹಾಲು ಜೇನು ಚಿತ್ರದಲ್ಲಿ ಅಳಿಸಿದರೆ ಇದರಲ್ಲಿ ನಗಿಸುತ್ತಾರೆ.
ಎಸ್ಪಿ ಅವರ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡು.. ರಾಜ್ ವಾಣಿ ಮರಾಠಿ ಲಾವಣಿ ಶೈಲಿಯ ನೀ ಅತ್ತರೆ ಎಂಥಾ ಚಂದ… ಕಾಮಿಡಿ ಹಾಡು.. ಏನು ಮಾಯವೋ ಏನುಮರ್ಮವೋ… ಪ್ರೇಮಗೀತೆ.. ಯಾವ ಕವಿಯು ಬರೆಯಲಾರ… ಇನ್ನೂ ಹತ್ತಿರ ಹತ್ತಿರ ಬರುವೆಯಾ ಅಂತೂ ಬಹಳ ಚಂದ. ಅಂದ ಹಾಗೆ ಚಿತ್ರದ ಸಂಗೀತ ಸಿಂಗೀತಂ ಅವರದೇ.
ಆನಂದ ಕಂಪೆನಿ ಆ್ಯಡ್ಗಳ ಹಾಡೂ ಸಖತ್.
ಮಾಧವಿ ಇನ್ನೂ ಹತ್ತಿರ ಹತ್ತಿರ ಬರುವೆಯಾ ಅನ್ನುತ್ತಾ ರಾಜ್ ಅವರನ್ನು ದೂರ ಹೋಗಿ ಎಂದು ಸನ್ನೆ ಮಾಡುವ ದೃಶ್ಯ ಮುದ ನೀಡುತ್ತದೆ.
‘ಭಾಗ್ಯದ ಲಕ್ಷ್ಮಿ ಬಾರಮ್ಮ’