ಮತ್ತೆ ಒಂದಾದ್ರು ಗುರು- ಡಾಲಿ!

Guruprasad and Dhananjay

ಡಾಲಿ ಧನಂಜಯ್ ಅಭಿನಯದ ಗುರು ಶಂಕರ್ ನಿರ್ದೇಶಿಸಿರುವ ” ಬಡವಾ, ರಾಸ್ಕಲ್”  ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅಂದುಕೊಂಡ ಹಾಗೆ ಸಿನಿಮಾ ಅಚ್ಚುಕಟ್ಟಾಗಿ ,ಮನೋರಂಜೆನೆ ಪೂರಿತವಾಗಿ ತಯಾರಾಗಿದೆ. ಸಿನಿಮಾದಲ್ಲಿನ ಮತ್ತೊಂದು ಸ್ವಾರಸ್ಯಕರ ವಿಷಯ  ಅಂದ್ರೆ ನಿರ್ದೇಶಕರಾದ “ಗುರುಪ್ರಸಾದ್” ಮತ್ತು ನೀರ್ ದೋಸೆ ಖ್ಯಾತಿಯ “ವಿಜಯ್ ಪ್ರಸಾದ್” ಕ್ಲೈಮ್ಯಾಕ್ಸ್ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಮೊನ್ನೆಯಷ್ಟೇ ಇಬ್ಬರೂ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ . ಅವರ ಪಾತ್ರದ ಬಗ್ಗೆ ಯಾವ ವಿವರವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಗುರುಪ್ರಸಾದ್ ನಿರ್ದೇಶನದಲ್ಲಿ ಧನಂಜಯ್ ಅಭಿನಯದ “ಎರಡನೆ ಸಲ” ಸಿನಿಮಾ ಬಿಡುಗಡೆಯಾದ ಬಳಿಕ ಇಬ್ಬರ ಮಧ್ಯೆ ಸ್ವಲ್ಪ ಇರಸು ಮುರುಸು ಉಂಟಾಗಿ,ಮಾತಿನ ಚಕಮಕಿಗೆ ಕಾರಣವಾಗಿತ್ತು.ಬೇರೆಯಾಗಿದ್ದ  ಇಬ್ಬರನ್ನು ಮತ್ತೆ ಕಾಲ- ಕಲೆ ಒಂದು ಮಾಡಿದೆ. ಹೂಗಳು ನೂರಾದರೇನು  ಅವೆಕ್ಕೆಲ್ಲ ಬೇರು(ಸಿನಿಮಾ) ಒಂದೇ  ಎಂದು ಮತ್ತೆ ಸಾಬೀತಾಗಿದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply