ಡಾಲಿ ಧನಂಜಯ್ ಅಭಿನಯದ ಗುರು ಶಂಕರ್ ನಿರ್ದೇಶಿಸಿರುವ ” ಬಡವಾ, ರಾಸ್ಕಲ್” ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಅಂದುಕೊಂಡ ಹಾಗೆ ಸಿನಿಮಾ ಅಚ್ಚುಕಟ್ಟಾಗಿ ,ಮನೋರಂಜೆನೆ ಪೂರಿತವಾಗಿ ತಯಾರಾಗಿದೆ. ಸಿನಿಮಾದಲ್ಲಿನ ಮತ್ತೊಂದು ಸ್ವಾರಸ್ಯಕರ ವಿಷಯ ಅಂದ್ರೆ ನಿರ್ದೇಶಕರಾದ “ಗುರುಪ್ರಸಾದ್” ಮತ್ತು ನೀರ್ ದೋಸೆ ಖ್ಯಾತಿಯ “ವಿಜಯ್ ಪ್ರಸಾದ್” ಕ್ಲೈಮ್ಯಾಕ್ಸ್ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಮೊನ್ನೆಯಷ್ಟೇ ಇಬ್ಬರೂ ಚಿತ್ರೀಕರಣ ಮುಗಿಸಿಕೊಟ್ಟಿದ್ದಾರೆ . ಅವರ ಪಾತ್ರದ ಬಗ್ಗೆ ಯಾವ ವಿವರವು ಬಿಟ್ಟುಕೊಟ್ಟಿಲ್ಲ ಚಿತ್ರತಂಡ. ಗುರುಪ್ರಸಾದ್ ನಿರ್ದೇಶನದಲ್ಲಿ ಧನಂಜಯ್ ಅಭಿನಯದ “ಎರಡನೆ ಸಲ” ಸಿನಿಮಾ ಬಿಡುಗಡೆಯಾದ ಬಳಿಕ ಇಬ್ಬರ ಮಧ್ಯೆ ಸ್ವಲ್ಪ ಇರಸು ಮುರುಸು ಉಂಟಾಗಿ,ಮಾತಿನ ಚಕಮಕಿಗೆ ಕಾರಣವಾಗಿತ್ತು.ಬೇರೆಯಾಗಿದ್ದ ಇಬ್ಬರನ್ನು ಮತ್ತೆ ಕಾಲ- ಕಲೆ ಒಂದು ಮಾಡಿದೆ. ಹೂಗಳು ನೂರಾದರೇನು ಅವೆಕ್ಕೆಲ್ಲ ಬೇರು(ಸಿನಿಮಾ) ಒಂದೇ ಎಂದು ಮತ್ತೆ ಸಾಬೀತಾಗಿದೆ.
Related Posts
“ಇಸೈಜ್ನಾನಿ” ಇಳಯರಾಜ ಬತ್೯ಡೇ ಸ್ಪೆಷಲ್ 💐💜🎼🎶🎷💐
“ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೆಕೆ “ ಈ ಸಾಲುಗಳು ಪಲ್ಲವಿ ಅನುಪಲ್ಲವಿ ಚಿತ್ರದ್ದು, ಸಂಗೀತ ನಿರ್ದೇಶಕರು ಶ್ರೀ.ಇಳಯರಾಜ ರವರು. ಇವರು ಖ್ಯಾತ ಸಂಗೀತ ನಿರ್ದೇಶಕರು ಜಿ.…
ಸರ್ಜಾ ಫ್ಯಾಮಿಲಿಗೆ ಮತ್ತೊಂದು ಶಾಕ್
ಧ್ರುವ ಸರ್ಜಾ ಮತ್ತು ಅವರ ಪತ್ನಿ ಪ್ರೇರಣೆ ದಂಪತಿಗಳಿಬ್ಬರಿಗೂ ಕೋವಿಡ-19 ಸೋಂಕು ಪತ್ತೆಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಲ್ಲು ಸೂಕ್ಷ್ಮ ಲಕ್ಷಣಗಳು ಕಂಡು ಬಂದಿದ್ದು, ತಕ್ಷಣ ಚಿಕಿತ್ಸೆ…
“ರಿಯಲ್ಸ್ಟಾರ್ನದೊಡ್ಡ ಪ್ರಾಜೆಕ್ಟ್
ಲಾಕ್ಡೌನ್ ನ ವೇಳೆ ತಮ್ಮ ಆಪ್ತ ಸ್ನೇಹಿತರು ಮತ್ತು ಸಂಸಾರದ ಜೊತೆಗೆರಿಯಲ್ ಸ್ಟಾರ್ ಉಪೇಂದ್ರ,ಅವರದೇ “ರುಪ್ಪಿಸ್” ರೇಸಾರ್ಟಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಅಭಿಮಾನಿಗಳುಉಪ್ಪಿಯವರನ್ನ ಮತ್ತೆ ನಿರ್ದೇಶನಮಾಡಲು ಒತ್ತಾಯಿಸುತ್ತಿದ್ದಾರೆ. ಆದ್ರೆ…