ಮುಳುಗಿದ ಬದುಕಿಗೆ ಬೆಳಕಾದ ರವಿ!

ಸಾಮಾನ್ಯವಾಗಿ ಚಿತ್ರಮಂದಿರಗಳ ಮುಂದೆ ಇರ್ತಿದ್ದ ” ಹೌಸ್ ಫುಲ್” ಬೊರ್ಡ್ ಇದೀಗ ಚಿತಗಾರದ ಗೇಟ್ ಗಳ್ ಮೇಲೆ ನೆತಾಡ್ತಿವೆ.. ಬೆಂಗಳೂರು ನಗರದಲ್ಲಿ ಕೋವಿಡ್ 19ರ ಸೋಂಕಿಗೆ ಬಲಿಯಾಕ್ತಿರೋರ ಸಂಖ್ಯೆ ದಿನೆ ದಿನೆ ಹಿಚ್ಚುತ್ತಿದ್ದು, ಸಹಾಯ ಹಸ್ತದ ಕೊರತೆಯು ಕಾಣಲಾರಂಭಿಸಿದೆ. ಮೃತರ ದೇಹವನ್ನ ಅಂತ್ಯಸ0ಸ್ಕಾರಕ್ಕೆಂದು ಸರ್ಕಾರದವರು ಮನೆಯವರಿಗೆ ನೀಡದ ಕಾರಾಣ, ಸಕಲ ಕರ್ಮಾದಿ ಕ್ರಿಯೆಯನ್ನು BBMPಯವರೆ ಮಾಡುತ್ತಲಿದ್ದು ಅವರ ನೆರವಿಗೆ “ಜಿಮ್ ರವಿ” ಅವರು ಕೈ ಜೋಡಿಸಿದ್ದಾರೆ.

ಜಿಮ್ ಮಾಸ್ಟರ್, ಅಂತರರಾಷ್ಟ್ರೀಯ ಕ್ರೀಡಾ ಪಟು ಹಾಗೂ ಸಿನಿಮಾ ನಟರು ಆಗಿರುವ ಜಿಮ್ ರವಿಯವರು ಈ ಸಂಧಿಗ್ದ ಪರಿಸ್ಥಿತಿಯಲ್ಲಿ ಖುದ್ದಾಗಿ ರುದ್ರ ಭೂಮಿಯಲ್ಲಿದ್ದು, ಅಲ್ಲಿ ಬರುವ ಸೋಂಕಿನಿಂದ ಮೃತ ಪಟ್ಟ ದೇಹಗಳಿಗೆ ದಹನ ಕ್ರಿಯೆಯನ್ನ ನೆರೆವೇರಿಸುತ್ತಿದ್ದಾರೆ. P.P.E ಕಿಟ್ ಧರಿಸಿ ಈ ಕೆಲಸಾ ಮಾಡೋ bbmp ಹಾಗೂ ರುದ್ರಭೂಮಿಯ ಕೆಲಸಗಾರರು ಬೆಸತ್ತೋಗಿದ್ದಾರೆ, ಕೆಲಸದೊತ್ತಡದಿಂದಾಗಿ ತ್ರಾಣ ಕ್ಷೀಣಿಸುತ್ತಿದೆ. ಶರವೇಗದಲ್ಲಿ ಹರಡುತ್ತಿರುವ ಈ ಸೋಂಕನ್ನು ಲೆಕ್ಕಿಸದ, ಯಾವುದಕ್ಕೂ ಅಂಜದೆ, ಹಿಂಜರಿಯದೆ ಜಿಮ್ ರವಿ ಹಾಗೂ ಅವರ ಸಂಗಡಿಗರು,ಕಾರ್ಮಿಕರ ಜೊತೆ ಕೈ ಜೋಡಿಸಿ ದಿನ ನಿತ್ಯ ನೂರಾರು ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡ್ತಿದ್ದಾರೆ, ಇವರ ತೋಳು ಉಕ್ಕಿನಂತೆ ಗಟ್ಟಿಯಾಗಿರಬಹುದು ಆದ್ರೆ ನೋವಿಗೆ ಕರಗಿ ನೆರವಾದ ಇವರ ಹೃದಯ ಬೆಣ್ಣೆಯಷ್ಟೇ ಬಿಳಿ-ಮೃದು ಎಂದು ರುಜುವಾಗಿದೆ. ಇವರು ಮಾಡುತ್ತಿರುವುದನ್ನ ಸೇವೆ ಅಥವಾ ಪುಣ್ಯದ ಕೆಲಸ ಎಂದ್ರೆ ಅದು ಬಹಳ ಚಿಕ್ಕ ಮಾತಾಗುವುದು… ಒಟ್ಟಿನಲ್ಲಿ ಇಡೀ ಮನುಕುಲವೆ ಹೆಮ್ಮೆ ಪಡುವಂತಹ ಕೆಲಸ ಇವರು ಸಾಧಿಸ್ತಿದ್ದಾರೆ..
” ಜಿಮ್ ರವಿಯವರು” ಆರೋಗ್ಯವಾಗಿರಲಿ ಮತ್ತಷ್ಟು ಒಳ್ಳೆ ಕೆಲಸ ಅವರಿಂದ ನೆರವೇರಲಿ ಎಂದು ಚಿತ್ರೋದ್ಯಮಾ.ಕಾಂ ಹಾರೈಸುತ್ತದೆ..

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply