1982ರ ರಜತ ಮಹೋತ್ಸವ ಆಚರಿಸಿದ ಚಿತ್ರದ ನಿರ್ದೇಶಕರು ದೊರೆ ಭಗವಾನ್.
ವಾಣಿ ಅವರ ಕಾದಂಬರಿ. ಸವತಿಯ ಮಗಳು ವತ್ಸಲಳನ್ನು (ಸರಿತ) ಗೋಳು ಹುಯ್ದುಕೊಳ್ಳುತ್ತಿದ್ದ ಮಲತಾಯಿ (ಡಬ್ಬಿಂಗ್ ಜಾನಕಿ – ಈಕೆ ಮೂತಿ ತಿವಿದು ಜುಟ್ಟು ಎಳೆದು ಬಡಿಯುವುದರಲ್ಲಿ ಹಳೆಯ ನಟಿ ರಮಾದೇವಿಗಿಂತಲೂ ಒಂದು ಕೈ ಮೇಲು!). ಅದನ್ನು ನೋಡಿ ಮೂಕಪ್ರಾಣಿಯಂತೆ ಇರುವ ಪತಿ ಕೆ ಎಸ್ ಅಶ್ವತ್ಥ್. ಆತನಿಗೆ ಶೋಭಾ ಮತ್ತು ಮಾಸ್ಟರ್ ಪುನೀತ್ (ಬಲು ಚೂಟಿ ಮರಿ ಪವರ್ *) ಮಕ್ಕಳು.
ರವಿ (ರಾಜ್ಕುತಮಾರ್) ದೆಹಲಿಯಲ್ಲಿ ಕೆಲಸ ಮಾಡುತ್ತಿರುವವನು ಮೈಸೂರಿನ ತನ್ನಕ್ಕ ಡಬ್ಬಿಂಗ್ ಜಾನಕಿ ಮನೆಗೆ ಬಂದಾಗ ಕಂಡ ದೃಶ್ಯ. ಸರಿತಳನ್ನು ಕೆಲಸದವಳು ಎಂದು ರವಿ ಅಂದಾಗ ಅವಳು ನಮ್ಮಕ್ಕ ಎಂದು ಪುನೀತ್ ಹೇಳಿದಾಗ ಬೆಚ್ಚುತ್ತಾನೆ ರವಿ. ಆಗ ವತ್ಸಲಳನ್ನು ಉದ್ಧರಿಸುವ ಕೆಲಸ ಶುರು ಮಾಡುತ್ತಾನೆ ರವಿ.
ಶ್ರೀನಿವಾಸ್ ಮೂರ್ತಿ, ಸುಧಾ ಸಿಂಧೂರ್, ಶಿವರಾಂ, ತೂಗುದೀಪ ಶ್ರೀನಿವಾಸ್, ಶನಿ ಮಹದೇವಪ್ಪ ಮತ್ತು ಮೈಸೂರು ಲೋಕೇಶ್ ನಾನು ಗುರುತಿಸಿದ ಪಾತ್ರಗಳು. ಅಂದ ಹಾಗೆ ‘ವಿಲನ್’ ನಿರ್ದೇಶಕ ಪ್ರೇಮ್ ಗೆ ಹೆಣ್ಣು ಕೊಟ್ಟ ಅತ್ತೆ ಮಮತಾ ರಾವ್ (ನಟಿ ರಕ್ಷಿತಾಳ ಅಮ್ಮ) ಅಣ್ಣಾವ್ರನ್ನು ದೆಹಲಿಯಲ್ಲಿ ಇಷ್ಟ ಪಡುತ್ತಾಳೆ. ಒಂದು ಕನಸಿನ ಹಾಡು ಅಣ್ಣಾವ್ರು ಹಾಡುವ ಚೆಲುವೆಯೇ ನಿನ್ನ ನೋಡಲು ಇದೆ. ಸಂಗೀತ ನಿರ್ದೇಶಕ ಎಂ ರಂಗರಾವ್ ರವಿ ನೀನು ಆಗಸದಿಂದ ಮತ್ತು ನೀನಾದೆ ಬಾಳಿನ ಜ್ಯೋತಿ ಅಣ್ಣಾವ್ರು ಮತ್ತು ಜಾನಕಿಯಮ್ಮನವರಿಂದ ಹಾಡಿಸಿದ್ದಾರೆ. ಅಣ್ಣಾವ್ರ ಡೆಲ್ಲಿ ದೂರದರ್ಶನದ ಹೊಸ ಬೆಳಕೂ… ಟುಂಟುಂಡುಡುಂ ಮತ್ತು ಲಲಿತ್ ರಾಗದ ಪ್ಯಾಥೋಸ್ ಹಾಡು ಕಣ್ಣೀರ ಧಾರೆ ಇದೇಕೇ ಇದೇಕೆ ಇದೆ. ಕುವೆಂಪು ಅವರ ತೆರೆದಿದೆ ಮನೆ ಓ ಬಾ ಅತಿಥಿ ವಾಣಿ ಜಯರಾಂ ಮತ್ತು ಎಸ್ ಜಾನಕಿ ಸುಶ್ರಾವ್ಯ ಹಾಡು.
ಅಣ್ಣಾವ್ರು ಸರಿತಳನ್ನು ಅವರ ಅಕ್ಕ ಡೀಸೆಂಟ್ ಆಗಿ ನಡೆಸಿಕೊಳ್ಳಲು ಹೂಡುವ ಆಟ ಆಡುವ ಮಾತು ಕಚಗುಳಿ ಇಡುತ್ತವೆ.
ಫ್ಯಾಮಿಲಿ ಎಂಟರ್ಟೈನರ್… ಅಣ್ಣಾವ್ರ ನಟನೆಯ ಕಿರೀಟಕ್ಕೆ ಮತ್ತೊಂದು ಗರಿ.