ಹ್ಯಾಪಿ ಬರ್ತ್ಡೇ ದೇವ ಸರ್ 🌹

ಕಾಲಕಾಲಕ್ಕೆ ವಿಭಿನ್ನ ಸಂಗೀತ ಹಾಡುಗಾರಿಕೆ ತಂತ್ರದಿಂದ ಕೇಳುಗರ ಮನಸ್ಸನ್ನು ಅರಿತು ಅವರ ನಾಡಿಮಿಡಿತ ಗೆಲ್ಲುವಲ್ಲಿ ಯಶಸ್ವಿಯಾದ ಶ್ರೇಷ್ಠ ಸಂಗೀತ ನಿದೇ೯ಶಕರಾದ ಶ್ರೀ ದೇವ (ದೇವನೇಸಂ ಚೊಕ್ಕಲಿಂಗಂ) ರವರಿಗೆ ಜನುಮ ದಿನದ ಶುಭಾಶಯಗಳು 💐💜🌹

ತಮಿಳು ಭಾಷೆಯಲ್ಲಿ ಹೆಚ್ಚು ಜನಪ್ರಿಯರಾದರೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಸಂಗೀತ ನಿದೇ೯ಶಿಸಿದ್ದಾರೆ, 20 ವಷ೯ಗಳ ಚಿತ್ರರಂಗದಲ್ಲಿ ಗಾನ ಹಾಡಿಗೆ ಹೆಸರಾದವರು, ಇವರನ್ನು “ಗಾನ ಹಾಡಿನ ಪಿತಾಮಹ ” ಎನ್ನುವರು.

ಕನ್ನಡದಲ್ಲಿ ಅಮೃತವಷಿ೯ಣಿ, ಕೋಟಿಗೊಬ್ಬ, ಗಲಾಟೆ ಅಳಿಯಂದ್ರು, ಸಿಂಹಾದ್ರಿಯ ಸಿಂಹ, ಸೈನಿಕ, ಕದಂಬ, ರಾಜ ನರಸಿಂಹ, ವಂದೇ ಮಾತರಂ ಮುಂತಾದ ಚಿತ್ರಗಳಲ್ಲಿ ಸಂಗೀತ ನೀಡಿರೋದು ಗಮನಾರ್ಹ.

ತಮಿಳಿನಲ್ಲಿ ಇವರ ಚಿತ್ರಗಳ ಪಟ್ಟಿ ನಿಲ್ಲದು.. ಅಣ್ಣಾಮಲೈ, ಬಾಷಾ, ಖುಷಿ, ಆಸೈ, ನೇರುಕ್ಕು ನೇರ್, ನಟ್ಪುಕ್ಕಾಗ, ಪಂಚತಂತ್ರಂ, ಅರುಣಾಚಲಂ, ಕಾದಲ್ ಕೋಟೈ ತೆಲುಗಿನಲ್ಲಿ ಮಾಸ್ಟರ್, ತೋಲಿಪ್ರೇಮ, ಬಾಗುನ್ನಾರ ಇನ್ನೂ ಹಲವಾರು ಚಿತ್ರಗಳಿಗೆ ವೈವಿಧ್ಯಮಯ ಸಂಗೀತ ನೀಡಿದ್ದಾರೆ.

ತಮಿಳುನಾಡು ಸಕಾ೯ರ ಪ್ರಶಸ್ತಿ, ಕನಾ೯ಟಕ ಸಕಾ೯ರ ಪ್ರಶಸ್ತಿ, ಕಲೈಮಾಮಿಣಿ ಪ್ರಶಸ್ತಿ ಭಾಜನರು. ದಿಗ್ಗಜ ಸಂಗೀತ ನಿರ್ದೇಶಕರು ದಿ. ಎಂ ಎಸ್ ವಿಶ್ವನಾಥನ್ ರವರು ನೀಡಿದ ಬಿರುದು “ತೆನಿಸೈ ತೆಂಡ್ರಲ್ ” ಅದರಥ೯ ಜೇನಿನಂತ ಸಂಗೀತ.

ಇವರ ರೊಮ್ಯಾಂಟಿಕ್, ಫೀಲಿಂಗ್, ಎಮೋಷನಲ್, ಟಪ್ಪಾಂಗುಚಿ, ಭಕ್ತಿ ಗೀತೆಗಳು ಯಾವುದೇ ಆಗಲಿ ಎಲ್ಲವೂ ಕೇಳುಗರನ್ನು ಮೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ನೂರಾರು ಕಾಲ ಸುಖವಾಗಿ ಬಾಳಲಿ ಮತ್ತು ಇವರ ಮುಂಬರುವ ಚಿತ್ರಗಳಿಗೆ ಒಳ್ಳೆಯದಾಗಲಿ ಹಾಗೂ ನನ್ನ ಬಹುದಿನಗಳ ಕನಸು ಇವರನ್ನು ಭೇಟಿ ಮಾಡಬೇಕೆಂದು ಆ ದಿನ ಯಾವಾಗ ಬರುವುದೋ ಕಾದು ಕಾದು ನೋಡೋಣ ಮತ್ತೊಮ್ಮೆ ಹ್ಯಾಪಿ ಬರ್ತ್‌ಡೇ ದೇವ ಸರ್ 🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply