16ಕ್ಕೆ ಯಾರ್ ಯಾರ್ ಬರ್ತಿದ್ದಾರೆ ??..

ಅಕ್ಟೋಬರ್ 16 ಕ್ಕೆ ಚಿತ್ರಮಂದಿರಗಳು ಪುನರ್ ಆರಂಭ ಅನ್ನೋದು ಗೊತ್ತಿರೋ ವಿಚಾರ ಆದ್ರೆ ಯಾವ ಕನ್ನಡದ ಸಿನಿಮಾಗಳು ಬಿಡುಗಡೆಯಾಗಲಿವೆ ಅನ್ನೋದೇ ಎಲ್ಲರ ಪ್ರಶ್ನೆ. ಮಾರ್ಚ್ ತಿಂಗಳಿನಿಂದ ಬಿಡುಗಡೆಯಾದ ಹಲವು ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕ ಪ್ರಭು ಮಾರ್ಕ್ಸ್ ಕೊಡೊ ಮುಂಚೆನೇ ಟೈಮ್ ಔಟ್ ಅಗ್ಗಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದ ಚಿತ್ರಗಳು ಒಮ್ಮೆಲೇ ಮೂಕಸ್ಥಬ್ಧವಾದವು. ಪ್ರಜ್ವಲ್ ದೇವರಾಜ್ ಅಭಿನಯದ “ಜೆಂಟಲ್ ಮೆನ್”, ರಮೇಶ್ ಅರವಿಂದ್ ರ “ಶಿವಾಜಿ ಸೂರತ್ಕಲ್”, “ಮಾಯಾ ಬಜಾರ್”, ಹೆಂಗೆ ನಾವು ಅಂತ ಹೇಳಿ ಕಿಕ್ ಏರಿಸಿದ ” ಲವ್ ಮಾಕಟೈಲ್”, ಯುವ ಪ್ರೇಮಿಗಳ ಪ್ರಣಯ ಕಾವ್ಯ “ದಿಯ” ಜೊತೆಗೆ ಚಿರಂಜೀವಿ ಸರ್ಜಾ ಅಭಿನಯದ ” ರಣಂ”, ಸಿನಿಮಾಗಳು ತೆರೆಕಾಣಲಿವೆ. ಇವೆಲ್ಲವನ್ನೂ ಮತ್ತೊಮ್ಮೆ ವೀಕ್ಷಿಸುವ ಅವಕಾಶ ಕನ್ನಡ ಪ್ರೇಕ್ಷಕನಿಗೆ ದೊರೆಯಲಿದೆ. ಸಾಮಾಜಿಕ ಅಂತರ, ಥಿಯೇಟರ್ ನಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಮಾಸ್ಕ್ ಮತ್ತು ಸಾನಿಟೈಸರ್ ಬಳಸಿ ನಿಯಮಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಜವಾಬ್ದಾರಿ. ಸಿನಿಮಾ ನೋಡಬೇಕೆಂದ್ರೆ ಇವನ್ನ ಪಾಲಿಸಲೇಬೇಕು ಪ್ರೇಕ್ಷಕ ಪ್ರಭು. ಜನ ಬಂದು ಸಿನಿಮಾ ನೋಡ್ತಾರ ಅನ್ನೋ ಪ್ರಶ್ನೆ ಒಂದೆಡೆಯಾದ್ರೆ, ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳುವುದುಎಂಬ ಯೋಚನೆ ಮತ್ತೊಂದೆಡೆ. ಆದ ಕಾರಣ ಯಾವುದೇ ದೊಡ್ಡ ಬಜೆಟ್ನ ಹೊಸ ಸಿನಿಮಾ ಸಧ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಒಟ್ಟಿನಲ್ಲಿ ಚಿತ್ರಮಂದಿರದವರಿಗೆ ಇದು ಸಮಸ್ಯೆಯಾಗಿ ಕಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply