ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಗುರುಸ್ವಾಮಿಗಳು ಇಂದು(31/03/2021) ಬೆಳಗ್ಗೆ ದೈವಾಧೀನರಾಗಿದ್ದಾರೆ. ನಿಮೋನಿಯ ಖಾಯಿಲೆಯಿಂದ ಬಳಲುತ್ತಿದ್ದ ಗುರುಸ್ವಾಮಿಗಳು 77ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ದೊಡ್ಡ ಗಣೇಶನ ಗುಡಿಯಲ್ಲಿ ನೂರಾರು ಕನ್ನಡ ಸಿನಿಮಾಗಳು ಸೆಟ್ಟೇರಿದೆ ಜೊತೆಗೆ ಶೂಟಿಂಗ್ ಕೂಡ ಮಾಡಿದ್ದಾರೆ, ಸಿನಿಮಾದವರಿಗೆ ಈ ದೇವಸ್ಥಾನ ಅಂದ್ರೆ ಬಲು ಪ್ರೀತಿ ಕಾರಣ ಗಣೇಶನ ಮೇಲಿರುವ ಭಕ್ತಿ ಹಾಗೂ ಸ್ವಾಮಿಗಳು ಹರಸಿ- ಹಾರೈಸುವ ರೀತಿ, ಚಿತ್ರರಂಗದವರ ಪಾಲಿಗೆ ದೊಡ್ಡ ಗಣೇಶ ಮತ್ತು ಈ ಅರ್ಚಕರು ಇಬ್ಬಾರು ಬಹಳ ಲಕ್ಕಿ ಮತ್ತು ವಿಶೇಷ. ಕನ್ನಡ ಚಿತ್ರರಂಗಕ್ಕೂ ಇವರಿಗೂ ಒಂದು ದೊಡ್ಡ ಅವಿನಾಭಾವ ಸಂಭದವೇ ಇದೆ, ಡಾ. ರಾಜ್ಕುಮಾರ್, ಡಾ.ವಿಷ್ಣುವರ್ಧನ್, ಅಂತಹ ದಿಗ್ಗಜರಿಂದ ಹಿಡಿದು ಇಂದಿನ ಪೀಳಿಗೆಯ ಸಿನಿಮಾ ನಟರುಗಳ ಸಿನಿಮಾದ ಪ್ರಾರಾಂಬ ಹಂತದಲ್ಲಿ ಇಲ್ಲಿ ಬಂದು ಅವರ ಆಶೀರ್ವಾದ ಪಡೆದು ಹೊಗುತ್ತಿದ್ದರು ಆ ಸಿನಿಮಗಳೆಲ್ಲಾ ಸೂಪರ್ ಹಿಟ್ ಆಗ್ತಿದ್ವು. ಗುರು ಸ್ವಾಮಿಗಳ ಅಗಲಿಕೆಗೆ ಚಿತ್ರರಂಗದ ಅನೇಕ ಹಿರಿಯ ಕಲಾವಿದರು ಹಾಗೂ ತಂತ್ರಜ್ನ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ದೊಡ್ಡ ಗಣಪತಿಯ ಪ್ರಧಾನ ಅರ್ಚಕರು ಇನ್ನಿಲ್ಲ