‘ಆಕಸ್ಮಿಕ’

ತ.ರಾ.ಸು. ಅವರ ಆಕಸ್ಮಿಕ, ಅಪರಾಧಿ, ಪರಿಣಾಮ ಕಾದಂಬರಿಗಳ ಆಧಾರಿತ. ಟಿ.ಎಸ್. ನಾಗಾಭರಣ ಅವರ ನಿರ್ದೇಶನ.

ಅಣ್ಣಾವ್ರ ಅಭಿನಯ, ಪೊಲೀಸನ ಗತ್ತು, ಪ್ರೇಯಸಿಯನ್ನು ಸಾಂತ್ವನಗೊಳಿಸುವ ಯತ್ನ, ಅವಳ ಸಾವಿನ ಆಘಾತ, ಮೊದಲ ಪ್ರೇಯಸಿ ಕಾಣೆಯಾದಾಗ ಆಗುವ ದುಃಖ, ವಿರಹಗಳನ್ನು ಬಲು ಚೆನ್ನಾಗಿ ನಿಭಾಯಿಸಿದ್ದಾರೆ.

ಅಣ್ಣಾವ್ರ ಹಾಡುಗಳಂತೂ ಅಮೋಘ. ಹಂಸ್ ಅಂತೂ ಎರಡು ಮೂರು ಹಾಡುಗಳಲ್ಲಿ ‘ಎಲ್ಲಿಯೋ ಹೋಗಿಬಿಟ್ಟಿದಾರೆ’

ಮನಮೋಹನಾಂಗಿ… ನಾಟಕದ ಮಟ್ಟಿನ ಹಾಡು, ಅದರಲ್ಲಿ ಅಣ್ಣಾವ್ರ ಎತ್ತರಿಸಿದ ‘ಆ’ ಕೇಳಲು ಬಹಳ ಖುಷಿ ಆಗುತ್ತದೆ.

ಹುಟ್ಟಿದರೇ ಕನ್ನಡ ನಾಡಲಿ….ಈ ಅಂದವೋ … ಬಾಳುವಂತ ಹೂವೇ… ಆಗುಂಬೆಯಾ ಡ್ಯೂಯೆಟ್ ಮಂಜುಳಾ ಗುರುರಾಜ್ ಜೊತೆ… ವಾಹ್… ಎಲ್ಲವೂ ಚೆನ್ನ.

ಸುಂದರ ಹೊರಾಂಗಣ, ಗಾಢ ಅಭಿನಯ, ವಜ್ರಮುನಿಯ ವಾಸಪ್ಪ ಎಂತಹ ಕಟುಕ! ಗೀತಾಳ ಸೈಲೆಂಟ್ ಆ್ಯಕ್ಟಿಂಗ್, ಮಾಧವಿಯ ಜೋರು…

ಕಥೆಯ ಕಾಲವನ್ನು ಅಪ್ಡೇಟ್ ಮಾಡಿರುವುದು ಚೆನ್ನವೆನಿಸುತ್ತದೆ.

ಅಂದ ಹಾಗೆ ಅಣ್ಣಾವ್ರ ಉಡುಪುಗಳ ಆಯ್ಕೆ ಅಪ್ಪು ಅವರದು!

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply