ಇದೇ ಮಹಾ ಸುದಿನ

ಇಂದಿರಾ (ಲೀಲಾವತಿ) ಮತ್ತು ರಾಧಾ (ಹರಿಣಿ) ಬಹುಕಾಲದ ಗೆಳತಿಯರು. ಅವರಿಬ್ಬರ ನಡುವೆ ಇವಳು ಶ್ರೀಮಂತೆ ಅವಳು ಬಡವಿ ಭೇದ ಇರಲಿಲ್ಲ. ಒಂದೇ ಮನೆಯ ಸೊಸೆಯರಾದರೆ…? ಎಂದುಕೊಳ್ಳುತ್ತಾರೆ. ಅಶ್ವಿನಿ ದೇವತೆಗಳು ‘ಅಸ್ತು’ ಎಂದಿರಬೇಕು.


ಹಣವಿಲ್ಲದ ತಂಗಿಗೆ (ಜಯಶ್ರೀ) ಆಸ್ತಿ ಕೊಟ್ಟು ಸಾಯುತ್ತಾನೆ ಅಣ್ಣ (ರಾಮಚಂದ್ರ ಶಾಸ್ತ್ರಿ). ಒಂದೇ ಷರತ್ತು. ಅವನ ಮಗಳು ಇವಳಿಗೆ ಸೊಸೆ ಆಗಬೇಕು.


ಬಡವಿ ಜಯಶ್ರೀಗೆ ಶ್ರೀಮಂತಿಕೆಯ ಮದ ಏರುತ್ತದೆ. ಆದರೆ ಹಿರಿಯ ಮಗ ಡಾ. ಆನಂದ್ (ರಾಜ್‍ಕುಮಾರ್) ಆಗಲೀ ಕಿರಿಯ ಮಗ ರಾಜ (ಉದಯಕುಮಾರ್) ಆಗಲೀ ಮೆರೆಯುವುದಿಲ್ಲ. ಅವರು ತಮ್ಮ ಕೆಲಸದಾಳು ರಂಗನನ್ನೂ (ದಿನೇಶ್) ಪ್ರೀತಿಯಿಂದ ಕಾಣುತ್ತಿರುತ್ತಾರೆ. ಈ ಸುಂದರ ಸಂಸಾರಕ್ಕೆ ಹುಳಿ ಹಿಂಡಲು, ಆನಂದನನ್ನು ಮದುವೆ ಆಗಿ ಆಸ್ತಿ ಹಿಂಪಡೆಯಲು ಬರುತ್ತಾಳೆ ಇಂದಿರಾ.


ಇದಕ್ಕೆ ಮುಂಚೆ ಹಳ್ಳಿಗೆ ಹೋದ ರಾಜ ಇವರ ಗುಮಾಸ್ತ ವಾಸುದೇವನ (ರಾಘವೇಂದ್ರ ರಾವ್) ಮಗಳು ರಾಧಳನ್ನು  ಇಷ್ಟ ಪಟ್ಟು ಮನೆಯಿಂದ ಅವರಮ್ಮನಿಂದಲೇ ಓಡಿಸಲ್ಪಟ್ಟಿರುತ್ತಾನೆ…


ಗುಂಗುರು ಕೂದಲಿನ ವಿಶಿಷ್ಟವಾದ ಹೇರ್ ಸ್ಟೈಲ್ ಅಣ್ಣಾವ್ರದ್ದು ಚಂದದ ನಟನೆ. ಪತ್ನಿಗೆ ಬುದ್ಧಿ ಹೇಳಿ, ತಾಯಿಗೆ ‘ವಿವೇಕ’ ಹೇಳಿ ಸೋತು, ಕುರುಡನಾಗಿ… ಅದ್ಭುತ ಪಾತ್ರ ನಿರ್ವಹಣೆ.


ಉದಯಕುಮಾರ್ ಲವಲವಿಕೆಯಿಂದ ನಟಿಸಿದ್ದಾರೆ. ಅವರದೇ ನಿರ್ಮಾಣ ಮತ್ತು ಹಾಡುಗಳ ಸಾಹಿತ್ಯ ಕೂಡ. ಹರಿಣಿ ಹಾಸ್ಯ ಪ್ರಧಾನ ಡಯಲಾಗ್ ಹೇಳುತ್ತ ಚಂದಾಗಿ ಇಮೋಟ್ ಮಾಡಿದ್ದಾರೆ. ಲೀಲಾವತಿ ಗರ್ವಿಷ್ಠ ಹೆಣ್ಣಾಗಿ ಕೊನೆಯ ಫ್ರೇಂನಲ್ಲಿ ಒಳ್ಳೆಯವಳಾಗಿ ಸಖತ್ ನಟನೆ. ಬಾಲಕೃಷ್ಣ ಉಮ್ಮರ್ ಪಾತ್ರದಲ್ಲಿ ರಾಜನಿಗೆ ಸಹಾಯ ಮಾಡುವ ಪಾತ್ರ. ಬಿ. ಜಯಾ ದಿನೇಶ್ ಜೋಡಿ.


ನಾನಾ ಎಮೋಷನ್‍ಗಳನ್ನು ಚೆನ್ನಾಗಿ ತೋರಿಸಿದ್ದಾರೆ ಈ 1965ರ ಚಿತ್ರದಲ್ಲಿ…

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply