ಖ್ಯಾತ ಹಿನ್ನೆಲೆ ಗಾಯಕಿ ಮಂಜುಳಾ ಗುರುರಾಜ್

ಗಾಯನದಲ್ಲಿ ಮತ್ತೊಂದು ಕಂಠ ನಮಗೆ ಮುದ ನೀಡುವಂತೆ ಹಾಡುವ ಸಾಮಥ್ಯ೯ ಇದ್ದದ್ದು ಇವರಿಗೆ, ಹಿನ್ನೆಲೆ ಗಾಯಕಿಯಾಗಿ, ಕಂಠದಾನ ಕಲಾವಿದರಾಗಿ ಎಲ್ಲರ ಮನೆ ಮಾತಾದವರು ಶ್ರೀಮತಿ ಮಂಜುಳಾ ಗುರುರಾಜ್.

ಹುಟ್ಟಿದ್ದು ಮೈಸೂರಿನಲ್ಲಿ ಸೀತಾ ಲಕ್ಷ್ಮಿ ಮತ್ತು ಡಾ. ರಾಮಣ್ಣ ರವರ ಮಗಳು, ವಿಜ್ಞಾನ ಪದವೀಧರೆ ಬೆಂಗಳೂರು ಯೂನಿವರ್ಸಿಟಿ,  ಕನಾ೯ಟಕ್, ಹಿಂದೂಸ್ಥಾನಿ ಮತ್ತು ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.

07 ಭಾಷೆಯಲ್ಲಿ 2000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ, 12500 ಕ್ಕೂ ಹೆಚ್ಚು ಹಾಡುಗಳನ್ನು 09 ಭಾಷೆಯಲ್ಲಿ ಎಲ್ಲಾ ರೀತಿಯ ಅಂದರೆ ಭಕ್ತಿ ಗೀತೆ, ಶಾಸ್ತ್ರೀಯ, ಪಾಪ್ ಶೈಲಿಯಲ್ಲಿ ಹಾಡಿರೋದು ಗಮನಾರ್ಹ.

ಮೊದಲು ಕಂಠದಾನ ನೀಡಿದ ಕನ್ನಡದ ಚಲನಚಿತ್ರ “ಆಹುತಿ “.

ದೂರದಶ೯ನ ದಲ್ಲಿ ವಾತಾ೯ ಓದುಗರಾಗಿ 14 ವಷ೯ (1983 ರಿಂದ 1998) ಮತ್ತು ಆಕಾಶವಾಣಿಯಲ್ಲಿ ನಿರೂಪಕರಾಗಿ 02 ವಷ೯ ನಡೆಸಿಕೊಟ್ಟಿದ್ದಾರೆ.

“ಇವರನ್ನು ನೋಡುವ ಸುದಿನ ಒದಗಿಬಂದದ್ದು ರವೀಂದ್ರ ಕಲಾಕ್ಷೇತ್ರದಲ್ಲಿ ಒಂದು ಸಮಾರಂಭದಲ್ಲಿ ಬಂದಿದ್ದರು ಮೊದಲು ಸಾಧ್ಯವಾಗಲಿಲ್ಲ ಕೊನೆಯಲ್ಲಿ ಅವರು ಹೊರಡುವಾಗ ಕಾರ್ ಹತ್ತಿರ ಒಂದು ಫೋಟೋ ತೆಗೆಸಿಕೊಂಡೆ”.

ಇವರು ಸಾಧನಾ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ, ಮೊದಲು ಉದ್ಘಾಟನೆ ಮಾಡಿರೋರು ಗಾನ ಕೋಗಿಲೆ ಎಸ್ ಜಾನಕಿ ರವರ ಅಮೃತ ಹಸ್ತದಿಂದ. ಜಯನಗರ ಮತ್ತು ಗಾಂಧಿ ಬಜಾರ್ ನಲ್ಲಿ ಇವರ ಶಾಖೆಗಳಿದ್ದು ಹಲವಾರು ವಿಧ್ಯಾಥಿ೯ಗಳು ಕಲಿತು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇವರು ಗುರುರಾಜ್ ರವರನ್ನು ಮದುವೆಯಾಗಿರುವರು, “ಗುರುರಾಜ್” ರವರು ಸ್ವಂತ ಸಂಗೀತ ನಿದೇ೯ಶಕರಾಗಿ ಹಲವು ಚಿತ್ರಗಳನ್ನು ನಿದೇ೯ಶಿಸಿ ಮೇಡಂ ರವರ ಜೊತೆಗೂಡಿ ಹಲವಾರು ಸಂಗೀತ ರಸಸಂಜೆ ನೀಡಿದ್ದಾರೆ. ಸಂಗೀತ ಶೋಗಳ ಆಯೋಜಕರೂ ಕೂಡ .

ಇವರಿಗೆ ಇಬ್ಬರು ಮಕ್ಕಳು “ಸಂಗೀತ ಗುರುರಾಜ್” ಮಗಳು ಹಾಗೂ ಮಗ ಸಾಗರ್. ಸಂಗೀತ ಗುರುರಾಜ್ ರವರೂ ಸಹ ಗಾಯಕಿ, ನಿರೂಪಕಿ, ಇವರು ಪ್ರೀತಿಸಿ ಮದುವೆಯಾದವರು ಸಹ ಕಲಾವಿದರು, ಗಾಯಕರು ಆದ “ರವಿಶಂಕರ್ ಗೌಡ”, ಚಿತ್ರಗಳಲ್ಲಿ ಮತ್ತು ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇವರ ಜನಪ್ರಿಯ ಧಾರಾವಾಹಿ “ಸಿಲ್ಲಿ ಲಲ್ಲಿ ” ಅಧ್ಭುತ ಮನೋರಂಜನೆ ನೀಡುವಲ್ಲಿ ಸಾಕ್ಷಿಯಾಗಿದೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply