ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ಈ 1985ರ ಚಿತ್ರದ ನಾಯಕಿ ಗಾಯತ್ರಿಯ ಪಾತ್ರವು ಮಿಸ್ಟೀರಿಯಸ್.
ಶಂತನುವನ್ನು ಮದುವೆ ಆಗುವಾಗ ಗಂಗೆ ಹಾಕಿದಂತಹ ಷರತ್ತು.
ಅಣ್ಣಾವ್ರು ಒನ್ ಲೈನರ್ಸ್ ಅದ್ಭುತವಾಗಿ ಹೇಳಿದ್ದಾರೆ. ಉದಾಹರಣೆಗೆ ತೇಜಸ್ವಿನಿ (ಗಾಯತ್ರಿ – ಬಿ. ಜಯಶ್ರೀ ಧ್ವನಿಯೊಂದಿಗೆ) ಈವತ್ತು ನಮ್ಮ ತಾಯಿ (ಲೀಲಾವತಿ) ಹತ್ರ ಮಾತಾಡ್ದೆ ಎಂದರೆ ಜಯಸಿಂಹ(ರಾಜ್ಕುನಮಾರ್) ಇಷ್ಟು ದಿನ ಮಾತು ಬಿಟ್ಟಿದ್ರಾ ಎಂದಾಗ ನಮಗೆ ನಗು ಸಹಜವಾಗಿ ಬರುತ್ತದೆ.
ಮೇಷ್ಟರಾಗಿದ್ದ ಜಯಸಿಂಹ ಗಲಾಟೆ ಮಾಡಿದ ವಿದ್ಯಾರ್ಥಿಗೆ ಹೊಡೆದಾಗ ಆ ಕಾಲೇಜಿನ ಕೆಲಸಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ರಾಮರಾಜ್ಯ ಪೇಪರಿನಲ್ಲಿ ಪತ್ರಕರ್ತ ಆಗಲು ಜಯಸಿಂಹ ಪಾಡು ಪಟ್ಟು ಮಟ್ಕಾ ಕಿಂಗ್ ರತನ್ ಲಾಲ್ನನ್ನು (ತೂಗುದೀಪ ಶ್ರೀನಿವಾಸ್) ಹೊಡೆದು ಅವನ ಗೆಳೆತನ ಸಂಪಾದಿಸುತ್ತಾನೆ. ಮೈಸೂರಿಗೆ ಹೋದಾಗ ತೇಜಸ್ವಿನಿಯನ್ನು ಪ್ರೇಮಿಸಿ ಮದುವೆ ಆಗುತ್ತಾನೆ. ಅವಳೊಂದಿಗೆ ಏಕೋ ಏನೋ ಈ ನನ್ನ ಮನವು (ರಾಜ್ಕುದಮಾರ್ ಬೆಂಗಳೂರು ಲತಾ) ಹಾಡಿದ ನಂತರ ಮದುವೆ ಆಗುತ್ತದೆ.
ಎಲ್ಲೋ ಒಂದು ಕಡೆ ತೇಜಸ್ವಿನಿಯನ್ನು ಕಣ್ಣಾರೆ ಕಂಡರೂ ಆಕೆ ಅದು ತಾನಲ್ಲ ಎಂದಾಗ ಹೇಳುವುದು ಒಂದೂ ಮಾಡುವುದು ಇನ್ನೊಂದು ಹಾಡು ಇಬ್ಬರೂ ಹಾಡುತ್ತಾರೆ (ರಾಜ್ಕು ಮಾರ್ ಬೆಂಗಳೂರು ಲತಾ). ಜಯಸಿಂಹನ ತಾಯಿ ಆದವಾನಿ ಲಕ್ಷ್ಮಿದೇವಿ ನೋಡಿ ನಗುತ್ತಾಳೆ. ಮುಖ್ಯಮಂತ್ರಿ ಚಂದ್ರು ನಗೆಮೊಗದ ವಿಲನ್ ಆಗಿರುವ ಈ ಚಿತ್ರದ ಕಥೆ ಪೊಲೀಸ್ ಅಧಿಕಾರಿ ವಿಜಯಾ ಸಾಸನೂರ. ರಂಗರಾವ್ ಸಂಗೀತ ನಿರ್ದೇಶನ. ನೋಡಿ ನೋಡಿ ಎಲ್ಲಾ ನೋಡಿ ಮತ್ತೊಂದು ಅಣ್ಣಾವ್ರ ಗೀತೆ. ಇನ್ನೊಂದು ಗೀತೆ ಬಾಳೇ ಪ್ರೇಮ ಗೀತೆ ಅಣ್ಣಾವ್ರು ಹಾಡಿರೋದು ತೆರೆ ಮೆರೆ ಸಪನೇ ಅಬ್ ಏಕ್ ರಂಗ್ ಹೈ ನೆನಪು ತಂದಿತು.
ಶನಿ ಮಹದೇವಪ್ಪ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಸದಾಶಿವ ಬ್ರಹ್ಮಾವರ ನಾನು ಗುರುತಿಸಿದ ಕೆಲವರು. ದಿವಂಗತ ಮೈಸೂರು ಲೋಕೇಶ್ ಡಿಫೆನ್ಸ್ ವಕೀಲನಾಗಿ ಸಖತ್ ಆ್ಯಕ್ಟಿಂಗ್.