ದೊಡ್ಮನೆ ನಂದಾದೀಪ

Parvatamma

ಕನ್ನಡ ಚಿತ್ರರಂಗಕ್ಕೆ ನಿಮಾ೯ಪಕರು ಮತ್ತು ನಿದೇ೯ಶಕರು ಎರಡು ಕಣ್ಣುಗಳಿದ್ದಂತೆ, ಚಿತ್ರ ಜಗತ್ತಿನಲ್ಲಿ ದಿಗ್ಗಜ ನಿರ್ದೇಶಕರು, ನಿಮಾ೯ಪಕರನ್ನು ನಾವು ಮರೆಯೋ ಹಾಗಿಲ್ಲ. ಅವರ ಸಾಲಿನಲ್ಲಿ ನಿಲ್ಲುವವರು ನಮ್ಮ ದೊಡ್ಮನೆ ನಂದಾದೀಪ ಪಾವ೯ತಮ್ಮ ರವರು, ಒಬ್ಬ ಮಹಿಳೆಯಾಗಿ 80 ಕ್ಕೂ ಹೆಚ್ಚು ಚಿತ್ರಗಳಿಗೆ ನಿಮಾ೯ಣದ ಹೊಣೆ ಹೊತ್ತು ಕಥೆ ಆಯ್ಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಚಿತ್ರ ಜಗತ್ತಿಗೆ ಅಧ್ಭುತ ಕೊಡುಗೆ ನೀಡಿದ ಹಾಗೂ ಭಾರತೀಯ ಚಿತ್ರರಂಗದಲ್ಲಿ ಇವರು ಮಾಡಿರುವ ಸಾಧನೆ ಬಹುಶಃ ಬೇರಾವ ಮಹಿಳೆ ಚಿತ್ರರಂಗದಲ್ಲಿ ಮಾಡಲು ಸಾಧ್ಯವಿಲ್ಲ ಅನ್ನುವುದು ನನ್ನ ಭಾವನೆ.

ಏನೆಂದು ಬರೆಯಲಿ ಇವರ ಬಗ್ಗೆ …..
ಒಬ್ಬ ಸಾಮಾನ್ಯ ಮನುಷ್ಯರನ್ನ ಬಂಗಾರದ ಮನುಷ್ಯ ಮಾಡಿದ ಈ ದೇವರು ,
ಕನ್ನಡ ಚಿತ್ರರಂಗದ ಜನಪ್ರಿಯ ನಿಮಾ೯ಪಕರು,
ಮುದ್ದಾದ ಮೂರು ಮುತ್ತುಗಳನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದವರು,
ಕನ್ನಡ ಚಿತ್ರರಂಗದ ಶಕ್ತಿ ದೇವತೆ ,ಹೊಸ ನಾಯಕಿಯರಿಗೆ ಮೊದಲು ಅವಕಾಶ
ನೀಡುತ್ತಿದ್ದ ವಿಶಾಲ ಹೃದಯದವರು…..

ಕನ್ನಡ ಚಿತ್ರರಂಗದಲ್ಲಿ ನಿಮಾ೯ಣ, ನಿಮಾ೯ಪಕ ಕ್ಷೇತ್ರದಲ್ಲಿ ಹೆಚ್ಚು ಹೆಸರು ಮಾಡಿರುವ ನಮ್ಮ ನಿಮ್ಮೆಲ್ಲರ ಪ್ರೀತಿಯ ಆರಾಧ್ಯ ದೈವ ಡಾ. ರಾಜ್ ಕುಮಾರ್ ರವರ ಧಮ೯ಪತ್ನಿ , ಚಿತ್ರರಂಗದ ಅನ್ನದಾತರು, ಅಭಿಮಾನಿಗಳ ಪಾಲಿನ ಅಮ್ಮ , ದೊಡ್ಮನೆ ಕುಟುಂದ ಬೆನ್ನೆಲುಬು, ಇಡೀ ಕುಟುಂಬಕ್ಕೆ ದಾರಿದೀಪ ಪಾವ೯ತಮ್ಮ ರಾಜ್ ಕುಮಾರ್ ರವರ ಪುಣ್ಯ ಸ್ಮರಣೆ ಇಂದು 💐💐💐

ಇವರ ಬಗ್ಗೆ ಹೇಳುತ್ತಿದ್ದರೆ ಪದಗಳು ಸಾಲದು ಈ ಸಂದರ್ಭದಲ್ಲಿ ಅವರು ನಿಮಾ೯ಣ ಮಾಡಿದ ಕೆಲವು ಚಿತ್ರಗಳ ಬಗ್ಗೆ ಒಂದು ನೋಟ….

ಇವರ ಮೊದಲ ಚಿತ್ರ ನಿಮಾ೯ಣ ಮಾಡೋಕೆ ಒಂದು ಘಟನೆ ಹಿನ್ನೆಲೆ ಒಂದು ಚಿತ್ರಕ್ಕಾಗಿ ಅಣ್ಣಾವೃ ಮೇಕಪ್ ರೂಮಿನಲ್ಲಿ ಪ್ರತಿದಿನದಂತೆ ಮೇಕಪ್ ಮಾಡಿಕೊಂಡು ತಮ್ಮ ಸರದಿಗಾಗಿ ಕಾದು ನಂತರ ಚಿತ್ರೀಕರಣದಲ್ಲಿ ಇರುವ ಸದಸ್ಯರಿಗೆ ಕೇಳಿದಾಗ ಇನ್ನೂ ನಿಮ್ಮ ದೃಶ್ಯ ಬಂದಿಲ್ಲ ನಂತರ ಕರೆಯುತ್ತೇವೆ ಎಂದು ತದನಂತರ ಮತ್ತೆ ಕಾದು ಇನ್ನೊಮ್ಮೆ ಕೇಳಿದಾಗ ಅಲ್ಲಿರುವರು ಅಣ್ಣಾವ್ರಿಗೆ ಆಘಾತವಾಗೊ ಸುದ್ದಿ ಹೇಳ್ತಾರೆ ನಿಮ್ಮ ದೃಶ್ಯವನ್ನು ಬೇರೆ ನಟರೊಂದಿಗೆ ಚಿತ್ರೀಕರಿಸಿದ್ದಾರೆ ಅಂದಾಗ ಅಣ್ಣಾವ್ರಿಗೆ ತುಂಬಾ ಬೇಜಾರಾಗುವುದು ಯಾರಿಗೂ ಏನೂ ಹೇಳದೆ ಮೇಕಪ್ ತೆಗೆದು ಕಾರಿನಲ್ಲಿ ಹೋಗದೇ ಬರೀ ಕಾಲು ನಡಿಗೆಯಲ್ಲಿ ಮನೆಗೆ ಬಂದು ಅಮ್ಮ ರವರಿಗೆ ಹೇಳುತ್ತಾರೆ ನಂತರ ಅಣ್ಣಾವ್ರನ್ನು ಸಮಾಧಾನ ಮಾಡಿ ತಾವೇ ಚಿತ್ರ ನಿಮಾ೯ಣ ಮಾಡುವ ಸಾಹಸಕ್ಕೆ ಕೈ ಹಾಕಿ ತೆಗೆದ ಚಿತ್ರ ತ್ರಿಮೂರ್ತಿ.

ಡಾ. ರಾಜ್ ಕುಮಾರ್ ನಟನೆಯ ಚಿತ್ರಗಳು :-

ತ್ರಿಮೂರ್ತಿ ,ಗಿರಿಕನ್ಯೆ ,ಒಲವು ಗೆಲುವು ,ಶಂಕರ್ ಗುರು ,ತಾಯಿಗೆ ತಕ್ಕ ಮಗ ,ರವಿಚಂದ್ರ
ವಸಂತಗೀತ ,ಹಾವಿನಹೆಡೆ ,ನೀ ನನ್ನ ಗೆಲ್ಲಲಾರೆ,ಭಾಗ್ಯವಂತ ,ಹೊಸಬೆಳಕು
ಹಾಲುಜೇನು ,ಚಲಿಸುವ ಮೋಡಗಳು ,ಕವಿರತ್ನ ಕಾಳಿದಾಸ ,ಕಾಮನಬಿಲ್ಲು ,ಭಕ್ತ ಪ್ರಹ್ಲಾದ
ಶ್ರಾವಣ ಬಂತು ,ಸಮಯದ ಗೊಂಬೆ ,ಯಾರಿವನು ,ಅಪೂರ್ವ ಸಂಗಮ ,ಜ್ವಾಲಾಮುಖಿ
ಧೃವತಾರೆ ,ಭಾಗ್ಯದ ಲಕ್ಷ್ಮಿ ಬಾರಮ್ಮ ,ಅನುರಾಗ ಅರಳಿತು ,ಒಂದು ಮುತ್ತಿನ ಕಥೆ
ಶೃತಿ ಸೇರಿದಾಗ ,ಶಿವ ಮೆಚ್ಚಿದ ಕಣ್ಣಪ್ಪ ,ದೇವತಾ ಮನುಷ್ಯ ,ಪರಶುರಾಮ ,ಜೀವನ ಚೈತ್ರ
ಆಕಸ್ಮಿಕ ,ಒಡಹುಟ್ಟಿದವರು ,ಶಬ್ದವೇಧಿ

ಡಾ. ಶಿವರಾಜ್ ಕುಮಾರ್ ನಟನೆಯ ಚಿತ್ರಗಳು :-

ಆನಂದ್, ರಥಸಪ್ತಮಿ, ಆಸೆಗೊಬ್ಬ ಮೀಸೆಗೊಬ್ಬ, ಮನಮೆಚ್ಚಿದ ಹುಡುಗಿ, ಅರಳಿದ ಹೂವುಗಳು, ಅದೇ ರಾಗ ಅದೇ ಹಾಡು, ಸಂಯುಕ್ತ, ಇನ್ಸ್ಪೆಕ್ಟರ್ ವಿಕ್ರಮ್, ರಣರಂಗ, ಮೃತ್ಯುಂಜಯ , ಮಿಡಿದ ಶೃತಿ, ಓಂ, ಚಿಗುರಿದ ಕನಸು, ಮೋಡದ ಮರೆಯಲ್ಲಿ, ಜನುಮದ ಜೋಡಿ, ಹೃದಯ ಹೃದಯ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಚಿತ್ರಗಳು :-

ಅಪ್ಪು, ಅಭಿ, ಆಕಾಶ್, ಅರಸು, ವಂಶಿ, ಜಾಕಿ, ವಂಶಿ , ಹುಡುಗರು, ಅಣ್ಣಾಬಾಂಡ್, ಯಾರೇ ಕೂಗಾಡಲಿ.

ರಾಘವೇಂದ್ರ ರಾಜ್ ಕುಮಾರ್ ನಟನೆಯ ಚಿತ್ರಗಳು :-

ಚಿರಂಜೀವಿ ಸುಧಾಕರ್, ನಂಜುಂಡಿ ಕಲ್ಯಾಣಿ, ಗಜಪತಿ ಗವ೯ಭಂಗ, ಗೆಲುವಿನ ಸರದಾರ, ಸೂತ್ರಧಾರ, ಅನುಕೂಲಕೊಬ್ಬ ಗಂಡ , ಅನುರಾಗದ ಅಲೆಗಳು, ಕಲ್ಯಾಣ ಮಂಟಪ,ನಾವಿಬ್ಬರು ನಮಗಿಬ್ಬರು, ಸ್ವಸ್ತಿಕ್, ಟುವ್ವಿ ಟುವ್ವಿ ಟುವ್ವಿ .

ಎಷ್ಟೋ ಅಬಲೆ ಹೆಣ್ಣು ಮಕ್ಕಳ ಪಾಲಿಗೆ ಆಶ್ರಯ ನೀಡುವ ಸಲುವಾಗಿ ಮೈಸೂರಿನಲ್ಲಿ
“ಶಕ್ತಿ ಧಾಮ” ಸ್ಥಾಪಿಸಿದವರು, ಡಾ. ರಾಜ್ ಕುಮಾರ್ ಸಿವಿಲ್ ಸವಿ೯ಸಸ್ ಸಂಸ್ಥೆಯನ್ನು ಐ. ಎ. ಎಸ್ ಓದುವ ವಿದ್ಯಾರ್ಥಿಗಳು ಪ್ರಯೋಜನ ಪಡೆದು ದೇಶದ ಉನ್ನತಿಗೆ ಸಾಕ್ಷಿಯಾಗಬೇಕೆಂದು ಪ್ರಾರಂಭಿಸಿದವರು.

ಕನ್ನಡ ಚಿತ್ರರಂಗಕ್ಕೆ ಹಲವಾರು ಹೊಸ ಮುಖಗಳನ್ನು ನಟಿಯರಾಗಿ ಪರಿಚಯಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ, ಅವರಲ್ಲಿ ಕೆಲವರು :-

ಸುಧಾರಾಣಿ, ಆಶಾರಾಣಿ, ಮಾಲಾಶ್ರೀ, ಮೋಹಿನಿ, ಪ್ರೇಮ, ಶಿಲ್ಪ, ವಿದ್ಯ ವೆಂಕಟೇಶ್, ರಕ್ಷಿತ, ರಮ್ಯ, ಅನು ಪ್ರಭಾಕರ್ ಮತ್ತು ಕೆಲವರು..

ಒಂದು ಪುಟ್ಟ ಹಳ್ಳಿ “ಸಾಲಿಗ್ರಾಮ ” ದಲ್ಲಿ ಹುಟ್ಟಿ ಬೆಳೆದು ಕನ್ನಡದ ಧೃವತಾರೆ ಅಣ್ಣಾವ್ರನ್ನ ವರಿಸಿ ಅವರ ಸುಖ ದುಃಖ ನೋವು ನಲಿವಿನಲ್ಲಿ ಬೆರೆತು ಅಣ್ಣಾವ್ರ ಸಲಹೆ ಪಡೆದು ಅವರೇ ಧೃಡ ನಿಧಾ೯ರ ಮಾಡಿ ಸ್ವತಂತ್ರವಾಗಿ ಚಿತ್ರಗಳನ್ನು ನಿಮಾ೯ಣ ಮಾಡಿ ಲಾಭ ಮತ್ತು ನಷ್ಟದ ಬಗ್ಗೆ ಲೆಕ್ಕಿಸದೆ ಎಷ್ಟೋ ಕಲಾವಿದರಿಗೆ ಆಶ್ರಯ ನೀಡಿ ಅವರ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಹೊಂದುವುದು ತಮಾಷೆಯ ಮಾತಲ್ಲ, ನಿಜಕ್ಕೂ ಇವರ ಧೈರ್ಯ ಮತ್ತು ಸಾಹಸವನ್ನು ನಾವೆಲ್ಲರೂ ಮೆಚ್ಚಲೇಬೇಕು ಏನಂತೀರಿ ಮಿತ್ರರೇ…..?

dr.rajkumar

ಬರುವಂತ ಹೊಸ ನಿಮಾ೯ಪಕರಿಗೆ ಮಾಗ೯ದಶ೯ಕರಾಗಿದ್ದರು ಅಮ್ಮ ಪಾವ೯ತಮ್ಮ ರಾಜ್ ಕುಮಾರ್ ರವರು.

ಇವರಿಗೆ ಸಂದ ಪ್ರಶಸ್ತಿ,ಪುರಸ್ಕಾರ ಹಲವು, ಅವುಗಳಲ್ಲಿ ಕೆಲವು :

ರಾಜ್ಯೋತ್ಸವ ಪ್ರಶಸ್ತಿ
ಸುವಣ೯ ಪ್ರಶಸ್ತಿ ( ಚಿತ್ರರಂಗದ ಸಾಧನೆಗಾಗಿ)

ಕನಾ೯ಟಕ ರಾಜ್ಯ ಸಿನಿಮಾ ಪ್ರಶಸ್ತಿ

ಮೊದಲ ಅತ್ಯುತ್ತಮ ಚಿತ್ರ : ಹಾಲು ಜೇನು ,ಜೀವನ ಚೈತ್ರ.
ಸಾಮಾಜಿಕ ಕಳಕಳಿ ಚಿತ್ರ : ಶಬ್ಧವೇಧಿ
ಅತ್ಯುತ್ತಮ ಚಿತ್ರ : ಬೆಟ್ಟದ ಹೂವು
ಅತ್ಯುತ್ತಮ ಚಿತ್ರ : ಭಾಗ್ಯದ ಲಕ್ಷ್ಮಿ ಬಾರಮ್ಮ
ಅತ್ಯುತ್ತಮ ಚಿತ್ರ : ಜಾಕಿ
ಅತ್ಯುತ್ತಮ ಚಿತ್ರ : ಜನುಮದ ಜೋಡಿ

ಜೀವಮಾನ ಸಾಧನೆ ಪ್ರಶಸ್ತಿ (ಫಿಲ್ಮ್ ಫೇರ್ ಪ್ರಶಸ್ತಿ) ಯನ್ನು ನೀಡಿ ಗೌರವಿಸಲಾಗಿದೆ .

ಕೊನೆಯ ಮಾತು : ಸಾಧನೆ ಮಾಡಲು ಗಂಡು ಹೆಣ್ಣು ಭೇದವಿಲ್ಲ ಸಾಧಿಸುಮ ಧೈರ್ಯ ಛಲವೊಂದಿದ್ದರೆ ಎಂತಹ ಕಾಯ೯ವನ್ನು ಸಾಧಿಸಬಹುದು, ಮಹಿಳೆಯಿಂದ ಏನುಬೇಕಾದರೂ ಮಾಡಬಹುದೆಂದು ತೋರಿಸಿಕೊಟ್ಟವರು ಅಮ್ಮ ಪಾವ೯ತಮ್ಮ ರವರು. ಮತ್ತೊಮ್ಮೆ ಈ ಕರುನಾಡಿನಲ್ಲಿ ಮತ್ತೆ ಹುಟ್ಟಿ ಬನ್ನಿ ಅಮ್ಮ 🙏

ಇಂತಿ ನಿಮ್ಮ ಬಂಧು….

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply