ಭಗತ್ ಸಿಂಗರನ್ನು ಇನ್ನೇನು ನೇಣಿಗೇರಿಸುವ ದಿನಗಳು ಹತ್ತಿರ ಬರುತ್ತಿವೆ. ಭಗತ್ ಸಿಂಗರ ತಾಯಿ ತನ್ನ ಮಗನೊಡನೆ ಕೇಳುತ್ತಾಳಂತೆ – ನಿನ್ನನ್ನು ನೇಣಿಗೇರಿಸುವ ದಿನ/ಸಮಯ ಯಾವಾಗ ಅಂತ ಗೊತ್ತಿಲ್ಲ. ನನಗೆ ಯಾರಾದ್ರೂ ಹೇಳ್ತಾರೆ ತಾನೇ? ಅಂತ ಕಣ್ಣೀರಾಕುತ್ತಾ ಕೇಳುತ್ತಾಳಂತೆ.
ಆಗ ಭಗತ್ ಸಿಂಗ್ ತನ್ನ ತಾಯಿಗೆ ಹೇಳ್ತಾರಂತೆ – ಯೋಚನೆ ಮಾಡಬೇಡಮ್ಮ. ನೇಣಿಗೆ ತಲೆಯೊಡ್ಡುವಾಗ ಕಡೆಯ ಬಾರಿಗೆ ನಾನು ಇನ್ಕ್ವಿಲಾಬ್ ಜಿಂದಾಬಾದ್ ಅಂತ ಜೋರಾಗಿ ಕೂಗ್ತೇನೆ. ಆ ಕೂಗಿನ ಶಕ್ತಿ ಎಷ್ಟಿರುತ್ತೆ ಅಂದರೆ ನಿನಗಷ್ಟೇ ಅಲ್ಲ. ಇಡೀ ಭಾರತಕ್ಕೇ ಕೇಳಿಸುತ್ತದೆ ಅಂತ ದಿಟ್ಟತನದಿಂದ ನುಡಿದಿದ್ದರಂತೆ.
ತೆಲುಗು ಸಿನಿ ಸಾಹಿತಿ ಸುದ್ದಾಲ ಅಶೋಕ್ ತೇಜರವರು ಈ ಘಟನೆಯನ್ನು ಆಧಾರವಾಗಿಟ್ಟುಕೊಂಡು ಟಾಗೋರ್ ಚಿತ್ರದ ನೇನು ಸೈತಂ ಹಾಡಿನಲ್ಲಿ ಸಾಲೊಂದನ್ನು ಅದ್ಭುತವಾಗಿ ರಚಿಸಿದ್ದಾರೆ.
“భగత్ సింగ్ కడసారి పలికిన ఇంక్విలాబ్ శబ్దానివా”
ರುದ್ರವೀಣ ಚಿತ್ರದ ಮೂಲ ಹಾಡಿನ ರಚನೆಕಾರರು ಸಾಹಿತ್ಯ ದಿಗ್ಗಜ ಶ್ರೀ ಶ್ರೀ ರವರು. ಅದೇ ಪಲ್ಲವಿಯನ್ನು ತೆಗೆದುಕೊಂಡು, ಆದಷ್ಟು ಒತ್ತಕ್ಷರಗಳಿಂದಲೇ ಕೂಡಿ ಹಾಡು ರಚಿಸಿ ಅಂತ ಹೇಳಿದ್ದ ನಿರ್ದೇಶಕರ ಮಾತಿಗೂ ಬೆಲೆಕೊಟ್ಟು, ಮೂಲ ಸಾಹಿತ್ಯಕ್ಕೂ ಕುಂದುಂಟಾಗದಂತೆ ರಚಿತವಾದ ಅದ್ಭುತ ಹಾಡು. ಸಾಲು-ಸಾಲಿಗೂ ಒತ್ತಕ್ಷರಗಳಿಂದ ಕೂಡಿದ ಹಾಡಿಗೆ ಜೀವ ತುಂಬಿದ್ದು – ಎಸ್ಪಿಬಿ. ಹಾಡಿನ ಲಿಂಕ್ ಇಲ್ಲಿದೆ ನೋಡಿ
ಮೂಲ (ರುದ್ರವೀಣ) ಹಾಡಿನ ಲಿಂಕ್ ಇಲ್ಲಿದೆ ;