M.G ಶ್ರೀನಿವಾಸ್ ನಟಿಸಿ ಸಿರ್ದೇಶಿಸಿದ “ಬೀರ್ಬಲ್ಟ್ರೈಯಾಲಜಿ” ಸಿನಿಮಾ ಥೀಯೇಟರ್ ಮತ್ತು ಓ.ಟಿ. ಟಿ ಯಲ್ಲಿ ದೊಡ್ಡ ಸದ್ದು ಮಾಡಿತ್ತು.
ಸಿನಿಮಾನ ನೋಡಿದ ಪ್ರತಿಯೊಬ್ಬರು ಭೇಷ್ ಅಂದ್ರು, amazon ಪ್ರೈಮ್ ನಲ್ಲಿ ಇದ್ದ ಕಾರಣ ಕನ್ನಡಿಗರಷ್ಟೇ ಅಲ್ಲದೆ ಭಾರತದಾದ್ಯಂತ ಎಲ್ಲಾ ಭಾಷಿಕರು ವೀಕ್ಷಿಸಿ ಸಿನಿಮಾನ ಇಷ್ಟ ಪಟ್ಟರು. ವಿಷಯ ಏನಂದ್ರೆ ಈಗ ಈ ಸಿನಿಮಾನತೆಲುಗಿನಲ್ಲಿ ರೀಮೇಕ್ಮಾಡ್ತಿದ್ದಾರೆ. ತೇಲುಗಿನ ನಟರಾದ “ಸತ್ಯದೇವ್” ಮುಖ್ಯ ಭೂಮಿಕೆಯಲ್ಲಿಕಾಣಲಿದ್ದು ಶರಣ್ ಕೋಪಿಸೆಟ್ಟಿ ಎನ್ನುವರು ನಿರ್ದೇಶಿಸಲಿದ್ದಾರೆ, ಈ ಹಿಂದೆ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾವನ್ನುತೆಲುಗಿನಲ್ಲಿ ಡೈರೆಕ್ಟ್ ಮಾಡಿದ್ದು ಇವರೇ. ಶ್ರೀನಿ ಶ್ರಮಕ್ಕೆ ಒಳ್ಳೆ ಪ್ರತಿಫಲ ದೊರಕ್ತಾ ಇದೆ ಅನ್ನೋದಂತೂ ಸತ್ಯ
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಕನ್ನಡ ರಂಗಭೂಮಿಯನ್ನು ದಕ್ಷಿಣ ಭಾರತದಲ್ಲಿ ವಿಜ್ರಂಭಿಸುವಂತೆ ಮಾಡಿದ ಮಹಾನ್ ರಂಗ ಕಲಾವಿದ ಎ.ವಿ.ವರದಾಚಾರ A.V. ವರದಾಚಾರ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ರಂಗಭೂಮಿ ಕಂಡ ಶ್ರೇಷ್ಠ ರಂಗ ಕಲಾವಿದರಾಗಿದ್ದು…