ಭಾರತ ಚಿತ್ರರಂಗದ ಸಪ್ತ ಭಾಷಾ ನಟ ಅನಂತನಾಗ್

( ಮುಂದುವರೆದ ಭಾಗ )

ಎರಡು ವರ್ಷಗಳ ನಂತರ  ೧೯೭೫ ರಲ್ಲಿ ತೆರೆ ಕಂಡ  ಜಿ.ವಿ.ಅಯ್ಯರ್ ನಿರ್ದೇಶನದ ಹಂಸಗೀತೆ ಚಿತ್ರದ ಮೂಲಕ ಇವರ ಜನಪ್ರಿಯತೆ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ  ಇನ್ನೂ ಎತ್ತರದ ಮಟ್ಟಕ್ಕೆ ಬೆಳೆಯಿತು. ೧೯೭೭ ರಲ್ಲಿ  ತೆರೆ ಕಂಡ ದೊರೈ ಭಗವಾನ್ ನಿರ್ದೇಶನದ ಬಯಲು ದಾರಿ ಚಿತ್ರದಲ್ಲಿ ನಟಿಸಿದ ನಂತರ ವಂತೂ ಇವರು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ನೆಲೆಸಿದ್ದಾರೆ.

ಆದರೆ ಇವರ ಕ್ರೇಜ್ ಹೇಗಿದೆಯೆಂದರೆ  ಇವರು ಬಿಟ್ಟು ಇನ್ಯಾರು ಮಾಡಲು ಸಾಧ್ಯವಿಲ್ಲದಿರುವ ಪಾತ್ರಗಳಿಗೆ ಇವರೇ ಬೇಕು ಎಂದು ಬಯಸುವವರು, ಹುಡುಕಿಕೊಂಡು ಬರುವ ಬೇರೆ ಬೇರೆ ಭಾಷೆಗಳ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕರು, ನಿರ್ದೇಶಕರು ದೇಶದ ಎಲ್ಲ ಕಡೆಯಲ್ಲೂ ಇದ್ದಾರೆ. ಈ ಚಿತ್ರಗಳೆಲ್ಲ ಯಾರೋ ಒಬ್ಬ ನಟರು  ಬಂದು ನಟಿಸಿ ಹೋದರು ಎಂಬಂತಹ ಪಾತ್ರಗಳಲ್ಲದೆ ರಾಷ್ಟ್ರ ಮಟ್ಟದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನವನ್ನು ಕಂಡು ಗಮನ ಸೆಳೆದ ಚಿತ್ರಗಳಾಗಿವೆ.

ಇವರು ನಿರ್ವಹಿಸಿದ ಕೆಲವು ಚಿತ್ರಗಳಲ್ಲಿನ  ಪಾತ್ರಗಳು ಬೇರೆಯವರಿಗೆ ಸಾಧ್ಯ ಎಂದು ಊಹಿಸಲು ಕಷ್ಟವಾಗುತ್ತದೆ. ಇವರು ನಟಿಸಿದ ಹಂಸಗೀತೆ, ಕನ್ನೇಶ್ವರ ರಾಮ,ಬರ, ಅವಸ್ಥೆ, ಉದ್ಭವ, ಮಿಂಚಿನ ಓಟ, ಗಣೇಶನ  ಮದುವೆ, ಗಣೇಶನ ಗಲಾಟೆ, ಕಂಡು ಹೋದ ಕೊಂಡು ಹೋದ, ಗಣೇಶ ಸುಬ್ರಹ್ಮಣ್ಯ, ಬೆಂಕಿಯ ಬಲೆ, ಚಂದನದ ಗೊಂಬೆ, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ಮತದಾನ, ಯಾರಿಗೂ ಹೇಳ್ಬೇಡಿ, ಅನುರೂಪ, ರಾಮಾಪುರದ ರಾವಣ, ಹೊಸ ನೀರು, ವಿಶ್ವ( ಘಾಯಲ್ ಹಿಂದಿ ಚಿತ್ರದ ರಿಮೇಕ್), ಅರ್ಜುನ್, ಜನ್ಮ ಜನ್ಮದ ಅನುಬಂಧ, ವಿಷ್ಣು ಸೇನಾ ( ಠಾಗೂರ್ ತೆಲುಗು ಚಿತ್ರದ ರಿಮೇಕ್), ಕಳೆದ ವರ್ಷ ತೆರೆ ಕಂಡ ಆಯುಷ್ಮಾನ್ ಭವ, ಇದೇ ವರ್ಷ ತೆರೆ ಕಂಡ ನಿತೀನ್ ಅಭಿನಯದ ಭೀಮ ತೆಲುಗು ಚಿತ್ರದಲ್ಲಿ  ವಿಶೇಷ ಪಾತ್ರದಲ್ಲಿ  ಕೂಡ ನಟಿಸಿದ್ದಾರೆ. 

ಇಂತಹ ಚಿತ್ರಗಳಲ್ಲಿ ಕೇವಲ ಅನಂತನಾಗ್,ಕಮಲ್ ಹಾಸನ್ ರಂತಹ ಕೆಲವೇ ನಟರಿಗೆ ಮಾತ್ರ ಸಾಧ್ಯವಿದೆ. ಎಷ್ಟು  ವಿಭಿನ್ನವಾಗಿ  ಬೇಕಿದ್ದರೂ ಬಳಸಿಕೊಳ್ಳಲು ಇವರ ನಟನೆಯ ನಾ ನಿನ್ನ ಬಿಡಲಾರೆ ಚಿತ್ರಕ್ಕಿಂತಲೂ ಉತ್ತಮ ಉದಾಹರಣೆ ಬೇಕಾಗಿಲ್ಲ. ಈ ಚಿತ್ರದಲ್ಲಿ ಇವರ ಪಾತ್ರವನ್ನು ವರ್ಣಿಸಲು ಸಾಧ್ಯವೇ?

ಬಯಲು ದಾರಿ ಈ ಚಿತ್ರವು ಕೂಡ ಎವರ್ ಗ್ರೀನ್ ಬ್ಲಾಕ್ ಫಾಸ್ಟರ್ ಈ ಚಿತ್ರದ ಯಶಸ್ಸನ್ನು ವರ್ಣಿಸಲು ಸಾಧ್ಯವಿಲ್ಲ. ಈ ಚಿತ್ರದ ನಂತರ ಇವರ ಜನಪ್ರಿಯತೆ ಯಾವ ಮಟ್ಟದಲ್ಲಿತ್ತೆಂದರೆ  ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಜೋಡಿ ದೊರೈ ಭಗವಾನ್ ಇವರ ನಾಯಕತ್ವದಲ್ಲಿ  ಒಂದರ ನಂತರ ಒಂದು ಸುಂದರ ಚಿತ್ರಗಳನ್ನು ನಿರ್ಮಿಸಿದರು.

ಅದರಲ್ಲೂ  ಚಿತ್ರ ರಂಗದ ಟಾಪ್ ಜೋಡಿಯೆಂದರೆ ಅನಂತ ನಾಗ್ ಮತ್ತು ಲಕ್ಷ್ಮಿ ಜೋಡಿ ಎಂದರೆ ತಪ್ಪಾಗಲಾರದು. ಈ ಜೋಡಿ ಚಿತ್ರಪ್ರೇಮಿಗಳಿಗೆ ಮಾಡಿದ ಮೋಡಿ ಸಾಮಾನ್ಯವೇನು ಅಲ್ಲ.  ಬೆಂಕಿಯ ಬಲೆ, ಚಂದನದ ಗೊಂಬೆ, ಇಬ್ಬನಿ ಕರಗಿತು, ಮುದುಡಿದ ತಾವರೆ ಅರಳಿತು,ನಾ ನಿನ್ನ ಬಿಡಲಾರೆ ಅದರಲ್ಲೂ ಈ ಜೋಡಿಯು ನಿಜ ಜೀವನದಲ್ಲಿ ಕೂಡ ಸತಿಪತಿ ಎಂಬ ಭಾವನೆ ಬರುವಷ್ಟು ಸುಂದರ ದಂಪತಿಯ ಸಾಮಾನ್ಯ ಜನರ ಜೀವನವನ್ನು ಈ ಪಾತ್ರದಲ್ಲಿ ಮಾಡಿ ತೋರಿಸಿದ್ದಾರೆ. ಮತ್ತು ಈ ಚಿತ್ರಗಳು ಇಂದಿಗೂ ಅವಿಸ್ಮರಣೀಯವಾಗಿವೆ. 

ಇವರು ಸ್ಪುರದ್ರೂಪಿ ನಟರಾದರೂ ಎಂದಿಗೂ ಕೂಡ ಸಹ  ನಟರೊಂದಿಗೆ ನಟಿಸಲು ನಿರಾಕರಿಸಲಿಲ್ಲ. ಚಾಲೆಂಜ್ ಗೋಪಾಲಕೃಷ್ಣ, ಗೋಲ್ ಮಾಲ್ ರಾಧಾಕೃಷ್ಣ, ಸುಖ ಸಂಸಾರಕ್ಕೆ ೧೨ ಸೂತ್ರಗಳು, ಹೆಂಡ್ತಿಗೇಳ್ಬೇಡಿ, ನಾನೇನು ಮಾಡಲಿಲ್ಲ, ಎರಡನೇ ಮದುವೆ, ಮತ್ತೊಂದು ಮದುವೆನಾ? ಮಿ.ಗರಗಸ,ಗಣೇಶ ಸುಬ್ರಹ್ಮಣ್ಯ, ಗಾಯತ್ರಿ ಮದುವೆ ಸೇರಿ ಅನೇಕ ಹಾಸ್ಯ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಇವರ ವಿಜ್ರಂಭಣೆ ಚಿತ್ರ ರಂಗದಲ್ಲಿ ಇನ್ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ.

ಇವರು ಎಷ್ಟು ದೊಡ್ಡ ನಟರಾದರೂ ಇತರೆ ನಾಯಕರು ಪ್ರಧಾನವಾಗಿದ್ದ  ಡಾ.ರಾಜಕುಮಾರ್ ಅಭಿನಯದ ಕಾಮನ ಬಿಲ್ಲು, ಡಾ.ವಿಷ್ಣುವರ್ಧನ್ ಜೊತೆ ನಿಷ್ಕರ್ಷ,ಜೀವನದಿ, ವಿಷ್ಣು ಸೇನಾ, ಮತ್ತೆ ಹಾಡಿತು ಕೋಗಿಲೆ, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ರಣಧೀರ, ಶಾಂತಿ ಕ್ರಾಂತಿ (ಈ ಚಿತ್ರದಲ್ಲಿ ಮುಖ್ಯ ಖಳನಾಯಕನ ಪಾತ್ರ ವಹಿಸಿದ್ದಾರೆ).

ಮುಂಗಾರು  ಮಳೆ, ಗಾಳಿಪಟ, ಗೂಗ್ಲಿ, ಅರಮನೆ,ಶ್ರೀ ಸೇರಿ ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದರೂ ಪ್ರತಿಯೊಂದು ಚಿತ್ರಗಳ ಚೌಕಟ್ಟಿನಲ್ಲಿ ಎದ್ದು ಕಾಣುತ್ತಾರೆ.

ಭಾರತದ  ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುವ ಇವರ ಸಹೋದರ ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಇವರು ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಯಾವುದೇ ಪಾತ್ರವಾದರೂ ಅದರಲ್ಲಿ ಚಿಕ್ಕ ಸ್ಥಳವಿದ್ದರೂ ಆ ವ್ಯಾಪ್ತಿಯನ್ನು ವಿಸ್ತರಿಸುವ  ಇವರು ಪ್ರೇಕ್ಷಕನ ಅನುಭವಕ್ಕೆ ತರಬಲ್ಲ ಅಸಾಮಾನ್ಯ ನಟರು.

ಎಲ್ಲಿ ಹೇಗೆ ಇದ್ದರೂ ಯಾವುದೇ ಪಾತ್ರವಿದ್ದರೂ ಅಥವಾ ಕಠಿಣ ಪಾತ್ರವಾಗಿದ್ದರೂ ಯಾವುದೇ ಕಟ್ಟು ಪಾಡುಗಳಿಲ್ಲದೆ ಲೀಲಾಜಾಲವಾಗಿ ಸಹಜವಾಗಿ, ಸರಳವಾಗಿ ನಟಿಸುವ ಕಲೆ ಎಲ್ಲರಿಗೂ ಒಲಿದು ಬರುವುದಿಲ್ಲ ಎನ್ನುವುದು ಅಷ್ಟೇ ಸತ್ಯವಾಗಿದೆ. ಇವರ ಪತ್ನಿಯ ಹೆಸರು ಗಾಯತ್ರಿ, ಇವರು ಕೂಡ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ. ೧೯೮೭ ರಲ್ಲಿ  ಇವರನ್ನು ವಿವಾಹವಾಗಿರುವ ಇವರಿಗೆ ಅದಿತಿ ಅನಂತನಾಗ್ ಎಂಬ ಮಗಳಿದ್ದಾಳೆ. ಇವರ ಸಹೋದರ ಕರಾಟೆ ಕಿಂಗ್ ಎಂದು ಪ್ರಸಿದ್ಧಿ ಪಡೆದಿದ್ದ ನಟ ಶಂಕರನಾಗ್ ಕುರಿತು ತಿಳಿಯದ ಕನ್ನಡಿಗರೇ ಇಲ್ಲ. ಕನ್ನಡ ಚಿತ್ರಗಳಲ್ಲಿನ ಪೋಲೀಸ್ ಪಾತ್ರಗಳಿಗೆ ಒಂದು ಗತ್ತು,ಪವರ್,ಖದರ್ ತಂದು ಕೊಟ್ಟ ಕೀರ್ತಿಯೂ ಇವರದ್ದಾಗಿದೆ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply