ಜೂನ್ 24ರಿಂದ ಬಿಡುಗಡೆಗೊಂಡ ತುರ್ತುನಿರ್ಗಮನ ಚಿತ್ರವೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ, ವಿಭಿನ್ನ ಕಥೆ ಹೊಂದಿರುವ ಈ ಚಿತ್ರವೂ, ಮನುಷ್ಯನ ಹುಟ್ಟು ಮತ್ತು ಸಾವಿಗೆ ಯಾವುದೇ ತುರ್ತು ನಿರ್ಗಮವಿರುವುದಿಲ್ಲ, ಒಂದು ಪಕ್ಷ ತುರ್ತು ನಿರ್ಗಮ ವಿದ್ದರೆ ಅದು ಹೇಗಿರುತ್ತದೆ, ಎಂಬ ಪ್ರಶ್ನೆಗೆ ಉತ್ತರ ಈ ಚಿತ್ರವಾಗಿದೆ.
ಜೀವನದಲ್ಲಿ ಗೊತ್ತು ಗುರಿ ಇಲ್ಲದ ಯುವಕನೊಬ್ಬ, ತನ್ನ ಬಾಳಿನ ಕೊನೆಯ ಕ್ಷಣ ಬಂದಾಗ ಹೇಗೆವರ್ತನೆ ಮಾಡುತ್ತಾನೆ , ಎಂದು ಈ ಚಿತ್ರದಲ್ಲಿ ಕಾಲ್ಪನಿಕವಾಗಿ ತೋರಿಸಿದ್ದಾರೆ, ಹುಟ್ಟು ಸಾವು ಎಲ್ಲವನ್ನು ಅದರದೇ ದೃಷ್ಟಿಕೋನದಲ್ಲಿ ಹಾಸ್ಯಭರಿತವಾಗಿ ಈ ಚಿತ್ರದಲ್ಲಿ ಮೂಡಿಬಂದಿದೆ, ಒಮ್ಮೆ ಎಲ್ಲರು ಕುಟುಂಬ ಸಮೇತರಾಗಿ ಈ ಚಿತ್ರವನ್ನು ನೋಡಬಹುದಾಗಿದೆ.
ಈ ಚಿತ್ರದ ತಾರಾಬಳಗದಲ್ಲಿ ಸುನಿಲ್ ರಾವ್, ಸುಧಾ ರಾಣಿ , ಸಂಯುಕ್ತ ಹೆಗ್ಡೆ, ಅಚ್ಯುತ್ ಕುಮಾರ್, ರಾಜ್ ಬಿ ಶೆಟ್ಟಿ, ಹಿತ ಚಂದ್ರಶೇಖರ್, ಮುಂತಾದವರು ನಟಿಸಿದ್ದಾರೆ, ಈ ಚಿತ್ರವನ್ನು ಹೇಮಂತ್ ಕುಮಾರವರು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ, ಒಟ್ಟಿನಲ್ಲಿ ಈ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ, ಈ ಚಿತ್ರಕ್ಕೆ ಚಿತ್ರೋದ್ಯಮ,ಕಾಂ ರವರಿಂದ ಶುಭ ಆರೈಕೆ.