ಪ್ರಖ್ಯಾತ ಖಳನಟ ತೂಗುದೀಪ ಶ್ರೀನಿವಾಸರ ಮುದ್ದಿನ ಮಗ ಲೈಫನ್ನು ಚಾಲೆಂಜಾಗಿ ತಗೊಂಡು ಹಲವಾರು ಕಷ್ಟಗಳನ್ನು ಅನುಭವಿಸಿ ಚಾಲೆಂಜಿಗೆ ಚಾಲೆಂಜ್ ಹಾಕಿ ಅಭಿಮಾನಿಗಳ ಹೃದಯ ಗೆದ್ದ ಪ್ರೀತಿಯ ದಾಸ, ಚಾಲೆಂಜಿಂಗ್ ಸ್ಟಾರ್ ದಶ೯ನ್ 🌹
ಲೈಟ್ ಬಾಯ್ ನಿಂದ ಶುರುವಾದ ಸಿನಿಪಯಣ ಹಲವಾರು ಏಳು ಬೀಳುಗಳನ್ನು ದಾಟಿ ಅಭಿಮಾನಿಗಳ ಹೃದಯದಲ್ಲಿ ಮೆರೆಯುತ್ತಿರುವ ಪ್ರೀತಿಯ ಚಕ್ರವತಿ೯.
ಕನ್ನಡ ಚಿತ್ರರಂಗದ ಅಮಿತಾಬ್ ಬಚ್ಚನ್ ಹೈಟು, ಆರಡಿ ಕಟೌಟು, ಅಭಿಮಾನಿಗಳ ನಲ್ಮೆಯ ದಚ್ಚು.
ನೊಂದವರ ಬಾಳಿಗೆ ಬೆಳಕಾಗುವ, ಪ್ರೀತಿಯ ರೆಬಲ್ ಸ್ಟಾರ್ ಅಂಬಿರವರ ದತ್ತುಪುತ್ರ, ಕಣ೯ನ ಹಾದಿಯಲ್ಲೇ ಸಾಗುವ ಪ್ರೀತಿಯ ಯಜಮಾನ ಯಾರೇನೇ ಹೇಳಿದರೂ ತನ್ನ ಪಾಡಿಗೆ ಇರೋ ಒಂದು ಜೀವನವನ್ನು ತಮಗೆ ಇಷ್ಟವಾದ ರೀತಿಯಲ್ಲಿ ಬದುಕುವುದು ಮತ್ತು ತನ್ನ ಮುದ್ದಾದ ಪ್ರಾಣಿಗಳ ಒಡೆಯ, ಕಾರ್ ರೇಸ್ ಎಂದರೆ ಬಲು ಪ್ರೀತಿ, ಸ್ನೇಹಕ್ಕೆ ಬೆಲೆಕೊಡುವ ಗುಣವಂತ ಈ ದಶ೯ನ.
ದೇವರಮಗದಲ್ಲಿ ಸಣ್ಣ ಪಾತ್ರ ಶಿವಣ್ಣ ಮತ್ತು ಅಂಬರೀಷ್ ರವರ ಜೊತೆ, ಮೆಜೆಸ್ಟಿಕ್ ಚಿತ್ರದಲ್ಲಿ ಪೂಣ೯ ಪ್ರಮಾಣದ ನಾಯಕದ ಜೊತೆಗೆ ವಿಭಿನ್ನ ಅಭಿನಯ ಪ್ರೇಕ್ಷಕರ ಮನಗೆದ್ದರು, ತಾನು ಪ್ರೀತಿಸಿದ ಹುಡುಗಿಗೆ ತನ್ನ ಪ್ರೀತಿಯನ್ನು ಹೇಳಲಾಗದೆ ತೊಳಲಾಡಿದ ಮತ್ತು ರೌಡಿಸಂ ಕಥೆಯುಳ್ಳ ಪ್ರೇಮ್ ನಿದೇ೯ಶನದ ಚಿತ್ರ ಕರಿಯ, ಹಳ್ಳಿ ಹುಡುಗ ಗಾಯಕನಾಗುವ ಲಾಲಿಹಾಡು, ನಮ್ಮ ಪ್ರೀತಿಯ ರಾಮು, ಬುಲ್ ಬುಲ್, ಗಜ, ಸಾರಥಿ, ಕಲಾಸಿಪಾಳ್ಯ, ಅನಾಥರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಲಂಕೇಶ್ ಪತ್ರಿಕೆ, ಅಣ್ಣಾವೃ, ಶಾಸ್ತ್ರೀ, ಅಯ್ಯ, ಸ್ವಾಮಿ, ಸುಂಟರಗಾಳಿ ,ದತ್ತ, ಭೂಪತಿ, ಸ್ನೇಹನ ಪ್ರೀತಿನ, ಇಂದ್ರ, ನವಗ್ರಹ, ಯೋಧ, ಪೊಕಿ೯,ಬಾಸ್,ಪ್ರಿನ್ಸ್,ಚಿಂಗಾರಿ, ಅಂಬರೀಷ, ಮಿ. ಐರಾವತ, ಬೃಂದಾವನ, ವಿರಾಟ್, ಜಗ್ಗುದಾದ, ಚಕ್ರವರ್ತಿ, ತಾರಕ್, ಯಜಮಾನ ಇನ್ನೂ ಮುಂತಾದ ಹಲವು ಚಿತ್ರಗಳಲ್ಲಿ ನಟಿಸುತ್ತಾ ವಿಶಿಷ್ಟ ಸ್ಥಾನವನ್ನು ಪಡೆದವರು.
“ವಿಜಯಲಕ್ಷ್ಮಿ” ರವರನ್ನು ವಿವಾಹವಾಗಿ ಮುದ್ದಿನ ಮಗ ಮಿನಿ ದಶ೯ನ್ “ವಿನೀಷ್ ” ರವರ ಜೊತೆ ಸುಖ ಜೀವನ ನಡೆಸುತ್ತಿದ್ದಾರೆ, ಇವರ ಕುಟುಂಬ ಸದಾ ಹೀಗೆ ಇರಲಿ ಎನ್ನೋಣ 🌹
“ಯಾರೇ ಬಂದರೂ ಎದುರ್ಯಾರೆ ನಿಂತರೂ
ಪ್ರೀತಿ ಹಂಚುವ ಯಜಮಾನ
ಕೂಗಿ ಕೂಗಿ ಕೇಳುತೈತೆ
ಇಂದೂ ಝಮಾನ
ನಿಂತಾ ನೋಡು ಯಜಮಾನ “
“ನನ್ನಲಿ ನಾನಿಲ್ಲ ಮನದಲಿ ನೀನೆಲ್ಲ
ನೀನಿಲ್ಲದೇ ಏನು ಇಲ್ಲ
ನೀನೇಕೆ ನಾನಾದೆ ನಾನೇಕೆ ಹೀಗಾದೆ “
“ಸುಮ್ನೆ ಸುಮ್ನೆ ಸುಮ್ನೆ
ಚಂಕಾಯ್ಸಿ ಬುಡ್ತೀಯ
ತಳುಕು ಬಳುಕು ತೋರಿಸಿ
ನನ್ನ ಜೀವ ಹಿಂಡ್ತೀಯಾ “
“ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗರ ತೇರು
ನಮದು ಬೆವರಿನ ಬಂಡಿ
ನಾವೇ ನರನಾಡಿ ರಾಜಧಾನಿಗೆ
ಅತಿರಥ ಮಹಾರಥ ಸಾರಥಿ “
“ನಿಲ್ಲೇ ನಿಲ್ಲೇ ಕಾವೇರಿ
ಬಿಟ್ಟು ಕೋಡೋದಿಲ್ಲ ಯಾಮಾರಿ
ನಾ ಒಳ್ಳೆ ಹುಡುಗ ಅಲ್ವ
ನಾ ನೋಡಕ್ ಚೆಂದಾಕಿಲ್ವ
ನನ್ ಪ್ರೀತಿ ಮಾಡಕಿಲ್ವ
ಬುಲ್ ಬುಲ್ ಮಾತಾಡಕಿಲ್ವ “
“ಯಾಕೋ ಏನೋ ಯಾಕೋ ಏನೋ
ಜೊತೆಯಲೇ ಬೆರೆತೆವು
ಜಗವನೇ ಮರೆತೆವೂ
ನನಗೆ ನೀನು ಇನ್ನೂ ನಿನಗೆ ನಾನು “
“ಒಂದು ಮಳೆ ಬಿಲ್ಲು ಒಂದು ಮಳೆ ಮೋಡ
ಹೇಗೋ ಜೊತಾಗಿ ತುಂಬಾ ಸೊಗಸಾಗಿ
ಏನನೋ ಮಾತಾಡಿದೆ
ಭಾವನೇ ಬಾಕೀ ಇದೆ “
“ಎಂದೋ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಪ್ರೀತಿಗಾಗಿ ಸೋತೇ “
“ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೊ ಸಮಯ
ಏಳು ಜನ್ಮಕೂ ಏಳೇಳು ಜನ್ಮಕೂ
ನೀನೆ ನನ್ನ ಪ್ರೀತಿ ಗೆಳೆಯ
ಎದೆ ತುಂಬಿ ಹಾಡಿದೆನು
ಈ ಮೊದಲ ಹಾಡನ್ನು
ಮನಸು ಬರೆದಾ ಕಾವ್ಯ
ಅಪಿ೯ಸುವೆ ನಿನಗಿನ್ನು
ಈ ಜೀವಕೇ ನೀನಾದೆ ಚಂದ್ರಮನು
ಹೊಸ ಚೈತ್ರ ತಂದವನು “
ಇವರ ಮುಂಬರುವ ಚಿತ್ರ ರಾಬಟ್೯ ಮತ್ತು ಹಲವಾರು ಚಿತ್ರಗಳು ಯಶಸ್ವಿಯಾಗಲಿ ಎಂದು ಹಾರೈಸೋಣ
ಚಂದದ ಬರವಣಿಗೆ ಸರ್… ನಿಮ್ಮ ಬರಹಗಳು ಹೀಗೆಯೇ ಮುಂದುವರೆಯಲಿ..
Thank u.
Please tell your friends to read the articles also regularly.