ಎಲ್ಲಾ ನಾಯಕ ನಟರು, ಕಲಾವಿದರಿಗೂ ಅವರೆ ನಟಿಸಿದ ಅತಿ ಇಷ್ಟದ ಸಿನಿಮಾದ ಹಾಡು ಇದ್ದೆ ಇರುತ್ತದೆ. ಅವರ ಮನಸ್ಸಿಗೆ ಬದುಕಿನ ಶೈಲಿಗೆ ಬಹಳ ಹತ್ತಿರವಾಗಿರುತ್ತದೆ,ಕಾರಣ ಅದರಲ್ಲಿ ಇರುವ ಸಾಹಿತ್ಯ ಅದರ ಒಳ ಅರ್ಥ,ಸಂಗೀತ ಸಂಯೋಜನ.
ಸಂದರ್ಶನ ಒಂದರಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರನ್ನು ನಿಮ್ಮ ಇಷ್ಟದ ಹಾಡು ಯಾವುದು ಎಂದು ಕೇಳಿದಾಗ ..ಅವರು ಥಟ್ ಅಂತ ನೀಡಿದ ಉತ್ತರ ಸುಪ್ರಭಾತ ಚಿತ್ರದ “ನನ್ನ ಹಾಡು ನನ್ನದು“
“ನೂರು ಜನ ಬಂದರೂ ನೂರು ಜನ ಹೋದರು ನನಗೆ ನಾನೆ ಸರಿಸಾಟಿಯು ….ನಾನೆಂದು ಸುಖ ಜೀವಿಯು”
ನನ್ನ ಬದುಕಿನ ಆಂಥೇಮ್ ಅದು.. ನನ್ನ ಜೀವನದ ಔಟ್ ಲೈನ್ ,ಸಂಕ್ಷಿಪ್ತವಾಗಿ ನನ್ನ ಬದುಕನ್ನು ನನಗೆ ಪರಿಚಯಿಸುವಸಾಲುಗಳು ಅವು .. ಆ ಹಾಡನ್ನು ನನಗೆ ನೀಡಿದ ಸಾಹಿತಿ ಚಿ.ಉದಯಶಂಕರ ಮತ್ತು ಹಾಡಿದ ಗೆಳೆಯ S.P. ಬಾಲಸುಬ್ರಹ್ಮಣ್ಯಂಅವ್ರಿಗೆ ನಾನು ಚಿರ ಋಣಿ ಎಂದರು.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ
ಪರೀಕ್ಷೆಯಲ್ಲಿ ಫೇಲ್ ಆದಂತಹ ಮಾಹನುಭಾವರ ಮನೋವೇದನೆಯನ್ನ ಕುರಿತು, ಹಾಸ್ಯಭಾರಿತವಾಗಿ ಹಾಡು ರಚಿಸುವ ಉದಾರವಾದ ಮನೋಭಾವ “ಯೋಗರಾಜ್ ಭಟ್” ಅವರಿಗೆ ಮಾತ್ರ ಇರಲು ಸಾಧ್ಯ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ….…
“ಕನಾ೯ಟಕದ ರಾಜ ರಾಣಿ ದೊಡ್ಮನೆ ಆದಶ೯ ದಂಪತಿಗಳು ಜನಪ್ರಿಯ ಮಾದರಿ ಜೋಡಿಗಳು ರಾಜರತ್ನರ ಹೆತ್ತವರು ಮುತ್ತುರಾಜ್ ಹಾಗೂ ಪಾರ್ವತಮ್ಮನವರ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಪುಟ್ಟಸ್ವಾಮಯ್ಯನವರಿಗೆ ಅಪ್ಪಾಜಿಗೌಡರ ಮಗಳಾದ…