ಹಣ್ಣೆಲೆ ಚಿಗುರಿದಾಗ

ತ್ರಿವೇಣಿ ಅವರ ಈ ಕಾದಂಬರಿ ಆಗಿನ ಕಾಲಕ್ಕೇ ಅಂತರ್ಜಾತೀಯ ವಿವಾಹ ಮತ್ತು ವಿಧವಾ ವಿವಾಹದ ಬಗೆಗೆ ಬರೆಯಲ್ಪಟ್ಟಿತ್ತು. 1968ರಲ್ಲಿ ಬಂದ ಸಿನಿಮಾ.
ವಿಶೇಷವೆಂದರೆ ದುಷ್ಟ ಪಾತ್ರಗಳಲ್ಲಿ ಜನಪ್ರಿಯರಾದ ದಿನೇಶ್, ರಂಗ, ಪಾಪಮ್ಮ, ಇಂದಿರಾ ಜಾರ್ಜ್, ಬಿ ವಿ ರಾಧ, ಜಯಶ್ರೀ (ಕೆಲವು ಸಿನಿಮಾಗಳಲ್ಲಿ ದುಷ್ಟ ಪಾತ್ರ) ಎಲ್ಲರೂ ಇಲ್ಲಿ ಭಾರೀ ಒಳ್ಳೆಯ ಜನ. ನಾಗೇಂದ್ರ ರಾಯರು ಕೊನೆಯಲ್ಲಿ ಚಿಗುರುವ ಹಣ್ಣೆಲೆ. ಅರುಣ್ ಕುಮಾರ್ (ಗುರುರಾಜುಲು ನಾಯ್ಡು) ಮತ್ತು ನವನಟಿ ಪ್ರೇಮಲತಾಗೆ ಎರಡು ಹಾಡುಗಳಿವೆ. ಇದೇ ಹುಡುಗ ಇದೇ ಸೊಬಗ(ಪಿಬಿಎಸ್ ಎಲ್ ಆರ್ ಈಶ್ವರಿ) ಹಾಲಲಿ ಮಿಂದವಳೋ (ಬಾಲಮುರಳೀಕೃಷ್ಣ ಮತ್ತು ಬೆಂಗಳೂರು ಲತಾ).. ಪಿ. ಸುಶೀಲ ಮತ್ತು ಎಲ್ ಆರ್ ಈಶ್ವರಿ (ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ) ಮತ್ತು ಅತ್ಯಂತ ಜನಪ್ರಿಯ ಹೂವೂ ಚೆಲುವೆಲ್ಲಾ ನಂದೆಂದಿತು… ಹಾಗೂ ಸುಂದರ ಜೋಗುಳ ‘ಬಾರ ಒಲಿದು ಬಾರ ನಿದಿರೆ ತಾರಾ ಕಂದಗೆ’.

ರಾಜ್‌ಕುಮಾರ್ ಗಂಡನಾಗಿ, ವಿಧುರನಾಗಿ, ಪುಟ್ಟ ಮಂಜನ(ಬೇಬಿ ರಾಣಿ) ತಂದೆಯಾಗಿ, ವಿಧವೆ ಕಲ್ಪನಾ ಕಡೆಗೆ ಮೊದಲು ಅನುಕಂಪ ನಂತರ ಪ್ರೇಮ ತೋರುವ ಪ್ರೇಮಿಯಾಗಿ ಬಹಳ ಸೊಗಸಾಗಿ ನಟಿಸಿದ್ದಾರೆ. ಕಲ್ಪನಾಗೆ ಕಲ್ಪನಾನೇ ಸಾಟಿ.

ನಾನು 5ನೇ ತರಗತಿಯಲ್ಲಿದ್ದಾಗ ‘ಹೂವೂ ಚೆಲುವೆಲ್ಲಾ ನಂದೆಂದಿತು’ ಶೂಟಿಂಗ್ ಮೈಸೂರು ಯಾದವಗಿರಿಯಲ್ಲಿನ ಮನೆಯೊಂದರ ಮುಂದೆ ನೋಡಿದ್ದೆ. ಮತ್ತೊಂದು ಸೀರಿಯಸ್ ಡಯಲಾಗ್ ಸೀನ್ ಕಲ್ಪನಾ ಮತ್ತು ರಾಜ್ ಮಧ್ಯೆ ನೋಡಿದ್ದೆ.

ತ್ರಿವೇಣಿ ಅವರ ಕಾದಂಬರಿ ಓದಿದಂತೆಯೇ ಅನ್ನಿಸಿತು ನನಗೆ ಈ ಚಿತ್ರ ನೋಡಿದಾಗ.

ಲೇಖಕರು: ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply