ನಾ ನಿನ್ನ ಮರೆಯಲಾರೆ

ಅಣ್ಣಾವ್ರ ಚಿತ್ರಗಳಲ್ಲಿ ಇದೊಂದು ಚಿತ್ರ ಕೂಡ ನನ್ನ ಫೇವರಿಟ್.

ಆನಂದ್ ಅವರ ನಾನೂ ನೀನೂ ಜೋಡಿ ಎನ್ನುವ ಸಣ್ಣಕಥೆಯ ಆಧಾರ ಈ ಚಿತ್ರ.

ಲಕ್ಷ್ಮಿ ನಾಯಕಿಯಾಗಿ ಬರುತ್ತಾರೆ ಎಂದೊಡನೆ ಏನೋ ಖುಷಿ. ಏಕೆಂದರೆ ಚಟ್ಟಕ್ಕಾರಿ ಎನ್ನುವ ಮಲಯಾಳಂ ಸಿನಿಮಾವನ್ನು ಈಕೆಗಾಗಿ ನೋಡಿದ್ದೆ. ಒಂದು ಅಕ್ಷರವೂ ಆಗಿರಲಿಲ್ಲ. ಚಿತ್ರ ನೋಡಿ ಓಹೋ ಹೀಗೆ ಹೇಳಿರಬಹುದು ಈ ಪಾತ್ರ ಎನ್ನುವ ಊಹೆ ಮಾತ್ರವೇ!

ಗೋವಾದಲ್ಲಿ ಸಿ.ಐ.ಡಿ. 999ನಲ್ಲಿ ಬಾಂಡ್ ಪ್ರಕಾಶನ ಪ್ರೇಯಸಿಯಾಗಿ ಕಾಣಿಸಿಕೊಂಡ ಮೇಲೆ, ಬಹಳ ವರ್ಷಗಳ ನಂತರ ಲಕ್ಷ್ಮಿ ಕನ್ನಡದಲ್ಲಿ!

ಅಣ್ಣಾವ್ರ ನಟನೆಗೆ ಅವರೇ ಸಾಟಿ. ಪ್ರಥಮ ಭಾಗದ ಪ್ರೇಮಿಯ ಪಾತ್ರವಾಗಲೀ, ಎರಡನೇ ಭಾಗದ ಆ್ಯಕ್ಟಿಂಗ್ ತಂದೆಯಾಗಲೀ ಬಹಳವೇ ಚೆನ್ನ.

ಬಹುಶಃ ಈ ಚಿತ್ರದ ಹಾಡುಗಳದ್ದೇ ಇರಬೇಕು, ರೆಕಾರ್ಡ್ ಕಂಪೆನಿಯವರು ಹಾಡಿನ ಮೊದಲ ಸಾಲುಗಳನ್ನು ಪತ್ರಿಕೆಯಲ್ಲಿ ಮುದ್ರಿಸಿದ್ದರು.

ಈ ಚಿತ್ರ ಬಿಡುಗಡೆಯಾದಾಗ ನನಗೆ 19 ವರ್ಷಗಳು. ಕಲ್ಪನೆಗಳು ಗರಿಗೆದರುತ್ತಿದ್ದ ಕಾಲ!

ಸಿಹಿ ಮುತ್ತು ಎಂಬ ಹೆಸರು ಓದಿ ಇದು ಖಂಡಿತ ಅಣ್ಣಾವ್ರು ಲಕ್ಷ್ಮಿ ಯುಗಳಗೀತೆ ಎಂದುಕೊಂಡು ಬಹಳ ಬೋಲ್ಡ್ ಡೈರೆಕ್ಟರ್ ಎಂದುಕೊಂಡೆವು. ಸಿನಿಮಾ ನೋಡಿದಾಗ ಅದು ಮಗುವಿಗೆ ಎಂದು ತಿಳಿಯಿತು! ಅದಾಗಲೀ, ನನ್ನಾಸೆಯಾ ಹೂವೆ ಆಗಲೀ, ಎಲ್ಲೆಲ್ಲಿ ನೋಡಲಿ, ನಿನ್ನ ಮರೆಯಲಾರೆ… ವಾಹ್ ಇಂದಿಗೂ ಎಲ್ಲ ಹಾಡುಗಳ ಎಲ್ಲ ಪದಗಳೂ ಕಂಠಪಾಠವಾಗಿವೆ.

ಲೀಲಾವತಿಯವರ ಅತ್ತೆ ಪಾತ್ರವು ಅವರಿಗೆ ರಾಜ್ಯ ಪ್ರಶಸ್ತಿಯನ್ನು ಕೊಡಿಸಿತೆಂದು ನೆನಪು. ಯಾವಾಗಲೂ ಸಾಫ್ಟ್ ಕ್ಯಾರೆಕ್ಟರ್ ಮಾಡುತ್ತಿದ್ದ ಲೀಲಾವತಿಯವರಿಗೆ ಇದೊಂದು ಮೇಕ್ ಓವರ್ ಪಾತ್ರ.

ಕಥೆಯೇ ಎಷ್ಟು ಚೆನ್ನಾಗಿ ಇತ್ತೆಂದರೆ ಬೇರೆ ಯಾವ ಹೆಚ್ಚಿನ ಪಾತ್ರಗಳೂ ಇಲ್ಲ. ಬಾಲಕೃಷ್ಣ, ವಾದಿರಾಜ್ ಇವರ ಪಾತ್ರಗಳು ‘ಸಮಯ ಸರಿದಿದೆ’ ಎಂದು ಹೇಳಲು ಮಾತ್ರ ಇವೆ ಎನ್ನಿಸುತ್ತದೆ.

ಆಗಿನ ಪ್ರಜಾವಾಣಿಯಲ್ಲಿ ಲಕ್ಷ್ಮಿಯವರ ಗರಿಮುರಿಯಾದ ಬಿಸ್ಕಿಟ್ನಂಂತಹ ಸೌಂದರ್ಯ ಎಂದು ವಿಮರ್ಶೆ ಮಾಡಿದ್ದ ನೆನಪಿದೆ!

‘ಶುಕ್ರವಾರ ಹಾಫ್ ಡೇ ಇಲ್ವಾ?’ ಎಂದು ಉಷಾ ಆನಂದನನ್ನು ಕೇಳುವ ಡಯಲಾಗ್ ಇಂದಿಗೂ ನೆನಪಿದೆ!

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply