ರಾಯರ ಸೊಸೆ

ನನ್ನಷ್ಟೇ ಹಳೆಯ ಸಿನಿಮಾ (1957). ತೊಂಬತ್ತಾರು ನಿಮಿಷದ ಸಿನಿಮಾ ಇದು. ಬಹುಶಃ ಆಗಿನ ಕಾಲದ ನಾಟಕ ಇರಬಹುದು.

ರಾಜ್ ಕುಮಾರ್ ಒಬ್ಬ ವೈದ್ಯ. ಆತನ ಹೆಂಡತಿ ಪಂಢರೀಬಾಯಿ. ರಾಜ್ ಗೆಳೆಯ ಕಲ್ಯಾಣ ಕುಮಾರ್. ಆತನ ಹೆಂಡತಿ ಮೈನಾವತಿ. ಇವಳನ್ನು ಕಂಡರೆ ಅತ್ತೆಗೆ (ಜಯಶ್ರೀ) ಬಲು ಪ್ರೀತಿ. ಆದರೆ ಮಾವ ರಾಯರಿಗೆ (ರಾಮಚಂದ್ರ ಶಾಸ್ತ್ರಿ) ವರದಕ್ಷಿಣೆ ಪಿಶಾಚಿ ಮೆಟ್ಟಿಕೊಂಡು ಸೊಸೆಯನ್ನು ಬಾಕಿ ಹಣ ತರಲು ತವರಿಗೆ ಅಟ್ಟುತ್ತಾನೆ.


ಆಗ ಶುರು ನಾಟಕ. ರಾಜ್ ಸಾರಥ್ಯದಲ್ಲಿ ಕಲ್ಯಾಣ್ ಹುಚ್ಚನಂತೆ ನಟಿಸಿ… ಚುಟುಕಾಗಿ ಇದು ಕಥೆ. ರಾಯರು ತಮ್ಮ ಸೊಸೆಯನ್ನು ಒಪ್ಪಿಕೊಂಡಾಗ ಖೇಲ್ ಖತ್ಮ್ ದುಕಾನ್ ಬಂದ್.

ನರಸಿಂಹರಾಜು, ರಮಾದೇವಿ, ಬಾಲಕೃಷ್ಣ,ಎಂ ಎನ್ ಲಕ್ಷ್ಮೀದೇವಿ ಕೂಡ ಇದ್ದಾರೆ.
ಶಾಸ್ತ್ರೀಯ ರಾಗದ ಅನೇಕ ಹಾಡುಗಳಿವೆ.

ನರಸಿಂಹರಾಜು ಹಾಡು ಅವರ ನಟನೆಯಿಂದಲೂ ನಗೆ ಬರಿಸುತ್ತದೆ. ರಾಜ್ ಕುಮಾರ್ ಎರಡು ಮೂರು ವೇಷ ಧರಿಸುತ್ತಾರೆ. ಹಾಸ್ಯ ರಸ ಅವರ ಮಾತುಗಳಲ್ಲಿ ಇದೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply