ಸಿ.ಐ.ಡಿ. ರಾಜಣ್ಣ

ಹೆಸರೇ ಹೇಳುವಂತೆ ರಾಜ್ (ರಾಜ್‍ಕುಮಾರ್) ಒಬ್ಬ ಸಿ.ಐ.ಡಿ. ಮಿಲಿಟರಿ ಆಫೀಸರ್ ಮಗ. ರಾಜ್ ತಮ್ಮ ಮೋಹನ್ (ರಂಗ) ಒಬ್ಬ ಪೈಲಟ್. ಅವನು ಕಳ್ಳ ಸಾಗಾಣಿಕೆದಾರರ ಗುಂಪಿಗೆ ಸೇರಿರುತ್ತಾನೆ. ಅಶ್ವತ್ಥ್ ಒಬ್ಬ ದಾನವೀರಶೂರ. ಅವನ ಮಕ್ಕಳು ರೇಣುಕ(ರಾಜಶ್ರೀ), ದೇವಿಕ(ಪ್ರೇಮಲತ). ಅಶ್ವತ್ಥ್ ಒಬ್ಬ ಕಳ್ಳ ಸ್ವಾಮೀಜಿಯ ಶಿಷ್ಯನಾಗಿರುತ್ತಾನೆ. (ದಿನೇಶ್ ಹೊರಗೆ ಸ್ವಾಮಿ, ಒಳಗೆ ಕಳ್ಳ ಸಾಗಣೆದಾರ). 

ನೃತ್ಯವೊಂದರಲ್ಲಿ ಭಾಗವಹಿಸುವಾಗ ರೇಣುಕ ಮತ್ತು ರಾಜ್ ಪರಸ್ಪರ ಆಕರ್ಷಿತರಾಗುತ್ತಾರೆ.

ದ್ವಾರಕೀಶ್‍ಗೆ ಕಿವಿ ಕೇಳಿಸುವುದಿಲ್ಲ. ಕ್ಯಾಟಿ ಹಿಡಿದು ಕಳ್ಳರಿಗೆ ಕಲ್ಲು ಹೊಡೆಯುತ್ತಿರುತ್ತಾನೆ. ಅವನು ರಾಜ್ ಅಸಿಸ್ಟೆಂಟ್ ಆಗುತ್ತಾನೆ.

ಕಥೆಯಲ್ಲಿ ಅನೇಕ ಸಲ ಕಳ್ಳರು ರಾಜ್‍ಗೆ ಮೋಸ ಮಾಡುತ್ತಾರೆ. ಅವನ ಕಣ್ಣೆದುರೇ ವಜ್ರಗಳ ವಿನಿಮಯ ಆಗುತ್ತದೆ. ಕೆಲವೊಮ್ಮೆ ಸಿಐಡಿ ರಾಜ್ ಅವರುಗಳಿಗೆ ಚಳ್ಳೇಹಣ್ಣು ತಿನ್ನಿಸುತ್ತಾನೆ.

ಅಶ್ವತ್ಥ್ ತಾನು ಸಿಲುಕಿಕೊಂಡ ಬಲೆಯ ಬಗ್ಗೆ ತನ್ನ ಹೆಣ್ಮಕ್ಕಳಿಗೆ ಹೇಳಿದಾಗ ರೇಣುಕಾ ಕಳ್ಳರ ಗುಂಪು ಸೇರಿ, ರಾಜ್‍ಗೇ ಒಮ್ಮೆ ಮೋಸ ಮಾಡಲು ಯತ್ನಿಸುತ್ತಾಳೆ. ಇನ್ನೊಮ್ಮೆ… ಬೇಡ ಬಿಡಿ. ಬೋರ್ ಆಗದ, ಆಗಿನ ಕಾಲದ ಮುಖ ತೋರಿಸದ ಬಾಸ್ ಇರುವ ಕಥೆ. ನೋಡಿ ಎಂಜಾಯ್ ಮಾಡಬಹುದು.

ಕಥೆಯಲ್ಲಿ ರಾಜ್ ಅನೇಕ ವೇಷಗಳನ್ನು ಧರಿಸುತ್ತಾರೆ. ಒಂದೆರಡು ಹಾಡು ಬಲು ಮಧುರ.

ನನ್ನಲ್ಲೇನೋ ಹೊಸ ಭಾವನೆ… ಎಂತಹ ಮಧುರ ಗೀತೆ! ಪಿಬಿಎಸ್, ಪಿ.ಸುಶೀಲ ಮತ್ತು ಎಸ್‍ಪಿಬಿ. ಬಾಲು ಧ್ವನಿಯಂತೂ ಎಳೆಯದಾಗಿ ಬಲು ಚೆನ್ನ.

ನೀ ಬಳುಕಿ ಬಳುಕಿ ನಡೆವಾಗ, ಅಮ್ಮ ತಾಯೆ ಅಮ್ಮ ಕಾಯೆ ಪಿ.ಬಿ.ಎಸ್ ಹಾಡುಗಳು. 

ಒಂದು ವಿಶಿಷ್ಟ ಹಾಡೆಂದರೆ ‘ನೀ ಆಡುವ ಮಾತು ಕನ್ನಡ’. ಹಾಡಿದ್ದು ಎಸ್‍ಪಿಬಿ. ಅದಕ್ಕೆ ತುಟಿ ಚಾಲನೆ ಮಾರುವೇಷದ ರಾಜ್! ವಾಹ್! ಇದೊಂದು ವಿಶೇಷ ಗೀತೆ ಎಂದೆನಿಸಿತು ನನಗೆ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply