ಇನ್ನೊಮ್ಮೆ ಟೋಪಿ ಹಾಕ್ತಾರ “ಟೋಪಿವಾಲಾ”

ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್( ಟೋಪಿ) ಹಾಕಿದ್ರೆ, ಅದಕ್ಕಿರೊಗಮ್ಮತ್ತೇಬೇರೆ. ಅವರೆ ನಟಿಸಿ, ನಿರ್ದೇಶಿಸಿರುವ ಸಿನಿಮಾಗಳಿಗೆ ದೊಡ್ಡ ಅಭಿಮಾನಿಗಳ ಪಡೆಯೇ ಇದೆ. A, ಉಪೇಂದ್ರ ಉಪೇಂದ್ರ-2 ಹಾಗು ಸೂಪರ್ ಸಿನಿಮಾಗಳನ್ನ ಕಂಡು ಇಡಿ  ಭಾರತೀಯ ಚಿತ್ರರಂಗವೇ ಶ್ಲಾಘಿಸಿದೆ. ಮತ್ತೆ ಉಪೇಂದ್ರ ಡೈರೆಕ್ಟರ್ ಕ್ಯಾಪ್ ಹಾಕಿ ಹೊಸ ಸಿನಿಮಾ ಮಾಡಲು ಚಿಂತಿಸುತ್ತಿದ್ದಾರೆ.

ರಾಜಕೀಯ ಬೇಡ ಪ್ರಜಾಕೀಯ ಬೇಕು ಅನ್ನೋ ಸಂದೇಶವನ್ನು ರವಾನಿಸಿದ್ರು ಅವರ “ಸೂಪರ್” ಚಿತ್ರದಲ್ಲಿ.ಸದ್ಯಕ್ಕೆ ಉಪೇಂದ್ರ ಒಬ್ಬ ನಟ ಮಾತ್ರವಲ್ಲ ಒಬ್ಬ ರಾಜಕಾರ್ಣಿಯು ಕೂಡ.  ಸಾಮಾಜಿಕ ಕಥೆ  ಆಧಾರಿತ ಸಿನಿಮಾ ತಯಾರು ಮಾಡುವುದಾಗಿ ತಿಳಿದು ಬಂದಿದೆ.ಈ ಬಾರಿ ಉಪೇಂದ್ರ ಅವರು ಪ್ರೇಕ್ಷಕರಿಗೆ ಸಿನಿಮಾ ಮಾಡಲ್ಲ ಬದಲಿಗೆ ರಾಜ್ಯದ ಪ್ರಜೆಗಳಿಗೆ ಅರಿವು ಮೂಡಿಸುವ ಸಿನಿಮಾ ಮಾಡ್ತಾರೆ…

ರಿಯಲ್ ಸ್ಟಾರ್ ಉಪೇಂದ್ರ ಅವರು ಎಲ್ಲೇ ಹೋದರು ಅಭಿಮಾನಿಗಳು ಕೇಳುವ ಸಾಮಾನ್ಯ ಪ್ರಶ್ನೆಯಂದರೆ ” ಅಣ್ಣ ನೀವು ಮಾತ್ತೇ ಯಾವಾಗ ಡೈರೆಕ್ಟ್ಮಾಡ್ತೀರಾ”?

ಅದಕ್ಕೆ ಅವರ ಉತ್ತರ ಅವರ ಸಿನಿಮಾದ ರೀತಿಯಲ್ಲೆ ಸ್ವಲ್ಪ ಗೊಂದಲವಾಗಿಯೇ ಇರುತ್ತದೆ . ” ಕಾದು ನೋಡಿ”

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply