Happy Birthday to ಅಮಿತಾಬ್ ಬಚ್ಚನ್

Amitabh Bachan

ಭಾರತೀಯ ಚಿತ್ರರಂಗದಲ್ಲಿ ಹೆಸರುವಾಸಿಯಾದ ನಟರು, ನಿಮಾ೯ಪಕರು, ಟಿವಿ ನಿರೂಪಕರು, ಹವ್ಯಾಸಿ ಗಾಯಕರು, ಎಷ್ಟೋ ಜಾಹಿರಾತಿನಲ್ಲಿ ಭಾಗವಹಿಸಿದವರು ಮಾಜಿ ರಾಜಕಾರಣಿ ಬಾಲಿವುಡ್ ಕಾ ಅಸಲಿ ಆರಡಿ ಕಟೌಟ್, ಡಾ ರಾಜ್ ಕುಮಾರ್ ರವರ ಅಭಿಮಾನಿ
ಶ್ರೀ ಅಮಿತಾಬ್ ಬಚ್ಚನ್ ಸರ್ ರವರಿಗೆ ಜನುಮ ದಿನದ
ಶುಭಾಶಯಗಳು 🌹💐💜

“ಸ್ಯಾಂಡಲ್ವುಡ್ ಗೆ ದೊಡ್ಮನೆ ಫ್ಯಾಮಿಲಿ ಫೇಮಸ್
ಬಾಲಿವುಡ್ ಗೆ ಬಚ್ಚನ್ ಫ್ಯಾಮಿಲಿ ಫೇಮಸ್ “

Amitabh Bachan
Amitabh Bachan

ನಿಮ್ಮ ವಿಭಿನ್ನ ನಡೆಯ ಧಾಟಿ,ನೃತ್ಯ, ಆ ಕಂಚಿನ ಕಂಠದಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದೀರಿ, ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಿ ನಿಮ್ಮ ನಟನೆ ಚತುರತೆಯನ್ನು ಪರಿಚಯಿಸಿದ್ದೀರಿ, ಕೌನ್ ಬನೇಗ ಕರೋಡ್ ಪತಿ ಆಟವನ್ನು ಕಿರುತೆರೆಯಲ್ಲಿ ನಿಮ್ಮಿಂದ ನೋಡೋ ಭಾಗ್ಯ ಮತ್ತು ಕನ್ನಡದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಡೆಸಿಕೊಡುವಾಗ ನಿಮ್ಮನ್ನು ಭೇಟಿ ಮಾಡಿ ಆಶೀವಾ೯ದ ಪಡೆದದ್ದು, ನೀವು ಅಣ್ಣಾವ್ರ ಮೇಲಿಟ್ಟ ಅಭಿಮಾನ ಅನನ್ಯ, ಎಷ್ಟೇ ದೊಡ್ಡ ನಟರಾದರೂ ಅಹಂ ಇಲ್ಲದೆ ಗೌರವ ನೀಡಿದಿರಿ, ಅಣ್ಣಾವ್ರನ್ನು ಭೇಟಿ ಮಾಡಿದಾಗ ನೀವು ಹೊಂದಿಕೊಳ್ಳುವ ರೀತಿ, ಭಕ್ತಪ್ರಹ್ಲಾದ ಚಿತ್ರೀಕರಣ ವೇಳೆ ಅಣ್ಣಾವ್ರನ್ನು ಭೇಟಿ ಮಾಡಿದ ಕ್ಷಣಗಳು. ನಿಮ್ಮ “ಕೂಲಿ ” ಚಿತ್ರದಲ್ಲಿ ಅಣ್ಣಾವ್ರ “ಜೇಡರ ಬಲೆ “ಚಿತ್ರ ಪೋಸ್ಟರ್ ಕಾಣಿಸಿರುವುದು ಅಭಿಮಾನದ ಸಂಕೇತ.

ಪ್ರೀತಿಯ ಶಿವಣ್ಣ ರವರಿಗೆ ಕಲ್ಯಾಣ್ ಜುವೆಲರ್ಸ್ ಜಾಹಿರಾತಿನಲ್ಲಿ ತಂದೆ ಮಗನ ವಾತ್ಸಲ್ಯ ನೋಡಿ ಖುಷಿ ಪಟ್ಟೆವು. ನೀವು ದೊಡ್ಮನೆ ಕುಟುಂಬದ ಮೇಲೆ ಇಟ್ಟಿರುವ ಅಭಿಮಾನಕ್ಕೆ 🌹

ಹಿಂದಿ ಚಿತ್ರರಂಗದಲ್ಲಿ ಬರೋ ಎಷ್ಟೋ ಹೊಸ ಕಲಾವಿದರಿಗೆ ನೀವು ಸ್ಪೂರ್ತಿ ಆದಿರಿ, ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿ ನಿಮ್ಮನ್ನು ಇನ್ನೂ ಹೆಚ್ಚು ಚಿತ್ರಗಳಲ್ಲಿ ನೋಡುವ ಆಸೆ ಇರುವ ಅಭಿಮಾನಿಯಲ್ಲಿ ನಾನೂ ಒಬ್ಬ.

ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ, ಇನ್ನೂ ನೂರು ಕಾಲ ಸುಖವಾಗಿ ಬಾಳಿ 🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply