ಆಪರೇಷನ್ ಡೈಮಂಡ್ ರ‍್ಯಾಕೆಟ್

ಆಪರೇಷನ್ ಡೈಮಂಡ್ ರ‍್ಯಾಕೆಟ್


1978ರ ಈ ದೊರೆ ಭಗವಾನ್ ಜೋಡಿಯ ಕಥೆ ಚಿತ್ರಕಥೆ ನಿರ್ಮಾಣ ಮತ್ತು ನಿರ್ದೇಶನದ ಚಿತ್ರ ಬಾಂಡ್ ಶೈಲಿಯ ಚಿತ್ರಗಳಲ್ಲಿ ನಾಲ್ಕನೆಯದು. ಜೇಡರಬಲೆ, ಗೋವಾದಲ್ಲಿ ಸಿಐಡಿ 999,ಆಪರೇಷನ್ ಜ್ಯಾಕ್‌ಪಾಟ್‌ನಲ್ಲಿ ಸಿಐಡಿ 999 – ಹಿಂದಿನ ಈ ಮೂರು ಸಿನಿಮಾಗಳು ಕಪ್ಪು ಬಿಳುಪು. ಇದು ವರ್ಣಮಯ. ಆ ಮೂರರಲ್ಲಿ ಇದ್ದ ಒಂದು ಪಾತ್ರ ಇಲ್ಲದ್ದು ತಿಳಿಯುತ್ತದೆ. ಆ ಪಾತ್ರ ಟ್ಯಾಕ್ಸಿ ಡ್ರೈವರ್ ಬೇಬಿ (ನರಸಿಂಹರಾಜು). 

ಜಯಂತಿ ಲಕ್ಷ್ಮಿ ರೇಖಾ (ಹಿಂದೀ ನಟಿ) ನಂತರ ಇಲ್ಲಿ ನಾಯಕಿ ಪದ್ಮಪ್ರಿಯ. 

ರೂಥ್‌ಲೆಸ್ ಕೊಲೆಗಳು, ಕ್ಲಬ್ ಡ್ಯಾನ್ಸ್‌ಗಳು, ಬಾಸ್, ಸ್ಲೈಡಿಂಗ್ ಬಾಗಿಲುಗಳು, ಡೆಥ್ ಛೇಂಬರ್, ಕಾರ್ ಛೇಸ್, ಬಾಂಡ್ ಸ್ಟೈಲಿನ ಛೇಸ್ ಮಾಡೋ ಕಾರ್ ಟಯರ್ ಬರ್ಸ್ಟ್ ಆಗಕ್ಕೆ ಮೊಳೆಗಳೆಸೆಯೋದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚೋದು, ಮೋಟರ್ ಬೋಟ್ ಛೇಸ್, ನಾವಿಕ ಇಲ್ಲದ ಮೋಟರ್ ಬೋಟಿನಲ್ಲಿ ಫೈಟು… ಜೊತೆಗೆ ಹಾಡುಗಳು… 

ಅಣ್ಣಾವ್ರು ಪೂರ್ಣ ಆಂಗ್ಲ ಹಾಡು If you come today it’s too early… ವಾಣಿ ಜಯರಾಂ ಹಾಡು ಸೀಮಾ ಕಪೂರ್ ಕ್ಯಾಬರೆಗೆ ನೋಡಿದೆಯಾ ನೀ ಚೆಲುವ ತನುವ… ಅಣ್ಣಾವ್ರು ಜಾನಕಿಯಮ್ಮನವರ ಯುಗಳಗೀತೆ ಅಲ್ಲಿ ಇಲ್ಲಿ ನೋಡುವೆ ಏಕೆ. ಇದರಲ್ಲಿ ನೇಪಾಳದ ಕಠ್ಮಂಡು ದರ್ಶನ. ಬಿಸಿ ಬಿಸಿ ಕಜ್ಜಾಯ (ಹಾವಿನ ಹೆಡೆ) ಥರದ ಹಾಡಿನ ಮಧ್ಯೆ ಫೈಟಿಂಗ್ ನೀ ನಡುಗುವೆ ಏಕೇ… ಅಣ್ಣಾವ್ರ ಅಭಯ ಮತ್ತು ಜಾನಕಿಯಮ್ಮನವರ ಹಮ್ಮಿಂಗ್… 

ಜಿ ಕೆ ವೆಂಕಟೇಶ್ ಅವರ ನೇಪಥ್ಯ ಸಂಗೀತ ಮತ್ತು ಬೇಕಾದ ಕಡೆ ಸೈಲೆನ್ಸ್ ಎರಡೂ ಚೆನ್ನ. 

ನೀಗ್ರೋ ಜಾನಿ, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಟೈಗರ್ ಪ್ರಭಾಕರ್, ರಾಜಾನಂದ್, ಚೇತನ್ ರಾಮರಾವ್ ನಾನು ಗುರುತಿಸಿದ ಕೆಲವರು. 

ಅಣ್ಣಾವ್ರು ವೆರೀ suave. ಈಜುಕೊಳ ಮತ್ತು ಬೆಡ್ ಬಿಟ್ಟರೆ ಮಿಕ್ಕೆಲ್ಲಾ ಕಡೆ ಸೂಟ್‌ಗಳಲ್ಲಿ ಮಿಂಚಿದ್ದಾರೆ. ಅವರ ಕಂಗಳಲ್ಲಿನ ಕೆಚ್ಚು ಬ್ಯೂಟಿಫುಲ್!

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply