ಕರುಳಿನ ಕರೆ

ಪುಟ್ಟಣ್ಣ ಕಣಗಾಲ್ ಮತ್ತು ರಾಜ್‌ಕುಮಾರ್ ಜೋಡಿಯ ಮೂರು ಚಿತ್ರಗಳಲ್ಲಿ ಇದು ಎರಡನೆಯದು. (1970)


ದಿನೇಶ್ ಕಾಮಕ್ಕೆ ಗರ್ಭಿಣಿಯಾದ ಶಾಂತಿಯ ಮಗ ಲಾರಿಯ ಅಡಿಯಲ್ಲಿ ಹುಟ್ಟುತ್ತಾನೆ.. ಹುಟ್ಟಿದೊಡನೆ ತಾಯಿಯನ್ನು ಕಳೆದುಕೊಂಡ ಪರಮೇಶಿಯನ್ನು (ರಾಜ್‍ಕುಮಾರ್) ಆರ್ ನಾಗೇಂದ್ರ ರಾವ್ ಬೆಳೆಸುತ್ತಾರೆ. ಪರಮೇಶಿ ಲಾರಿ ಡ್ರೈವರ್ ಆಗುತ್ತಾನೆ. ಇವನಿಗೆ ಇಷ್ಟ ಆಗೋದು ಕಳ್ಳೇಕಾಯಿ ಮಾರೋ ಪಾರ್ವತಿ (ಕಲ್ಪನಾ).


ದಿನೇಶ್ – ಗೌರಿಯರ(ಆದವಾನಿ ಲಕ್ಷ್ಮೀದೇವಿ) ಮಗ ಮೋಹನ (ಆರ್ ಎನ್ ಸುದರ್ಶನ್) ನಾಗೇಂದ್ರ ರಾವ್ ತಮ್ಮನ ಮಗಳನ್ನು (ರೇಣುಕಾ) ಪ್ರೀತಿಸುತ್ತಾನೆ.
ದುಷ್ಟ ದಿನೇಶ್‌ಗೆ ಬುದ್ಧಿ ಕಲಿಸುವ ಈ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಪುಟ್ಟಣ್ಣ ಕಣಗಾಲ್.

ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಬಹುತೇಕ ಗೀತೆಗಳು ಬಹುಕಾಲ ಜನಮಾನಸದಲ್ಲಿ ಮನೆ ಮಾಡಿಕೊಳ್ಳುತ್ತವೆ. ಕರುಳಿನ ಕರೆ ಚಿತ್ರದ ಹಾಡುಗಳು ಕೂಡ ಇದಕ್ಕೆ ಹೊರತಾಗಿಲ್ಲ.
ಪಿಬಿಎಸ್ ಅವರ ಮೂರು ಚಂದದ ಗೀತೆಗಳಿವೆ. ಮೈಸೂರು ದಸರಾ ಎಷ್ಟೊಂದು ಸುಂದರ, ಕಂಡೇ ನಾ ಕಂಡೆ ಕಾಣದ ತಾಯಿಯ, ಹೊಡೆಯುವ ಕೈ ಒಂದು ಕಣ್ಣೊರೆಸುವ ಕೈ ಒಂದು… ಜಾನಕಿ ಅವರು ಕಳ್ಳೇಕಾಯ್ ಹಾಡು… ಅ ಆ ಇ ಈ ಕನ್ನಡದ ಅಕ್ಷರಮಾಲೆ (ಸುಮಿತ್ರಾ ಜೊತೆಗೆ)  ಮತ್ತು ನನ್ನವರಿಗೆ ಯಾರು ಸಾಟಿಯೇ (ಎಲ್ ಆರ್ ಈಶ್ವರಿ ಜೊತೆಗೆ).


ಕಲ್ಪನಾ ಮತ್ತು ರಾಜ್ ಮಧ್ಯೆ ನಡೆಯುವ ಸಂಭಾಷಣೆ ಬಲು ಚಂದ.
ಕಲ್ಪನಾ ಮ್ಯಾನರಿಸಂ ಬಲು ವಿಶಿಷ್ಟ. ಈ ಕಥೆಯನ್ನು ಪುಟ್ಟಣ್ಣ ಅವರು ಅಣ್ಣಾವ್ರಿಗೇ ಬರೆದಂತೆ ಇದೆ. ನಗು ಅಳು ಪ್ರೇಮ ಕೋಪ ಎಲ್ಲಾ ಎಮೋಶನ್‌ಗಳನ್ನು  ಬಲು ಸುಂದರವಾಗಿ ನಿಭಾಯಿಸಿದ್ದಾರೆ ನಟ ಸಾರ್ವಭೌಮ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply