ನಟ ದುನಿಯಾ ವಿಜಯ್ ನಿರ್ದೇಶಿ ನಟಿಸುತ್ತಿರುವ, K. P ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ತಂಡದಿಂದ ಇಂದು ಬೆಳಗ್ಗೆ ಮಜೆಸ್ಟಿಕ್ನ ನರ್ತಕಿ ಚಿತ್ರಮಂದಿರ ಎದುರು ಚಿತ್ರದ ಕಾರ್ಮಿಕರಿಗೆ ಮತ್ತು ತಂತ್ರಜ್ಞ ತಂಡದವರಿಗೆ ರೇಷನ್ಕಿಟ್ಹಂಚಲಾಯಿತು. ಇದಕ್ಕೂ ಮುನ್ನ ಚಿತ್ರತಂಡ ಸಾಮಾನ್ಯರಿಗೆ ರಾಜಾಜಿನಗರದ ರಾಮಮಂದಿರದ ಬಳಿ ಕಿಟ್ಹಂಚಲಾಗಿತ್ತು.
ಇಂದು ಕಿಟ್ಹಂಚುವ ಮುನ್ನ ಚಿತ್ರತಂಡ ಹಾಗೂ ನಟ ದುನಿಯಾ ವಿಜಯ್ ಅಗಲಿದ ಸ್ನೇಹಿತ ನಟ ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 2 ನಿಮಿಷಗಳ ಮೌನಚರಣೆ ಮಾಡಿದರು ಜೊತೆಗೆ ಅಲ್ಲೇ ಪಕ್ಕದಲ್ಲೇ ವೃತ್ತಡದಲ್ಲಿ ಇದ್ದ ಡಾ. ರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
P. Ghanashyam
ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ.
ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.
ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ.
ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ