ಪರಾರಿ

ಕನ್ನಡ ಚಿತ್ರ : ಪರಾರಿ (೨೦೧೩)

ತಾರಾಗಣ: ಶೃಂಗ, ಶ್ರೀಶಾಂತ್, ಬುಲೆಟ್ ಪ್ರಕಾಶ್

ನಿರ್ದೇಶಕ: ಕೆ.ಎಮ್.ಚೈತನ್ಯ

ಎಡಬಿಡಂಗಿಗಳ ಕಾಮಿಡಿ ಜರ್ನಿಯೇ ಪರಾರಿ

    ಈ ಚಿತ್ರದಲ್ಲಿ ಮೂವರು ನಾಯಕರಿದ್ದು ಜವಾಬ್ದಾರಿಯೇ ಇಲ್ಲದ ಕೋತಿಗಳು ಏನೋ ಮಾಡಲು ಹೋಗಿ ಮಾಡಿಕೊಳ್ಳುವ ಎಡವಟ್ಟುಗಳ ಆಧಾರದ ಮೇಲೆ ಈ ಕಥೆಯನ್ನು ರಚಿಸಲಾಗಿದೆ. ಒಬ್ಬ ಸ್ವಾಮಿಯ ಸಲಹೆಯಂತೆ ಆಂದ್ರ ಪ್ರದೇಶದ ಕಾಮಾಟಿಪುರ ಎಂಬ ಗ್ರಾಮಕ್ಕೆ ಹೋಗುತ್ತಾರೆ. ಅಲ್ಲಿಗೆ ಮಜಾ ಮಾಡಲು ಹೋದ ಈ ಮೂವರು ನಾಯಕರು ಅಲ್ಲಿಯ ಹುಡುಗಿಯರ ಪ್ರೀತಿಯಲ್ಲಿ ಬಿದ್ದು ಅವರೊಂದಿಗೆ ಅಲ್ಲಿಂದ ಪರಾರಿಯಾಗುತ್ತಾರೆ.

ಇದೇ ಸಂದರ್ಭದಲ್ಲಿ ತಗಲಿಕೊಳ್ಳುವ ಶವದಿಂದ ಇವರು ಪಡುವ ತೊಂದರೆ,ಮಾರ್ಗದ ಮಧ್ಯದಲ್ಲಿ ಪೋಲೀಸ್ ಇನ್ಸಪೆಕ್ಟರ್ ಶರತ್ ಲೋಹಿತಾಶ್ವ ಕಣ್ಣಿಗೆ ಬಿದ್ದು ಪಡಬಾರದ ತೊಂದರೆಯನ್ನು ಪಡುತ್ತಾರೆ. ಈ ಚಿತ್ರದಲ್ಲಿ ಕಾಮಿಡಿಯೇ ಪ್ಲಸ್ ಪಾಯಿಂಟ್ ಆಗಿರುವುದರಿಂದ ಮುಂದೆ ನಿರೀಕ್ಷಿಸುವಂತಹ ಕುತೂಹಲವೇನು ಇಲ್ಲ.

ಚಿತ್ರದ ಮೊದಲ ಭಾಗ ವೇಗವಾಗಿ ಸಾಗಿದರೂ ದ್ವಿತೀಯಾರ್ಧದಲ್ಲಿ ವೇಗವು ಕುಂಠಿತಗೊಂಡಿದ್ದು ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಅನಗತ್ಯವಾಗಿ ಎಳೆಯಲಾಗಿದೆ. ಈ ಚಿತ್ರದಲ್ಲಿ ನಟರಾದ ಶೃಂಗ,ಶೃವಂತ್ ಮತ್ತು ಬುಲೆಟ್ ಪ್ರಕಾಶ್. ಹಾಸ್ಯದ ಹೊಳೆಯನ್ನು ಹರಿಸಿದ್ದಾರೆ.  ಮನೋರಂಜನೆಯ ದೃಷ್ಟಿಯಿಂದ ನಿರ್ಮಿಸಿದ್ದು ಈ ಚಿತ್ರದಲ್ಲಿ ಹಾಸ್ಯಕ್ಕೆ ಮನೋರಂಜನೆಗೆ, ಕೊರತೆಯಿಲ್ಲ.

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply