“🌹ಪಂಚಮ ವೇದ ಪ್ರೇಮದ ನಾದ ಪ್ರಣಯದ ಸರಿಗಮ ಭಾವಾನಂದ -ಹಾಡಿನಲ್ಲಿ ಕಾಣಿಸಿಕೊಂಡರು ಒಂದು ಸಣ್ಣ ಪಾತ್ರದಲ್ಲಿ
ನಿನದೇ ನೆನಪು ದಿನವೂ ಮನದಲ್ಲಿ ,
ನೋಡುವ ಆಸೆಯೂ ತುಂಬಿದೆ ನನ್ನಲೀ ನನ್ನಲೀ .
ಬಾನಿಗೊಂದು ಎಲ್ಲೆ ಎಲ್ಲಿದೇ ನಿನ್ನಾಸೆಗೆಲ್ಲಿ ಕೊನೆಯಿದೇ ,
ಏಕೆ ಕನಸು ಕಾಣುವೇ ನಿಧಾನಿಸೂ ನಿಧಾನಿಸೂ .
ಕಪೂ೯ರದ ಬೊಂಬೆ ನಾನು ಮಿಂಚಂತೆ ಬಳಿಬಂದೆ ನೀನು .
ಕನ್ನಡ ನಾಡಿನ ರಸಿಕರ ಮನವ ಸೂರೆಗೊಂಡಾ ನಾಯಕಿ ರಂಗನಾಯಕಿ .
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು .
ಸನ್ಯಾಸಿ ಸನ್ಯಾಸಿ ಅಜು೯ನ ಸನ್ಯಾಸಿ ಹುಸು ನಗೆಯ ,
ಹೊರ ಸೂಸಿ ಬಂದಾ ಕಳ್ಳ ವೇಶ ಧರಿಸಿ .
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ,
ನಕ್ಕು ನೀ ಸೆಳೆದಾಗ ಸೋತೇ ನಾನಾಗ .
ನಿದಿರೆಯು ಸದಾ ಏಕೋ ದೂರ ನೆಲೆಸಿದೆ ಕಣ್ಣ ತುಂಬಾ ಸಖ ನಿನ್ನ ಮುಖ .
ಓ ದ್ಯಾವ್ರೆ ನಿನ್ನ ಅಂದ ಚಂದವೇನೋ ಹೇಗೋ ನಾ ಕಾಣೆ❤
ಈ ಸಾಲುಗಳನ್ನು ಕೇಳುತ್ತಿದ್ದರೆ ನಮಗೆ ನೆನಪಾಗುವುದು ಒಬ್ಬರೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಸ್ವಾಭಾವಿಕ ಅಭಿನಯದ ಮೂಲಕ ಮನೆಮಾತಾದ ಮೋಹಕ ಕಣ್ಗಳ ಚೆಲುವೆ ಸುಂದರ ನಟಿ ಹೆಸರಿನಲ್ಲಿ ಇದೇ ರತಿ “ಆರತಿ” ರವರು.
ಪುಟ್ಟಣ್ಣ ಕಣಗಾಲ್ ರವರ ಗರಡಿಯಲ್ಲಿ ಬೆಳೆದ ಇವರು ಅನೇಕ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ಕೆಲವು ಚಿತ್ರಗಳು ಎಷ್ಟು ಸಲ ನೋಡಿದರೂ ಮತ್ತೊಮ್ಮೆ ನೋಡೋಣ ಅನ್ನಿಸುತ್ತೆ ಅವುಗಳಲ್ಲಿ
🌺ರಂಗನಾಯಕಿ – ಒಬ್ಬ ಸಾಮಾನ್ಯ ಮಹಿಳೆ ರಂಗಭೂಮಿ ಕಲಾವಿದೆಯಾಗಿ ಅವರ ಅಭಿನಯ ಬಹಳ ಚೆನ್ನಾಗಿದೆ
🌻ಶುಭ ಮಂಗಳ -ಸ್ವಾಭಿಮಾನಿ ಹೆಣ್ಣಿನ ಪಾತ್ರ ಜನ ಮೆಚ್ಚುಗೆ ಗಳಿಸಿದೆ
🍀ನಾಗರ ಹಾವು – ವಿಷ್ಣು ವಧ೯ನ್ ರವರ ಪ್ರೇಯಸಿ ಪಾತ್ರ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಕೊನೆಯಲ್ಲಿ ತಾವು ನೊಂದುಹೋಗುವ ಪಾತ್ರ ಮನೋಜ್ಞ ಅಭಿನಯ.
🍁ಗೆಜ್ಜೆ ಪೂಜೆ -ಒಂದು ಹಾಡಿನ ಸನ್ನಿವೇಶದಲ್ಲಿ ಸುಂದರ್ ಕೃಷ್ಣ ಅರಸ್ ರವರ ಮಡದಿಯಾಗಿ ನಿವ೯ಹಿಸಿದ ಪಾತ್ರ.
🌞ಕಥಾ ಸಂಗಮ – ಕುರುಡು ಹೆಣ್ಣು ಮಗಳಾಗಿ ಮಾಡಿದ ಅಭಿನಯ ಸೂಪರ್ .
ಎಡಕಲ್ಲು ಗುಡ್ಡದ ಮೇಲೆ – ಇವರಿಗೂ ಮತ್ತು ಜಯಂತಿ ರವರ ನಡುವೆ ಪೈಪೋಟಿ ಪಾತ್ರ ನಾಯಕ ನಟ ಚಂದ್ರಶೇಖರ ರವರನ್ನು ಒಲಿಸಲು ಹಾಗೂ ಜನಪ್ರಿಯ ಗೀತೆಗಳು ಅಭಿನಯ ಮೆಚ್ಚುಗೆ ಪಡೆದಿದೆ .
ಕಲಾ ದೇವಿ ಆರತಿ ರವರು ನಮ್ಮ ಆರಾಧ್ಯ ದೈವರ ಜೊತೆಯಲ್ಲಿ ಕೂಡ ಪಾತ್ರ ಮಾಡಿದ್ದಾರೆ. ಅವುಗಳಲ್ಲಿ ಕೆಲವು
❤ಪ್ರೇಮದ ಕಾಣಿಕೆ – ಅಣ್ಣಾವ್ರನ್ನು ಅನುಮಾನಾಸ್ಪದವಾಗಿ ನೋಡಿ ಕೊನೆಯಲ್ಲಿ ನಿಜ ಗೊತ್ತಾಗುವ ಪಾತ್ರ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
🌈ಬಂಗಾರದ ಪಂಜರ – ಈ ಚಿತ್ರವಂತೂ ಎಂದೂ ಮರೆಯಲಾಗದು ಅಪ್ಪಾಜಿ ಮತ್ತು ಆರತಿ ರವರ ಪಾತ್ರ ಕಥೆಗೆ ತಕ್ಕ ಹಾಗೆ ನೈಜ ಅಭಿನಯದ ಜೊತೆ ನಗುವಿನ ಕಚಗುಳಿ ಹಾಡು ಕುಣಿತ ಹಳ್ಳಿಯ ಭಾಷೆ ಎಲ್ಲವೂ ಸೂಪರ್ ಇಬ್ಬರ ಅಭಿನಯ ಜನ ಮೆಚ್ಚುಗೆ ಪಡೆದಿದೆ.
☔ರಾಜ ನನ್ನ ರಾಜ – ಹಿಂದಿನ ಜನ್ಮದ ಪ್ರೇಮ ಕಥೆ ಹಾಡುಗಳು ಮೆಲಕು ಹಾಕುತ್ತವೆ.
🍀ದಾರಿ ತಪ್ಪಿದ ಮಗ -ಅಭಿನಯ ಚೆನ್ನಾಗಿ ಮಾಡಿದ್ದಾರೆ
🍓ಕಸ್ತೂರಿ ನಿವಾಸ – ಅಣ್ಣಾವ್ರ ಹೆಂಡತಿಯಾಗಿ ಅತಿಥಿ ಪಾತ್ರ ಒಂದು ಜನಪ್ರಿಯ ಹಾಡಿನಲ್ಲಿ.
🏋ಬಹದ್ದೂರ್ ಗಂಡು -ಅಭಿನಯ ಮಾಡಿದ್ದಾರೆ
🐎ಸಿಪಾಯಿ ರಾಮು -ಅಣ್ಣಾವ್ರ ಪ್ರೇಯಸಿಯ ಪಾತ್ರದ ಜೊತೆ ಅಭಿನಯ .
ಇವರಲ್ಲದೇ ಶ್ರೀನಾಥ್. ಜೈ ಜಗದೀಶ್. ಅನಂತ್ ನಾಗ್. ಶಂಕರ್ ನಾಗ್. ಅಂಬರೀಷ್ ಮತ್ತು ಇನ್ನೂ ಹಲವಾರು ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ.
ಇವರು ಮಿಠಾಯಿ ಮನೆ ಚಿತ್ರದ ನಿದೇ೯ಶಕರು ತಮ್ಮ ಮಗಳ ಚಿತ್ರ ಕಥೆಗೆ. ಯಶಸ್ವಿನಿ ಇವರ ಮಗಳು.

💐ನಾಗರಹಾವು ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಕನಾ೯ಟಕ ಸಕಾ೯ರದಿಂದ ಗೌರವ.
💙ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಸರ್ಕಾರ.
ಉಪಾಸನೆ ಚಿತ್ರದ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.
💜ಕಥಾ ಸಂಗಮ ಚಿತ್ರದ ಅತ್ಯುತ್ತಮ ನಟಿ ಕನಾ೯ಟಕ ಸಕಾ೯ರ.
🌹ಧಮ೯ಸೆರೆ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಫಿಲಂ ಫೇರ್ ಮತ್ತು ಕನಾ೯ಟಕ ಸಕಾ೯ರ ಪ್ರಶಸ್ತಿ.
🎭ರಂಗನಾಯಕಿ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟಿ ಫಿಲಂ ಫೇರ್ ಮತ್ತು ಕನಾ೯ಟಕ ಸಕಾ೯ರ ಪ್ರಶಸ್ತಿ.
👑ಮಿಠಾಯಿ ಮನೆ ಚಿತ್ರದ ನಿದೇ೯ಶನಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಎಂದು ಪರಿಗಣಿಸಿ ಕನಾ೯ಟಕ ಸಕಾ೯ರ ಪ್ರಶಸ್ತಿ ಗೌರವ.
ತುಂಬಾ ವಷ೯ ನಮ್ಮ ಕನ್ನಡ ಚಿತ್ರರಂಗ ಆಳಿದವರು ಈಗ ತಮ್ಮದೇ ಜೀವನ ನಡೆಸಲು ಮಗಳ ಜೊತೆ ವಿದೇಶದಲ್ಲಿದ್ದಾರೆ ಹಲವಾರು ಅಭಿಮಾನಿಗಳ ಆಸೆ ಇವರು ಮತ್ತೆ ತಾಯ್ನಾಡಿಗೆ ಬಂದು ಅಭಿಮಾನಿಗಳಿಗೆ ದಶ೯ನ ನೀಡಲಿ ಸಾಧ್ಯವಾದಲ್ಲಿ ಅಭಿನಯವನ್ನು ಕೂಡ ಮಾಡಲಿ ಎಂಬುದು.
ಪ್ರಿಯ ಮಿತ್ರರೆ ನನಗೆ ತೋಚಿದ ಹಾಗೆ ಬರೆದಿದ್ದೇನೆ ನೀವು ಲೇಖನ ಓದಿ ನಿಮ್ಮ ಅಭಿಪ್ರಾಯ ಅನಿಸಿಕೆ ನಿಮ್ಮ ಪದಗಳಲ್ಲಿ ತಿಳಿಸಿದರೆ ನಾನು ಬರೆದಿರೋದಕ್ಕೂ ಸಾಥ೯ಕ ಅನ್ನಿಸುತ್ತದೆ.