“ರೀಲ್ ವಿಲ್ಲನ್ ರಿಯಲ್ ಲೈಫ್ನಲ್ಲಿ ಹೀರೊ ಆಗ್ಬಿಟ್ರು”

ನೂರಾರು ಸಿನಿಮಾ ಕಲಾವಿದರು ಈ ಕೊರೊನಾದ ತುರ್ತು ಪರಿಸ್ತಿತಿಯಲ್ಲಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ..

ಬಾಲಿವುಡ್ ನ ಬ್ಯಾಡಿ ಅಂತಲೇ ಕರೆಯಲ್ಪಡುವ ನಟ “ಸೋನು ಸೂದ್” ಇಡೀ ದೇಶವೇ ಮೆಚ್ಚುವ ಕೆಲಸ ಮಾಡಿದ್ದಾರೆ. ದೇಶದ ನಾನಾ ಭಾಗದಿಂದ ಮಹಾನಗರಿಗಳಿಗೆ, ವಲಸೆ   ಬಂದಿರುವ   ಬಡ ಕಾರ್ಮಿಕರನ್ನು ಅವರ ಸ್ವಂತ ಊರಿಗೆ, ವಿಳಾಸಕ್ಕೆ ಉಚಿತವಾಗಿ ಬಸ್ ಮತ್ತು ಟ್ರೈನ್ ಮುಖಾಂತರ ಕ್ಷೇಮವಾಗಿ ಕಳುಹಿಸಿದ್ದಾರೆ, ಜೊತೆಗೆ ಪ್ರಯಾಣದ ವೇಳೆ ಅಗತ್ಯವಿರುವ ಅವಶ್ಯ ವಸ್ತುಗಳು ಹಾಗೂ ಊಟದ ಕಿಟ್ ಕೂಡ ಒದಗಿಸಿದ್ದಾರೆ.

ಎಲ್ಲಾ ವೆಚ್ಚವನ್ನು ತಾವೇ ಭರಿಸಿದ್ದಾರೆ “ಸೋನು ಸೂದ್”.ಬಾಂಬೆ, ಡೆಲ್ಲಿ ಮತ್ತು ಪುಣೆಯಿಂದ  ದೇಶದ ಬೇರೆ ಬೇರೆ ರಾಜ್ಯಗಳಿಗೆ( ಬಿಹಾರ್, ಮಧ್ಯ ಪ್ರದೇಶ, ಛತ್ತೀಸ್ಘರ್,ಉತ್ತರ ಪ್ರದೇಶ,ಅಸ್ಸಾಂ) ಜನರನ್ನ ಸಾಗಿಸುವುದಕ್ಕೆ ಕಾರಣಕರ್ತರಾಗಿದ್ದಾರೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಖುದ್ಧು ಅವರೇ ನಿಂತು ಸದ್ದಿಲದೇ ಮಾಡಿದ್ದಾರೆ.

ಕೋಟ್ಯಾ0ತರ ರೂಪಾಯಿ ಖರ್ಚು ಮಾಡಿ ಹಲವರ ಬದುಕಲ್ಲಿ ಆನಂದಕ್ಕೆ,ಜೀವನದಲ್ಲಿ ವಶ್ವಾಸಕ್ಕೆ ಆಸ್ಪದ ಮಾಡಿಕೊಟ್ಟಿದ್ದಾರೆ..  ಕನ್ನಡದಲ್ಲಿ ” ವಿಷ್ಣುವರ್ಧನ” ಮತ್ತು ತೆಲುಗಿನ ” ಅರುಂಧತಿ”,ದಬಾಂಗ್ ಸೇರಿದಂತೆ ಇನ್ನು  ಅನೇಕ ಸಿನಿಮಾದಲ್ಲಿ ಇವರನ್ನು ನಾವು ಪ್ರಮುಖ ವಿಲ್ಲನ್ ಪಾತ್ರದಲ್ಲಿ ಕಂಡದ್ದೀವಿ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply