ಅಪ್ಪು ಅವರ ಸಿನಿಮಾಗಳು ಅಂದ್ರೆ ಅಲ್ಲಿ ಖಂಡಿತ ಒಳ್ಳೆ ಮನೋರಂಜನೆ ಜೊತೆಗೆ ಒಂದು ಮನ ಮುಟ್ಟುವ ಅನುಭವವು ಇದ್ದೆ ಇರುತ್ತದೆ. ಸಿನಿಮಾದ ಕಥೆ ಹಾಗೂ ತಂತ್ರಜ್ಞರನ್ನ ಆಯ್ಕೆ ಮಾಡುವಲ್ಲಿ ಹೆಚ್ಚು ಕಾಳಜಿ ವಹಿಸುವ ಪವರಸ್ಟಾರ್ ಇದೀಗ ಇಬ್ಬರು ಪ್ರಭಾವಿ ಪ್ರತಿಭಾವಂತ ನುರ್ದೇಶಕರ ಜೊತೆಗೆ ಕೆಲಸ ಮಾಡಲಿದ್ದಾರೆ. ಗಜಕೇಸರಿ ಮತ್ತು ಹೆಬ್ಬುಲಿ ಖ್ಯಾತಿಯ ನಿರ್ದೇಶಕ ಕೃಷ್ಣ ಅವರು ಅತಿ ಶೀಘ್ರದಲ್ಲೇ ಪುನೀತ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ, ಅದಾದ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಲಿದೆ. “ಜೊತೆ ಜೊತೆಯಲಿ” ಸಾರಥಿ ಮತ್ತು “ನವಗ್ರಹ” ಚಿತ್ರಗಳ ಮೂಲಕ ಒಬ್ಬ ಪರಿಪೂರ್ಣ ನಿರ್ದೇಶಕನಾಗಿ ಗುರುತಿಸಿಕೊಂಡ ದಿನಕರ್,ಪುನೀತ್ ಅವ್ರಿಗೆ ಒಂದು ಒಳ್ಳೆ ಫ್ಯಾಮಿಲಿ ಸಬ್ಜೆಕ್ಟ್ ತಯಾರಿಸಿದ್ದಾರೆ ಎಂಬುದ ತಿಳಿಸಿದ್ದಾರೆ. ಹೊಸ ಅಲೆಯನ್ನ ತರಲು ಹೊಸ ಕಾಂಬಿನೇಷನ್ಗಳ ಅಗತ್ಯವಿರುತ್ತವೆ ಎಂದು ನಂಬುವ ಕಾಲವಿದು, ಆ ನಂಬಿಕೆಯ ಜೊತೆ ಹೆಜ್ಜೆ ಹಾಕುತ್ತಾ ಪವರ್ ಸ್ಟಾರ್ ಸಾಗಿದ್ದರೆ…
ಏಪ್ರಿಲ್ 1 ಕ್ಕೆ ಬಿಡುಗಡೆಯಾಗಲಿರುವ ಯುವರತ್ನ ಸಿನಿಮಾಗೆ ಭಾರಿ ದೊಡ್ಡ ನಿರೀಕ್ಷೆಯ ಇದೆ, ಸಿನಿಮಾ ತಂಡ ಕಳೆದ ವಾರ ಕೋಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು.
ಯುವರತ್ನ ಸಿನಿಮಾದ ಟ್ರೈಲರ್ ಮತ್ತು ಹಾಡುಗಳಿಂದ ಈಗಾಗ್ಲೇ ಸಾಕಷ್ಟು ಪ್ರಚಾರ ದೊರಕಿದೆ, ಅದನ್ನ ಉನ್ನತ ಹಂತಕ್ಕೆ ತಲುಪಿಸಲು ಮುಂದಿನ ವಾರ ಮೈಸೂರಿನಲ್ಲಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ. ಅಭಿಮಾನಿಗಳು ಸಾವಿರ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.
ತುಂಬಾ ಚನ್ನಾಗಿ ಇರುತ್ತದೆ