“ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು
ನಂಬಿ ಕೆಟ್ಟವರಿಲ್ಲವೋ”
ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ, ಕಾರಣ ವರನಟ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ನಮ್ಮ ಆಣ್ಣಾವೃ ಮತ್ತು ರೆಬಲ್ ಸ್ಟಾರ್ ಅಂಬರೀಷ್ ರವರು ತಮ್ಮ ಕನಸನ್ನು ಈಡೇರಿಸಿಕೊಂಡ ದೊರೈ ಭಗವಾನ್ ನಿದೇ೯ಶನದ ಅದ್ಧೂರಿ ತಾರಾಗಣದ ಮಹೋನ್ನತ ಚಿತ್ರ ಅದುವೇ “ಒಡಹುಟ್ಟಿದವರು “

ಅಪ್ಪಾಜಿ (ಅಣ್ಣ ಪಾತ್ರ) ಮಾಧವಿ (ಮಡದಿ ಪಾತ್ರ) , ಅಂಬರೀಷ್ , ಕೆ. ಎಸ್ ಅಶ್ವಥ್ (ತಂದೆ ಪಾತ್ರ) ಸುಖೀ ಕುಟುಂಬ, ಊರ ಪಂಚಾಯ್ತಿ ಮುಖ್ಯಸ್ಥರು (ಕೆ. ಎಸ್ ಅಶ್ವಥ್), ನಟಭಯಂಕರ ವಜ್ರಮುನಿ (ಶ್ರೀಶಾಂತಿ ತಂದೆ), ಶ್ರೀಶಾಂತಿ (ವಜ್ರಮುನಿ ಮಗಳು), ಬಾಲಕೃಷ್ಣ, ಸುಧೀರ್, ಮತ್ತಿತರ ಕಲಾವಿದರ ಬಳಗ.
ಅಣ್ಣಾವ್ರ ಸುಖೀ ಕುಟುಂಬ, ಪ್ರಾರಂಭದಲ್ಲಿ ಎತ್ತಿನ ಗಾಡಿ ಪಂದ್ಯದಲ್ಲಿ ಖಳನಾಯಕ ವಜ್ರಮುನಿ ಚೇಸಿಂಗ್ ಆಟದಲ್ಲಿ ಮೋಸ ಮಾಡಿದರೂ ಅಣ್ಣನ ಗೆಲುವು, ಖಳನಟನಿಗೆ ಮುಖಭಂಗ. ತಮ್ಮನೀಗೆ ಅಣ್ಣನೆಂದರೆ ಪಂಚಪ್ರಾಣ, ತಂದೆಗೆ ತಕ್ಕ ಮಗ, ತಂದೆ ಹೇಳಿದಂತೆ ಮನೆ ನಡೆಸಿಕೊಂಡು ಹೋಗುವ ಅಣ್ಣಾವೃ, ಕುಟುಂಬದ ಸೊಸೆ ನೆಚ್ಚಿನ ಮಡದಿಯಾಗಿ ಮಾಧವಿ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ, ತಮ್ಮನಿಗೆ ಬೇರೆ ಕಡೆ ಕೆಲಸ ಸಿಕ್ಕಾಗ ಅಣ್ಣನಿಗೆ ತಿಳಿಸುವಾಗ ಮಣ್ಣಿನ ಮಹತ್ವದ ಹಾಡು ಮತ್ತು ನಿಜವಾದ ಜೀವನದ ಶೈಲಿ ತಿಳಿಸುವಿಕೆಯಿಂದ ಅಣ್ಣನಂತೆ ತಮ್ಮನೂ ಕೂಡ ರೈತರಾಗಿ ಬದಲಾಗುವುದು, ಜಾತ್ರೆಯಲ್ಲಿ ನಾಯಕಿ ಶ್ರೀಶಾಂತಿ ಪ್ರೇಮದ ಬಲೆಯಲ್ಲಿ ಬೀಳುವುದು, ಅತ್ತಿಗೆ ಹತ್ತಿರ ತಿಳಿಸಿ ನಂತರ ಅಣ್ಣರು ನಾಯಕಿಯ ಮನೆಗೆ ಹೋದಾಗ ಖಳನಾಯಕ ವಜ್ರಮುನಿ ಜೊತೆ ಹೊಡೆದಾಟ, ನಂತರ ಇಬ್ಬರಿಗೂ ಮದುವೆ ಮಾಡಿಸುವುದು.
( ಮುಂದುವರೆಯುವುದು )