ಸೋದರ ವಾತ್ಸಲ್ಯ ಧೃವತಾರೆ – ಕಲಿಯುಗ ಕಣ೯ ಸಮಾಗಮ –ಒಡಹುಟ್ಟಿದವರು

“ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು

ನಂಬಿ ಕೆಟ್ಟವರಿಲ್ಲವೋ”

ಈ ಗೀತೆಗಳ ಸಾಲುಗಳನ್ನು ಒಮ್ಮೆ ನೆನಪಿಸಿಕೊಳ್ಳಿ,  ಕಾರಣ ವರನಟ ಪದ್ಮಭೂಷಣ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರಾದ ನಮ್ಮ ಆಣ್ಣಾವೃ ಮತ್ತು ರೆಬಲ್ ಸ್ಟಾರ್ ಅಂಬರೀಷ್ ರವರು ತಮ್ಮ ಕನಸನ್ನು ಈಡೇರಿಸಿಕೊಂಡ ದೊರೈ ಭಗವಾನ್ ನಿದೇ೯ಶನದ ಅದ್ಧೂರಿ ತಾರಾಗಣದ ಮಹೋನ್ನತ ಚಿತ್ರ ಅದುವೇ “ಒಡಹುಟ್ಟಿದವರು

ಅಪ್ಪಾಜಿ (ಅಣ್ಣ ಪಾತ್ರ) ಮಾಧವಿ (ಮಡದಿ ಪಾತ್ರ) , ಅಂಬರೀಷ್ , ಕೆ. ಎಸ್ ಅಶ್ವಥ್ (ತಂದೆ ಪಾತ್ರ)  ಸುಖೀ ಕುಟುಂಬ, ಊರ ಪಂಚಾಯ್ತಿ ಮುಖ್ಯಸ್ಥರು (ಕೆ. ಎಸ್ ಅಶ್ವಥ್), ನಟಭಯಂಕರ ವಜ್ರಮುನಿ (ಶ್ರೀಶಾಂತಿ ತಂದೆ), ಶ್ರೀಶಾಂತಿ (ವಜ್ರಮುನಿ ಮಗಳು), ಬಾಲಕೃಷ್ಣ, ಸುಧೀರ್, ಮತ್ತಿತರ ಕಲಾವಿದರ ಬಳಗ.

ಅಣ್ಣಾವ್ರ ಸುಖೀ ಕುಟುಂಬ, ಪ್ರಾರಂಭದಲ್ಲಿ ಎತ್ತಿನ ಗಾಡಿ ಪಂದ್ಯದಲ್ಲಿ ಖಳನಾಯಕ ವಜ್ರಮುನಿ ಚೇಸಿಂಗ್ ಆಟದಲ್ಲಿ ಮೋಸ ಮಾಡಿದರೂ ಅಣ್ಣನ ಗೆಲುವು, ಖಳನಟನಿಗೆ ಮುಖಭಂಗ. ತಮ್ಮನೀಗೆ ಅಣ್ಣನೆಂದರೆ ಪಂಚಪ್ರಾಣ, ತಂದೆಗೆ ತಕ್ಕ ಮಗ, ತಂದೆ ಹೇಳಿದಂತೆ ಮನೆ ನಡೆಸಿಕೊಂಡು ಹೋಗುವ ಅಣ್ಣಾವೃ, ಕುಟುಂಬದ ಸೊಸೆ ನೆಚ್ಚಿನ ಮಡದಿಯಾಗಿ ಮಾಧವಿ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ, ತಮ್ಮನಿಗೆ ಬೇರೆ ಕಡೆ ಕೆಲಸ ಸಿಕ್ಕಾಗ ಅಣ್ಣನಿಗೆ ತಿಳಿಸುವಾಗ ಮಣ್ಣಿನ ಮಹತ್ವದ ಹಾಡು ಮತ್ತು ನಿಜವಾದ ಜೀವನದ ಶೈಲಿ ತಿಳಿಸುವಿಕೆಯಿಂದ ಅಣ್ಣನಂತೆ ತಮ್ಮನೂ ಕೂಡ ರೈತರಾಗಿ ಬದಲಾಗುವುದು,  ಜಾತ್ರೆಯಲ್ಲಿ ನಾಯಕಿ ಶ್ರೀಶಾಂತಿ ಪ್ರೇಮದ ಬಲೆಯಲ್ಲಿ ಬೀಳುವುದು, ಅತ್ತಿಗೆ ಹತ್ತಿರ ತಿಳಿಸಿ ನಂತರ ಅಣ್ಣರು ನಾಯಕಿಯ ಮನೆಗೆ ಹೋದಾಗ ಖಳನಾಯಕ ವಜ್ರಮುನಿ ಜೊತೆ ಹೊಡೆದಾಟ, ನಂತರ ಇಬ್ಬರಿಗೂ ಮದುವೆ ಮಾಡಿಸುವುದು.

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply